ಪ್ರತಿಭಟಿಸಿದವರ ಮೇಲೆ ಕೇಸ್ ದಾಖಲು
ಕಾಗವಾಡ: ತಾಲೂಕಿನ ಉಗಾರ ಖುರ್ದ ಪಟ್ಟಣದ ...
Vijaya Karnataka 22 Apr 2020, 5:00 am
ಕಾಗವಾಡ: ತಾಲೂಕಿನ ಉಗಾರ ಖುರ್ದ ಪಟ್ಟಣದ ಪುರಸಭೆ ಎದುರು ಲಾಕ್ಡೌನ್ ಉಲ್ಲಂಘಿಸಿ ನೂರಾರು ಜನರನ್ನು ಒಂದುಗೂಡಿಸಿ ಪ್ರತಿಭಟಿಸಿದ ಪ್ರಮುಖರಲ್ಲಿ27 ಜನರ ಮೇಲೆ ಕಾಗವಾಡ ಪೊಲೀಸ್ ಠಾಣೆಯಲ್ಲಿಪ್ರಕರಣ ದಾಖಲಾಗಿದೆ. ಉಗಾರದಲ್ಲಿಕೆಲ ಜನಪ್ರತಿನಿಧಿಗಳು ಹಾಗೂ ಸ್ಥಳೀಯ ಮುಖಂಡರು ಕುಡಚಿಯ ಕೊರೊನಾ ಸೋಂಕಿತರನ್ನು ತಮ್ಮ ಪಟ್ಟಣಕ್ಕೆ ಕ್ವಾರಂಟೈನ್ಗಾಗಿ ತಂದಿರಿಸುವುದನ್ನು ವಿರೋಧಿಸಿ ನೂರಾರು ಜನರನ್ನು ಸೇರಿಸಿ ಪ್ರತಿಭಟನೆ ನಡೆಸಿದ್ದರು. ಇವರೆಲ್ಲರ ಮೇಲೆ ಎಫ್ಐಆರ್ ದಾಖಲಿಸಲಾಗಿದೆ ಎಂದು ಕಾಗವಾಡ ಪಿಎಸ್ಐ ಹನುಮಂತ ಶಿರಹಟ್ಟಿ ತಿಳಿಸಿದ್ದಾರೆ.