ತೆಲಸಂಗ: ''ಉಪಚುನಾವಣೆಗೆ ಅಥಣಿಯಿಂದ ಯಾರು ಸ್ಪರ್ಧಿಸುತ್ತಾರೆಂಬ ಬಗ್ಗೆ ಕ್ಷೇತ್ರದ ಜನತೆ ಪ್ರಶ್ನಿಸುತ್ತಿದ್ದಾರೆ. ಆದರೆ ರಾತ್ರಿ 12ಗಂಟೆಗೆ ಮಲಗಿದವನನ್ನು ಎಬ್ಬಿಸಿ ಕರೆದು ಸಚಿವ ಸ್ಥಾನ ಕೊಟ್ಟಿರುವಾಗ ನಾನದರ ಬಗ್ಗೆ ಯೋಚಿಸುವುದಿಲ್ಲ. ಪಕ್ಷದ ಸೂಚನೆಯಂತೆ ಮುಂದುವರಿಯುತ್ತೇನೆ'' ಎಂದು ಉಪಮುಖ್ಯಮಂತ್ರಿ ಲಕ್ಷತ್ರ್ಮಣ ಸವದಿ ಹೇಳಿದರು.
ಸಮೀಪದ ರಾಮತೀರ್ಥ ಗ್ರಾಮದ ಪಾಪನಾಶಿ ಹಳ್ಳಕ್ಕೆ 1 ಕೋಟಿ ರೂ. ವೆಚ್ಚದಲ್ಲಿನಿರ್ಮಿಸಲಾದ ಬಾಂದಾರ ಉದ್ಘಾಟಿಸಿ, ಬಾಗಿನ ಅರ್ಪಿಸಿ ಅವರು ಮಾತನಾಡಿದರು.
ಅವಕಾಶ ಸಿಕ್ಕಾಗ ಸದುಪಯೋಗಪಡಿಸಿಕೊಳ್ಳಬೇಕು. ಅಥಣಿಯಲ್ಲಿಆರ್ಟಿಒ ಕಚೇರಿ ತೆರೆದು ಚಿಕ್ಕೋಡಿಗೆ ಅಲೆಯುವುದನ್ನು ತಪ್ಪಿಸುವ ಮಹತ್ತರ ಕೆಲಸ ಮಾಡಲು ಉದ್ದೇಶಿಸಲಾಗಿದೆ. ಸದ್ಯದಲ್ಲಿಯೇ ವೈದ್ಯಕೀಯ ಕಾಲೇಜು ಕಾರ್ಯಾರಂಭಗೊಳಿಸುವ ಕೆಲಸ ಮಾಡಲಾಗುವುದು. ಇನ್ನು ಕೃಷಿ ಸಚಿವನಾಗಿ ಕೃಷಿ ವಿದ್ಯಾಲಯ ತೆರೆಯುವ ಕೆಲಸಕ್ಕೂ ಕೈ ಹಾಕಿದ್ದು ಕೊಕಟನೂರ ಗ್ರಾಮದಲ್ಲಿನ ನೂರು ಎಕರೆ ಭೂಮಿಯಲ್ಲಿಕಟ್ಟಡ ಪ್ರಾರಂಭಕ್ಕೆ ಸರಕಾರದಿಂದ ಅನುಮತಿ ಪಡೆಯಲಾಗುವುದು ಎಂದರು.
ವಿಧಾನಪರಿಷತ್ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಮಾತನಾಡಿ, ಜನಪರ ಯೋಜನೆಯನ್ನು ಜಾರಿಗೆ ತರುವ ಮೂಲಕ ಜನರ ಸಂಕಷ್ಟಕ್ಕೆ ಹತ್ತಿರವಾಗುವವನೇ ನಿಜವಾದ ರಾಜಕಾರಣಿ. ಅದುವೆ ರಾಜಕೀಯ ಧರ್ಮ. ಅಂತಹ ಮಹನಿಯರ ಸಾಲಿಗೆ ಲಕ್ಷತ್ರ್ಮಣ ಸವದಿ ಸೇರಿದ್ದಾರೆ ಎಂದರು.
ಗುರುದೇವ ಆಶ್ರಮದ ಆತ್ಮಾರಾಮ ಶ್ರೀಗಳು, ಜಿಪಂ ಸದಸ್ಯ ಗುರುಪ್ಪ ದಾಶ್ಯಾಳ, ಸಿದ್ದಪ್ಪ ಮುದಕಣ್ಣವರ್, ಬಿಜೆಪಿ ಮುಖಂಡರಾದ ಶೇಖರ ನ್ಯಾಮಗೌಡ, ಕನ್ನಾಳ ಗ್ರಾಪಂ ಅಧ್ಯಕ್ಷೆ ಕಸ್ತೂರಿ ಬಜಂತ್ರಿ, ಚಿಕ್ಕ ನೀರಾವರಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಎಸ್.ಎಸ್. ಮಾಕಾಣಿ, ಶ್ರೀಶೈಲ ನಾಯಿಕ, ಸುಶೀಲಕುಮಾರ ಪತ್ತಾರ, ಕಲ್ಲಪ್ಪ ಗುಡ್ಡೋಡಗಿ, ಭರಮಾ ಪೂಜಾರಿ, ಮಲಕಪ್ಪ ದೊಡವಾಡ ಸೇರಿದಂತೆ ಹಲವರು ಇದ್ದರು.
ಸಮೀಪದ ರಾಮತೀರ್ಥ ಗ್ರಾಮದ ಪಾಪನಾಶಿ ಹಳ್ಳಕ್ಕೆ 1 ಕೋಟಿ ರೂ. ವೆಚ್ಚದಲ್ಲಿನಿರ್ಮಿಸಲಾದ ಬಾಂದಾರ ಉದ್ಘಾಟಿಸಿ, ಬಾಗಿನ ಅರ್ಪಿಸಿ ಅವರು ಮಾತನಾಡಿದರು.
ಅವಕಾಶ ಸಿಕ್ಕಾಗ ಸದುಪಯೋಗಪಡಿಸಿಕೊಳ್ಳಬೇಕು. ಅಥಣಿಯಲ್ಲಿಆರ್ಟಿಒ ಕಚೇರಿ ತೆರೆದು ಚಿಕ್ಕೋಡಿಗೆ ಅಲೆಯುವುದನ್ನು ತಪ್ಪಿಸುವ ಮಹತ್ತರ ಕೆಲಸ ಮಾಡಲು ಉದ್ದೇಶಿಸಲಾಗಿದೆ. ಸದ್ಯದಲ್ಲಿಯೇ ವೈದ್ಯಕೀಯ ಕಾಲೇಜು ಕಾರ್ಯಾರಂಭಗೊಳಿಸುವ ಕೆಲಸ ಮಾಡಲಾಗುವುದು. ಇನ್ನು ಕೃಷಿ ಸಚಿವನಾಗಿ ಕೃಷಿ ವಿದ್ಯಾಲಯ ತೆರೆಯುವ ಕೆಲಸಕ್ಕೂ ಕೈ ಹಾಕಿದ್ದು ಕೊಕಟನೂರ ಗ್ರಾಮದಲ್ಲಿನ ನೂರು ಎಕರೆ ಭೂಮಿಯಲ್ಲಿಕಟ್ಟಡ ಪ್ರಾರಂಭಕ್ಕೆ ಸರಕಾರದಿಂದ ಅನುಮತಿ ಪಡೆಯಲಾಗುವುದು ಎಂದರು.
ವಿಧಾನಪರಿಷತ್ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಮಾತನಾಡಿ, ಜನಪರ ಯೋಜನೆಯನ್ನು ಜಾರಿಗೆ ತರುವ ಮೂಲಕ ಜನರ ಸಂಕಷ್ಟಕ್ಕೆ ಹತ್ತಿರವಾಗುವವನೇ ನಿಜವಾದ ರಾಜಕಾರಣಿ. ಅದುವೆ ರಾಜಕೀಯ ಧರ್ಮ. ಅಂತಹ ಮಹನಿಯರ ಸಾಲಿಗೆ ಲಕ್ಷತ್ರ್ಮಣ ಸವದಿ ಸೇರಿದ್ದಾರೆ ಎಂದರು.
ಗುರುದೇವ ಆಶ್ರಮದ ಆತ್ಮಾರಾಮ ಶ್ರೀಗಳು, ಜಿಪಂ ಸದಸ್ಯ ಗುರುಪ್ಪ ದಾಶ್ಯಾಳ, ಸಿದ್ದಪ್ಪ ಮುದಕಣ್ಣವರ್, ಬಿಜೆಪಿ ಮುಖಂಡರಾದ ಶೇಖರ ನ್ಯಾಮಗೌಡ, ಕನ್ನಾಳ ಗ್ರಾಪಂ ಅಧ್ಯಕ್ಷೆ ಕಸ್ತೂರಿ ಬಜಂತ್ರಿ, ಚಿಕ್ಕ ನೀರಾವರಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಎಸ್.ಎಸ್. ಮಾಕಾಣಿ, ಶ್ರೀಶೈಲ ನಾಯಿಕ, ಸುಶೀಲಕುಮಾರ ಪತ್ತಾರ, ಕಲ್ಲಪ್ಪ ಗುಡ್ಡೋಡಗಿ, ಭರಮಾ ಪೂಜಾರಿ, ಮಲಕಪ್ಪ ದೊಡವಾಡ ಸೇರಿದಂತೆ ಹಲವರು ಇದ್ದರು.