ಆ್ಯಪ್ನಗರ

ಕೋಚಿಂಗ್‌ ಕ್ಲಾಸ್‌ ಅನುಮತಿ ರದ್ದು

ಅಥಣಿ: ಪಟ್ಟಣದ ಹೊರವಲಯದ ಸಿದ್ದೇಶ್ವರನಗರದ ವಿಜಯಪುರ ರಸ್ತೆಯಲ್ಲಿರುವ ಸರ್ವ ಸ್ವತಂತ್ರ ವಿದ್ಯಾಸಂಸ್ಥೆ (ತೆಲಸಂಗ)ಯ ನ್ಯೂ ಎಕ್ಸ್‌ಲಂಟ್‌ ಕೋಚಿಂಗ್‌ ಕ್ಲಾಸ್‌ನ ...

Vijaya Karnataka 17 Jan 2020, 5:00 am
ಅಥಣಿ: ಪಟ್ಟಣದ ಹೊರವಲಯದ ಸಿದ್ದೇಶ್ವರನಗರದ ವಿಜಯಪುರ ರಸ್ತೆಯಲ್ಲಿರುವ ಸರ್ವ ಸ್ವತಂತ್ರ ವಿದ್ಯಾಸಂಸ್ಥೆ (ತೆಲಸಂಗ)ಯ ನ್ಯೂ ಎಕ್ಸ್‌ಲಂಟ್‌ ಕೋಚಿಂಗ್‌ ಕ್ಲಾಸ್‌ನ ಅನುಮತಿ ರದ್ದುಪಡಿಸಿ ಚಿಕ್ಕೋಡಿ ಡಿಡಿಪಿಐ ಎಂ.ಎಲ್‌.ಹಂಚಾಟೆ ಆದೇಶ ಹೊರಡಿಸಿದ್ದಾರೆ.
Vijaya Karnataka Web cancellation of coaching class permission
ಕೋಚಿಂಗ್‌ ಕ್ಲಾಸ್‌ ಅನುಮತಿ ರದ್ದು


ಕಳೆದ ತಿಂಗಳು ಕೋಚಿಂಗ್‌ ಕ್ಲಾಸ್‌ನವರು ಶೈಕ್ಷಣಿಕ ಪ್ರವಾಸವೆಂದು ವಿದ್ಯಾರ್ಥಿಗಳನ್ನು ಮಂಗಳೂರು ಮತ್ತಿತರೆಡೆ ಕರೆದುಕೊಂಡು ಹೋಗಿದ್ದರು. ಈ ಸಂದರ್ಭದಲ್ಲಿ5ನೇ ತರಗತಿ ವಿದ್ಯಾರ್ಥಿ ಸಂದೇಶ ಶಿಂಧೆ ಎಂಬ ವಿದ್ಯಾರ್ಥಿ ಮಂಗಳೂರಿನಲ್ಲಿಆಕಸ್ಮಿಕವಾಗಿ ಮೃತಪಟ್ಟಿದ್ದ. ಈ ಕುರಿತು ವಿಚಾರಣೆ ನಡೆಸಿದ ಇಲಾಖೆ ಅಧಿಕಾರಿಗಳು ನ್ಯೂ ಎಕ್ಸ್‌ಲಂಟ್‌ ಕೋಚಿಂಗ್‌ ಕ್ಲಾಸಿಗೆ ಭೇಟಿ ನೀಡಿ ಪರಿಶೀಲಿಸಿದಾಗ ಯಾವುದೇ ಅನುಮತಿ ಮತ್ತು ಮಾಹಿತಿ ಇಲ್ಲದೆ ಮಕ್ಕಳನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗಿದ್ದು ಸಾಬೀತಾಗಿತ್ತು. ಕರ್ನಾಟಕ ಶಿಕ್ಷಣ ಇಲಾಖೆಯ ಅಧಿನಿಯಮ 1983ರನ್ವಯ ಅನುಮತಿ ನಿಯಮ3,4,5 ಮತ್ತು 9ನ್ನು ಸಂಸ್ಥೆ ಉಲ್ಲಂಘನೆ ಮಾಡಿರುವುದರಿಂದ ಮಕ್ಕಳ ಶಿಕ್ಷಣದ ಭವಿಷ್ಯದ ಹಿತದೃಷ್ಟಿಯಿಂದ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಸಂಸ್ಥೆಗೆ ಸಂಬಂಧಿಸಿದ ನೋಂದಣಿ, ಅನುಮತಿ ಆದೇಶ ರದ್ದುಪಡಿಸಿ ಡಿಡಿಪಿಐ ಆದೇಶ ಹೊರಡಿಸಿದ್ದಾರೆ.

ಇಲಾಖೆ ಅನುಮತಿ ಇಲ್ಲದೆ ಕೋಚಿಂಗ್‌ ಕ್ಲಾಸ್‌ ಮತ್ತು ವಸತಿ ಶಾಲೆ ನಡೆಸಬಾರದು. ಒಂದು ವೇಳೆ ನಡೆಸುತ್ತಿದ್ದರೆ ಅಂತಹವರ ವಿರುದ್ಧ ಪೊಲೀಸ್‌ ಕೇಸ್‌ ದಾಖಲಿಸಲಾಗುವುದು.
- ಎಂ.ಬಿ.ಮೊರುಟಗಿ, ಬಿಇಒ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ