ಆ್ಯಪ್ನಗರ

ಕಾರು-ಕ್ಯಾಂಟರ್‌ ಡಿಕ್ಕಿ: ಇಬ್ಬರು ಸಾವು

ಯಮಕನಮರಡಿ: ಸಮೀಪದ ಹೆಬ್ಬಾಳ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರೊಂದು ...

Vijaya Karnataka 28 Jul 2019, 5:00 am
ಯಮಕನಮರಡಿ : ಸಮೀಪದ ಹೆಬ್ಬಾಳ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರೊಂದು ರಸ್ತೆ ಪಕ್ಕ ನಿಂತಿದ್ದ ಕ್ಯಾಂಟರ್‌ ವಾಹನಕ್ಕೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟು ಮೂವರು ಗಾಯಗೊಂಡಿದ್ದಾರೆ.
Vijaya Karnataka Web BEL-27YMD2


ಚಿಕ್ಕೋಡಿ ತಾಲೂಕಿನ ಕೇರೂರ ಗ್ರಾಮದ ಡಾ. ಪಂಚಾಕ್ಷ ರಿ ಶಣ್ಮುಖಯ್ಯ ಕುಡಚಿಮಠ (56), ಅವರ ಪುತ್ರ ರಕ್ಷಿತ್‌ ಪಂಚಾಕ್ಷ ರಿ ಕುಡಚಿಮಠ (20) ಮೃತರು. ಇವರು ಬೆಳಗಾವಿಯಿಂದ ತಮ್ಮ ಊರಿನತ್ತ ಪ್ರಯಾಣಿಸುತ್ತಿದ್ದಾಗ ಶನಿವಾರ ಬೆಳಗ್ಗೆ ಈ ಘಟನೆ ಸಂಭವಿಸಿದೆ.

ಕೇರೂರಿನ ಸದಾನಂದ ಚನ್ನಮಲ್ಲಯ್ಯ ಗದಗಿಮಠ (56), ನಿರ್ಮಲಾ ಪಂಚಾಕ್ಷರಿ ಕುಡಚಿಮಠ (48), ಅನಿತಾ ಸದಾನಂದ ಗದಗಿಮಠ (50) ಗಾಯಗೊಂಡಿದ್ದು, ಬೆಳಗಾವಿಯ ಕೆಎಲ್‌ಇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾರಿನಲ್ಲಿ ಒಟ್ಟು ಆರು ಪ್ರಯಾಣಿಕರಿದ್ದು, ಇನ್ನೋರ್ವ ಬಾಲಕ ಜತಿನ್‌ ಪಂಚಾಕ್ಷರಿ ಕುಡಚಿಮಠ (14) ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾನೆ.

ಸಂಕೇಶ್ವರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ