ಆ್ಯಪ್ನಗರ

ಕಾರು-ಬೈಕ್‌ ಡಿಕ್ಕಿ: ಸವಾರರಿಬ್ಬರ ಸಾವು

ಇಲ್ಲಿನ ಅಥಣಿ-ವಿಜಯಪುರ ರಸ್ತೆಯ ಬಸಚಿ ಗ್ರಾಮದ ಬಳಿ ಭಾನುವಾರ ಕಾರು ಹಾಗೂ ಬೈಕ್‌ ಮಧ್ಯೆ ಡಿಕ್ಕಿ ಸಂಭವಿಸಿ ಬೈಕ್‌ ಸವಾರರಿಬ್ಬರೂ ಮೃತಪಟ್ಟಿದ್ದಾರೆ...

Vijaya Karnataka 3 Dec 2018, 5:00 am
ಐಗಳಿ: ಇಲ್ಲಿನ ಅಥಣಿ-ವಿಜಯಪುರ ರಸ್ತೆಯ ಬಸಚಿ ಗ್ರಾಮದ ಬಳಿ ಭಾನುವಾರ ಕಾರು ಹಾಗೂ ಬೈಕ್‌ ಮಧ್ಯೆ ಡಿಕ್ಕಿ ಸಂಭವಿಸಿ ಬೈಕ್‌ ಸವಾರರಿಬ್ಬರೂ ಮೃತಪಟ್ಟಿದ್ದಾರೆ.
Vijaya Karnataka Web car bike collision death of two riders
ಕಾರು-ಬೈಕ್‌ ಡಿಕ್ಕಿ: ಸವಾರರಿಬ್ಬರ ಸಾವು


ಮೃತಪಟ್ಟ ಇಬ್ಬರೂ ಮಹಾರಾಷ್ಟ್ರ ರಾಜ್ಯದ ಶಿರಡೂನ್‌ ಗ್ರಾಮದವರು. ಇವರಲ್ಲಿ ಒಬ್ಬರನ್ನು ರಾವಸಾಬ್‌ ಅಣ್ಣಪ್ಪ ಚಂದೂರೆ (65) ಎಂದು ಗುರುತಿಸಲಾಗಿದೆ. ಇನ್ನೊಬ್ಬ ಸವಾರ ಹೆಸರು ಹೇಳುವಷ್ಟರಲ್ಲೇ ಮೃತಪಟ್ಟಿದ್ದರಿಂದ ಅವರ ಹೆಸರು ತಿಳಿದುಬಂದಿಲ್ಲ.

ಗಂಭೀರ ಗಾಯಗೊಂಡ ಇಬ್ಬರನ್ನೂ ಅಥಣಿ ಆಸ್ಪತ್ರೆಗೆ ಸೇರಿಸಲು ಒಯ್ಯುತ್ತಿದ್ದಾಗ ಮಾರ್ಗಮಧ್ಯೆ ಅಸು ನೀಗಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ