ಆ್ಯಪ್ನಗರ

ಬಿಜೆಪಿ ಕಾರ್ಯಕರ್ತರಿಂದ ಸಂಭ್ರಮಾಚರಣೆ

ಬೈಲಹೊಂಗಲ : ನರೇಂದ್ರ ಮೋದಿಯವರು ಎರಡನೇ ಬಾರಿ ದೇಶದ ಪ್ರಧಾನ ಮಂತ್ರಿಯಾಗಿ ಗುರುವಾರ ಅಧಿಕಾರ ಸ್ವೀಕರಿಸುತ್ತಿದ್ದಂತೆ ಜಿಲ್ಲಾ ಭಾಜಪ ಗ್ರಾಮೀಣ ಅಧ್ಯಕ್ಷ ಡಾ...

Vijaya Karnataka 31 May 2019, 5:00 am
ಬೈಲಹೊಂಗಲ : ನರೇಂದ್ರ ಮೋದಿಯವರು ಎರಡನೇ ಬಾರಿ ದೇಶದ ಪ್ರಧಾನ ಮಂತ್ರಿಯಾಗಿ ಗುರುವಾರ ಅಧಿಕಾರ ಸ್ವೀಕರಿಸುತ್ತಿದ್ದಂತೆ ಜಿಲ್ಲಾ ಭಾಜಪ ಗ್ರಾಮೀಣ ಅಧ್ಯಕ್ಷ ಡಾ.ವಿಶ್ವನಾಥ ಪಾಟೀಲ ನೇತೃತ್ವದಲ್ಲಿ ನೂರಾರು ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ, ಹಾಲು ವಿತರಿಸಿ ಸಂಭ್ರಮಿಸಿದರು.
Vijaya Karnataka Web BEL-30HTP9


ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಜಮಾವಣೆಗೊಂಡು ಜಯಘೋಷ ಮೊಳಗಿಸಿದರು. ಡಾ.ವಿಶ್ವನಾಥ ಪಾಟೀಲ ಮಾತನಾಡಿ, ಪ್ರಧಾನ ಮಂತ್ರಿ ನರೇಂದ್ರ ಮೋದಿ ತಮ್ಮ ಆಡಳಿತ ವೈಖರಿಯಿಂದ ಮತ್ತೊಮ್ಮೆ ದೇಶದ ಪ್ರಧಾನಿಯಾಗಿ ಅಧಿಕಾರ ಸ್ವೀಕಾರ ಮಾಡಿರುವುದು ಅತ್ಯಂತ ಸಂತಸ ತಂದಿದೆ ಎಂದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುಪಾದ ಕಳ್ಳಿ, ಮಂಡಳ ಅಧ್ಯಕ್ಷ ಮಡಿವಾಳಪ್ಪ ಹೋಟಿ, ಜಿಪಂ ಸದಸ್ಯ ಈರಣ್ಣಾ ಕರೀಕಟ್ಟಿ, ಶ್ರೀಶೈಲ ಯಡಳ್ಳಿ, ಮುರಿಗೆಪ್ಪ ಗುಂಡ್ಲೂರ, ರತ್ನಾ ಗೋಧಿ, ರುದ್ರಪ್ಪಾ ಹೊಸಮನಿ, ಮಹಾಂತೇಶ ಹರಕುಣಿ, ರಾಜು ಕುಡಸೋಮಣ್ಣವರ, ಸಂಜು ಗಿರೆಪ್ಪಗೌಡರ, ಸುರೇಶ ಮಾಟೋಳ್ಳಿ, ವೀರೇಶ ಹೋಳೆಪ್ಪನವರ, ಬಸನಗೌಡಾ ಸಂಗನಗೌಡರ, ಸುಧೀರ ವಾಲಿ, ಶಿವಾನಂದ ಕೋಲಕಾರ, ಜಗದೀಶ ಜಂಬಗಿ, ವಿಜಯ ಪತ್ತಾರ, ಬಸವರಾಜ ಭಜಂತ್ರಿ, ಸುರೇಶ ಪೂಜೇರಿ, ಬಸಪ್ಪ ಮಲ್ಲೂರ, ರಾಜು ನರಸನ್ನವರ, ಚನ್ನಬಸ್ಸು ಈಟಿ, ಬಸವರಾಜ ಹಣಸಿ, ಮಾರುತಿ ಕೊಂಡೂರ, ಸೋಮು ತೋಟಗಿ, ಮಲ್ಲಿಕಾರ್ಜುನ ಬಾಜಿ, ಆಸಿಫ ಗೋವೆ, ಬಸವರಾಜ ದುಗ್ಗಾಣಿ, ಕಿರಣ ಅರವಳ್ಳಿ, ವಿವೇಕಾನಂದ ಪೂಜೇರಿ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ