ಆ್ಯಪ್ನಗರ

ಬೆಳಗಾವಿ: ಅಗತ್ಯ ದಾಖಲೆಗಳಿಲ್ಲದೆ ಟ್ರಕ್‌ನಲ್ಲಿ ಸಾಗಿಸುತ್ತಿದ್ದ ಗೋವುಗಳ ರಕ್ಷಣೆ

ಅಗತ್ಯ ದಾಖಲೆಗಳಿಲ್ಲದೆ ಟ್ರಕ್‌ನಲ್ಲಿ ಸಾಗಿಸಲಾಗುತ್ತಿದ್ದ ಗೋವುಗಳನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ನಡೆದಿದೆ. ದಾಖಲೆಗಳು ಇರದೇ ಇರುವುದರಿಂದ ಟ್ರಕ್‌ ಮಾಲೀಕ ಮತ್ತು ಚಾಲಕನ ಮೇಲೆ ಗೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

Vijaya Karnataka 27 Jul 2020, 9:53 am
ಬೆಳಗಾವಿ: ಅಗತ್ಯ ದಾಖಲೆಗಳಿಲ್ಲದೆ ಟ್ರಕ್‌ನಲ್ಲಿ ಸಾಗಿಸಲಾಗುತ್ತಿದ್ದ ಗೋವುಗಳನ್ನು ಕಿತ್ತೂರು ಪೊಲೀಸರು ವಶಕ್ಕೆ ಪಡೆದು ಕೊಂಡಸಕೊಪ್ಪದ ಮಹಾವೀರ ಗೋಶಾಲೆಗೆ ಒಪ್ಪಿಸಿದ್ದಾರೆ.
Vijaya Karnataka Web 26RAJU-4075456
ಕಿತ್ತೂರು ಪೊಲೀಸರು ವಶಕ್ಕೆ ಪಡೆದಿರುವ ಜಾನುವಾರುಗಳು.


ಶನಿವಾರ ಜಾನುವಾರುಗಳ ಸಾಗಣೆ ನಡೆಯುತ್ತಿರುವ ಬಗ್ಗೆ ವಿಶ್ವ ಹಿಂದೂ ಪರಿಷತ್‌ ಮತ್ತು ಬಜರಂಗದಳದ ಕಿತ್ತೂರು ತಾಲೂಕಾ ಕಾರ್ಯದರ್ಶಿ ಶಿವಲಿಂಗಯ್ಯ ಮತ್ತು ಕಾರ್ಯಕರ್ತರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪಿಎಸ್‌ಐ ಕುಮಾರ ಹಿತ್ತಲಮನಿ ಮತ್ತು ಸಿಬ್ಬಂದಿ ಟ್ರಕ್‌ ತಡೆದು ಪರಿಶೀಲಿಸಿದ್ದು, ದಾಖಲೆಗಳು ಇರದೇ ಇರುವುದರಿಂದ ಟ್ರಕ್‌ ಮಾಲೀಕ ಮತ್ತು ಚಾಲಕನ ಮೇಲೆ ಗೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ಶನಿವಾರ ರಾತ್ರಿ ಠಾಣೆ ಆವರಣದಲ್ಲೇ ಜಾನುವಾರುಗಳ ಆರೈಕೆ ಮಾಡಿ ಭಾನುವಾರ ಪಶುವೈದ್ಯಾಧಿಕಾರಿಗಳಿಂದ ತಪಾಸಣೆ ನಡೆಸಿ ಗೋಶಾಲೆಗೆ ಬಿಡಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ