ಆ್ಯಪ್ನಗರ

ಕ್ಯಾನ್ಸರ್‌ ಗಡ್ಡೆಗೆ ಶಸ್ತ್ರಚಿಕಿತ್ಸೆ

ವಿಕ ಸುದ್ದಿಲೋಕ 20 Apr 2017, 2:00 am

ಬೆಳಗಾವಿ: ಇಲ್ಲಿನ ಕೆಎಲ್‌ಇ ಆಸ್ಪತ್ರೆಯ ವೈದ್ಯರು ಸತತ ನಾಲ್ಕು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿ 4 ಕಿಲೋ ಗಾತ್ರದ ಕ್ಯಾನ್ಸರ್‌ ಗಡ್ಡೆಯನ್ನು ಹೊರ ತೆಗೆದು ರೋಗಿಯ ಜೀವ ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

Vijaya Karnataka Web cancer tumor surgery
ಕ್ಯಾನ್ಸರ್‌ ಗಡ್ಡೆಗೆ ಶಸ್ತ್ರಚಿಕಿತ್ಸೆ


ತೀವ್ರ ಉಸಿರಾಟದ ತೊಂದರೆ, ವಿಪರೀತ ಕೆಮ್ಮು ಹಾಗೂ ನಿದ್ರಾಹೀನತೆಯಿಂದ ಬಳಲುತ್ತಿದ್ದ 26 ವಯಸ್ಸಿನ ಜಮಖಂಡಿಯ ಯುವಕ ಚಿಕಿತ್ಸೆಗಾಗಿ ದಾಖಲಾಗಿದ್ದ. ವೈದ್ಯರು ಈತನನ್ನು ಸಿಟಿ ಸ್ಕ್ಯಾ‌ನ್‌ ಪರೀಕ್ಷೆಗೆ ಒಳಪಡಿಸಿದಾಗ ಎದೆಗೂಡಿನಲ್ಲಿ ಗಡ್ಡೆ ಇರುವುದು ಹಾಗೂ ಮಲಿಗ್ನಂಟ ತೈಮೊಮಾ ಎಂಬ ಖಾಯಿಲೆಯಿಂದ ಬಳಲುತ್ತಿರುವುದ ಗೊತ್ತಾಯಿತು. ಡಾ. ರಿಚರ್ಡ್‌ ಸಾಲ್ಡಾನಾ ನೇತೃದ ತಂಡ ಕೂಡಲೇ ಶಸ್ತ್ರಚಿಕಿತ್ಸೆಗೆ ಇಳಿದು ಕಾರ್ಯಪೂರೈಸಿತು. ಹೃದಯದ ಮೇಲಿದ್ದ ಗಡ್ಡೆ ರಕ್ತನಾಳ ಹಾಗೂ ಎದೆ ಎಡಭಾಗವನ್ನು ಆವರಿಸಿ, ಪುಪ್ಪಸಕ್ಕೆ ಅಂಟಿಕೊಂಡಿತ್ತು. ಇಂಥ ಗಡ್ಡೆ ಜನ್ಮತಃ ಕಾಣಿಸಿಕೊಂಡು 30 ವರ್ಷ ಬೆಳೆದು ಮಧ್ಯ ವಯಸ್ಸಿನಲ್ಲಿ ತೊಂದರೆ ಮಾಡುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ. ಡಾ. ಮೋಹನ ಘಾನ, ಡಾ. ರವಿ ಘಟ್ನಟ್ಟಿ, ಡಾ. ಆನಂದ ವಗರಾಳಿ, ಡಾ. ಶರಣಗೌಡಾ ಪಾಟೀಲ, ಡಾ. ಅಭಿಜೀತ ಶಿತೋಳೆ ಶಸ್ತ್ರಚಿಕಿತ್ಸೆಗೆ ನೆರವಾದರು. ವೈದ್ಯರ ತಂಡವನ್ನು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಎಂ ವಿ ಜಾಲಿ ಅಭಿನಂದಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ