ಆ್ಯಪ್ನಗರ

ನಿಪ್ಪಾಣಿ-ಮುಧೋಳ ರಸ್ತೆಯ ಟೋಲ್‌ ಸಂಗ್ರಹಣಾ ಕೇಂದ್ರ ಮುಚ್ಚಲು ಆಗ್ರಹ

ಚಿಕ್ಕೋಡಿ: ನಿಪ್ಪಾಣಿ-ಮುಧೋಳ ರಸ್ತೆಯಲ್ಲಿ ಆರಂಭಿಸಿರುವ ...

Vijaya Karnataka 1 Nov 2019, 5:00 am
ಚಿಕ್ಕೋಡಿ: ನಿಪ್ಪಾಣಿ-ಮುಧೋಳ ರಸ್ತೆಯಲ್ಲಿಆರಂಭಿಸಿರುವ ಟೋಲ್‌ ಸಂಗ್ರಹಣಾ ಕೇಂದ್ರಗಳನ್ನು ರೈತರಿಗೆ ಅನುಕೂಲ ಮಾಡುವ ಉದ್ದೇಶದಿಂದ ಬಂದ್‌ ಮಾಡುವಂತೆ ಒತ್ತಾಯಿಸಿ ಗುರುವಾರ ನಾನಾ ಸಂಘಟನೆಗಳ ಸದಸ್ಯರು ಉಪವಿಭಾಗಾಧಿಧಿಕಾರಿ ಮುಖಾಂತರ ಸರಕಾರಕ್ಕೆ ಮನವಿ ಸಲ್ಲಿಸಿದರು.
Vijaya Karnataka Web 31CKD5_53


ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ, ಕರ್ನಾಟಕ ರಕ್ಷಣಾ ವೇದಿಕೆ, ಜಯ ಕರ್ನಾಟಕ ಸಂಘ, ಲಾರಿ ಮಾಲಿಕರು ಮತ್ತು ಚಾಲಕರ ಸಂಘ ಹಾಗೂ ಜಿಲ್ಲಾಹೋರಾಟ ಸಮಿತಿ ಸದಸ್ಯರು, ಪದಾಧಿಕಾರಿಗಳು ಮನವಿ ಸಲ್ಲಿಸಿದ ನಿಯೋಗದಲ್ಲಿದ್ದರು.

ಚಿಕ್ಕೋಡಿ ಒಂದೇ ತಾಲೂಕಿನಲ್ಲಿಕೇವಲ 20 ಕಿಮೀ ಅಂತರದಲ್ಲಿಎರಡು ಕಡೆ ಟೋಲ್‌ ಸಂಗ್ರಹಣಾ ಕೇಂದ್ರಗಳನ್ನು ಆರಂಭಿಸಿದ್ದು, ಇದರಿಂದ ನೆರೆ ಮತ್ತು ಬರದ ಸಂಕಷ್ಟದಲ್ಲಿಜನ ತತ್ತರಿಸಿ ಹೋಗಿರುವ ಸಮಯದಲ್ಲಿಟೋಲ್‌ ಸಂಗ್ರಹ ಹೇರುತ್ತಿರುವುದು ಸಾಮಾನ್ಯ ಹೊರೆಯಾಗಿದೆ. ಚಿಕ್ಕೋಡಿ ತಾಲೂಕಿನ ಜನರಿಗೆ ತೀವ್ರ ಅನ್ಯಾಯವಾಗುತ್ತಿದೆ. ಆದ್ದರಿಂದ ಸರಕಾರ ಕೂಡಲೇ ಟೋಲ್‌ ಕೇಂದ್ರಗಳನ್ನು ಬಂದ್‌ ಮಾಡಬೇಕು. ಈ ಭಾಗದ ರೈತಾಪಿ ವರ್ಗದವರಿಗೆ ಅನುಕೂಲ ಮಾಡಿಕೊಡಬೇಕು ಎಂದು ಮನವಿಯಲ್ಲಿಒತ್ತಾಯಿಸಲಾಗಿದೆ.

ಚಿಕ್ಕೋಡಿ ತಾಲೂಕಿನಲ್ಲಿರುವ ಎರಡೂ ಟೋಲ್‌ ಸಂಗ್ರಹಣಾ ಕೇಂದ್ರಗಳನ್ನು ನ. 5 ರೊಳಗೆ ಬಂದ್‌ ಮಾಡದಿದದ್ದಲ್ಲಿಅಂದು ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ವಿವಿಧ ಸಂಘಟನೆಗಳು ಸೇರಿ ರಸ್ತೆ ಬಂದ್‌ ಮಾಡಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ನಿಯೋಗದ ಸದಸ್ಯರು ಎಚ್ಚರಿಕೆ ನೀಡಿದರು.

ಕರ್ನಾಟಕ ರೈತ ಸಂಘದ ವಕ್ತಾರ ತ್ಯಾಗರಾಜ ಕದಮ ಮಾತನಾಡಿ, ಸರಕಾರ ಟೋಲ್‌ ಸಂಗ್ರಹಣಾ ಕೇಂದ್ರ ಆರಂಭಿಸಬೇಕಾದರೂ ಅದಕ್ಕೊಂದು ನಿಯಮವಿದೆ. ಆ ನಿಯಮದ ಪ್ರಕಾರ ಮಾಡಬೇಕಿತ್ತು. ಆದರೆ ಈಗ ಕೇವಲ 20 ಕಿಮೀ ಅಂತರದಲ್ಲಿಮಾಡಿರುವ ಟೋಲ್‌ ಸಂಗ್ರಹಣಾ ಕೇಂದ್ರಗಳು ಅವೈಜ್ಞಾನಿಕವಾಗಿದ್ದು, ಈ ರಸ್ತೆ ನಿರ್ಮಾಣಕ್ಕೆ ಸರಕಾರ ಹಣ ಕೊಟ್ಟಿದೆ. ಆದ್ದರಿಂದ ಕೂಡಲೇ ಈ ಎರಡು ಟೋಲ್‌ ಸಂಗ್ರಹಣಾ ಕೇಂದ್ರಗಳನ್ನು ಬಂದ್‌ ಮಾಡಬೇಕು ಎಂದರು.

ಬಸವರಾಜ ಪಾಶ್ಚಾಪುರೆ, ರಮೇಶ ಕರನೂರೆ, ರಾಜು ಮಾಳಿ, ಸದಾಶಿವ ಬಾಗೇವಾಡಿ, ಪರಶುರಾಮ ಕವಟಗಿ, ಬಸವಣ್ಣಿ ನಾವಿ, ಕೃಷ್ಣಾ ಮೋರೆ, ಕರೆಪ್ಪಾ ಇಟನಾಳೆ, ಎಸ್‌.ಕೆ.ಮಾಳಿ, ಎಸ್‌.ಆರ್‌.ಮೋರೆ, ನರಸಿಂಗ ಕವಟಗಿ, ಕೆ.ಎಸ್‌.ಖಡ್ಡಗೋಳ, ಶಿವರಾಜ ಕದಮ್‌ ಮುಂತಾದವರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ