ಆ್ಯಪ್ನಗರ

ಹುಕ್ಕೇರಿಯಲ್ಲಿ ಮಹಾ ಮಳೆ: ನೀರಿನ ರಭಸಕ್ಕೆ ಬಹುದೂರ ತೇಲಿ ಹೋದ ಕಾರು!

ಬೆಳಗಾವಿ ಜಿಲ್ಲೆ ಹುಕ್ಕೇರಿ ಪಟ್ಟಣದಲ್ಲಿ ಕುಂಭದ್ರೋಣ ಮಳೆಯಾಗುತ್ತಿದ್ದು, ಮಹಾ ಮಳೆಗೆ ಇಡೀ ನಗರ ಜಲಾವೃತವಾಗಿದೆ. ಮಳೆ ನೀರಿನ ರಭಸಕ್ಕೆ ರಸ್ತೆ ಪಕ್ಕ ನಿಂತಿದ್ದ ಕಾರೊಂದು ತೇಲಿ ಹೋದ ಘಟನೆಯೂ ನಡೆದಿದೆ.

Vijaya Karnataka Web 11 Oct 2020, 8:46 pm
ಹುಕ್ಕೇರಿ: ಬೆಳಗಾವಿ ಜಿಲ್ಲೆ ಹುಕ್ಕೇರಿ ಪಟ್ಟಣದಲ್ಲಿ ಕುಂಭದ್ರೋಣ ಮಳೆಯಾಗುತ್ತಿದ್ದು, ಮಹಾ ಮಳೆಗೆ ಇಡೀ ನಗರ ಜಲಾವೃತವಾಗಿದೆ. ಇಂದು(ಭಾನವಾರ) ಸಂಜೆಯಿಂದಲೇ ಸುರಿಯುತ್ತಿರುವ ಭಾರೀ ಮಳೆಗೆ ಪಟ್ಟಣದ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
Vijaya Karnataka Web Hekkeri Rain
ಹುಕ್ಕೇರಿ ಪಟ್ಟಣದಲ್ಲಿ ಭಾರೀ ಮಳೆಗೆ ತೇಲಿ ಹೋದ ಕಾರು


ಎಡಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಇಡೀ ಹುಕ್ಕೇರಿ ನಗರ ಸಂಪೂರ್ಣವಾಗಿ ಜಲಾವೃತಗೊಂಡಿದ್ದು, ಮಳೆ ನೀರಿನ ರಭಸಕ್ಕೆ ರಸ್ತೆ ಪಕ್ಕ ನಿಂತಿದ್ದ ಕಾರೊಂದು ತೇಲಿ ಹೋದ ಘಟನೆ ನಡೆದಿದೆ.

ರಭಸದಿಂದ ಹರಿಯುತ್ತಿದ್ದ ಮಳೆಯ ನೀರಿನಲ್ಲಿ ಕಾರೊಂದು ಕೊಚ್ಚಿ ಹೋಗುತ್ತಿರುವ ವಿಡಿಯೋ ಇದೀಗ ವೈರಲ್‌ ಆಗಿದ್ದು, ಇತ್ತೀಚಿನ ವರ್ಷಗಳಲ್ಲಿ ಇಷ್ಟೊಂದು ಭಾರೀ ಮಳೆಯನ್ನು ನೋಡಿರಲಿಲ್ಲ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.

ಮಳೆಯಬ್ಬರಕ್ಕೆ ಜನಜೀವನ ಅಸ್ತವ್ಯಸ್ತ; ಹುಕ್ಕೇರಿ ತಾಲೂಕಲ್ಲಿ ಸೇತುವೆಗಳು ಜಲಾವೃತ

ಕೇವಲ ಕಾರು ಮಾತ್ರವಲ್ಲದೇ, ಜನ ಕೂಡ ನೀರಿನಲ್ಲಿ ತೇಲಿ ಹೋಗುತ್ತಿದ್ದ ದೃಶ್ಯಗಳು ಕಂಡುಬಂದಿದ್ದು, ಆಸರೆಗಾಗಿ ರಸ್ತೆ ಪಕ್ಕದ ಅಂಗಡಿಗಳನ್ನು ಜನ ಆಶ್ರಯಿಸಿರುವ ದೃಶ್ಯ ಸಾಮಾನ್ಯವಾಗಿತ್ತು.

ಈಗಲೂ ಮಳೆ ಮುಂದುವರೆದಿದ್ದು, ಕತ್ತಲಾಗುತ್ತಿದ್ದಂತೇ ಜನ ಮತ್ತಷ್ಟು ಚಿಂತೆಗೀಡಾಗಿದ್ದು, ಅನಾಹುತಗಳು ಸಂಭವಿಸದಿರಲಿ ಎಂದೇ ಪ್ರಾರ್ಥಿಸುತ್ತಿದ್ದಾರೆ.

ಕಳೆದ ಕೆಲವು ದಿನಗಳಿಂದ ಹುಕ್ಕೇರಿ ಭಾಗದಲಕ್ಲಿ ಭಾರೀ ಮಳೆಯಾಗುತ್ತಿದ್ದು, ಹುಕ್ಕೇರಿ, ಸಂಕೇಶ್ವರ ಪಟ್ಟಣ, ಯಮಕನಮರಡಿ ಸೇರಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಸೇತುವೆಗಳು ಸಂಪೂರ್ಣವಾಗಿ ಜಲಾವೃತಗೊಂಡಿವೆ.

ಬೆಂಗಳೂರು: ತಡರಾತ್ರಿ ಮಳೆ ಅಬ್ಬರ, ಮನೆಗಳಿಗೆ ನುಗ್ಗಿದ ನೀರು, ನಿವಾಸಿಗಳ ಜಾಗರಣೆ

ಮಹಾ ಮಳೆಯನ್ನು ಎದುರಿಸಲು ತಾಲೂಕು ಆಡಳಿತ ಸಜ್ಜಾಗಿದ್ದು, ಕಟ್ಟೆಚ್ಚರದಿಂದ ಇರುವಂತೆ ಜನರಲ್ಲಿ ಮನವಿ ಮಾಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ