ಆ್ಯಪ್ನಗರ

ಮಹದಾಯಿ ಯೋಜನೆಯಲ್ಲಿ ಕೇಂದ್ರ ರಾಜ್ಯದ ಪರವಿಲ್ಲ: ಸತೀಶ್‌ ಜಾರಕಿಹೊಳಿ

‘‘ರಾಜ್ಯದ ಸಂಸದರು, ಕೇಂದ್ರ ಸಚಿವರು ಯಾರೂ ಈ ಬಗ್ಗೆ ಮಾತನಾಡುತ್ತಿಲ್ಲ. ಕೆಲವರು ಹಾಸ್ಯಾಸ್ಪದವಾಗಿ ಮಾತಾಡುತ್ತಿದ್ದಾರೆ. ಮೋದಿ ಹೇಳಿದ್ದನ್ನೇ ಕೇಳಿಕೊಂಡು ಕೂರುತ್ತಾರೆ. ಅಧಿಕಾರ ಹಿಡಿಯುವುದಷ್ಟೇ ಅವರ (ಬಿಜೆಪಿ) ಅಜೆಂಡಾ ಆಗಿತ್ತು. ಇನ್ನೂ ಮುಂದೆಯೂ ಏನೂ ಮಾಡುವುದಿಲ್ಲ," - ಸತೀಶ್‌ ಜಾರಕಿಹೊಳಿ.

Vijaya Karnataka 23 Dec 2019, 7:20 pm
ಬೆಳಗಾವಿ: ಕಳಸಾ ಬಂಡೂರಿ ಯೋಜನೆ ಅನುಷ್ಠಾನಕ್ಕೆ ಒಪ್ಪಿಗೆ ಕೊಟ್ಟಿದ್ದನ್ನೇ ವಾಪಸ್‌ ಪಡೆದುಕೊಂಡಿರುವ ಕೇಂದ್ರ ಸರಕಾರ ಮಹದಾಯಿ ವಿಷಯದಲ್ಲಿ ಕರ್ನಾಟಕದ ಪರವಾಗಿ ಇಲ್ಲ ಎಂದು ಮಾಜಿ ಸಚಿವ, ಶಾಸಕ ಸತೀಶ ಜಾರಕಿಹೊಳಿ ದೂರಿದರು.
Vijaya Karnataka Web Satish Jarkiholi


ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘‘ರಾಜ್ಯದ ಸಂಸದರು, ಕೇಂದ್ರ ಸಚಿವರು ಯಾರೂ ಈ ಬಗ್ಗೆ ಮಾತನಾಡುತ್ತಿಲ್ಲ. ಕೆಲವರು ಹಾಸ್ಯಾಸ್ಪದವಾಗಿ ಮಾತಾಡುತ್ತಿದ್ದಾರೆ. ಮೋದಿ ಹೇಳಿದ್ದನ್ನೇ ಕೇಳಿಕೊಂಡು ಕೂರುತ್ತಾರೆ. ಗಡಿ ವಿಚಾರದಲ್ಲೂ ಯಾರು ಮಾತನಾಡುತ್ತಿಲ್ಲ. ಅಧಿಕಾರ ಹಿಡಿಯುವುದಷ್ಟೇ ಅವರ (ಬಿಜೆಪಿ) ಅಜೆಂಡಾ ಆಗಿತ್ತು. ಇನ್ನೂ ಮುಂದೆಯೂ ಏನೂ ಮಾಡುವುದಿಲ್ಲ. ಜನರು ಕಷ್ಟದಲ್ಲಿಯೇ ಇರುತ್ತಾರೆ’’ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ವೋಟ್‌ ಬ್ಯಾಂಕ್‌ ಗಟ್ಟಿ ಮಾಡುವ ಪ್ರಯತ್ನ

ಪೌರತ್ವ ಕಾಯ್ದೆ ತಿದ್ದುಪಡಿ ಕುರಿತು ಪ್ರತಿಕ್ರಿಯಿಸಿದ ಅವರು, ‘‘ಬಿಜೆಪಿಯವರು ಬಾಯಿಗೆ ಬಂದ ಹಾಗೆ ಹೇಳಿಕೆ ಕೊಡುತ್ತಿದ್ದಾರೆ. ಬಿಜೆಪಿಯವರದ್ದು ಹಿಂದು- ಮುಸ್ಲಿಮರನ್ನು ಒಡೆದು ತಮ್ಮ ವೋಟ್‌ ಬ್ಯಾಂಕ್‌ ಗಟ್ಟಿ ಮಾಡಿಕೊಳ್ಳುವ ಪ್ರಯತ್ನ. ಮುಂದೆಯೂ ಇಂತಹ ವಿಷಯಗಳನ್ನು ತರುತ್ತಲೇ ಇರುತ್ತಾರೆ. ಆರ್ಥಿಕತೆ ಹಳ್ಳ ಹಿಡಿದಿದ್ದು ಇದನ್ನು ದಿಕ್ಕು ತಪ್ಪಿಸಲು ಪೌರತ್ವ ಕಾಯ್ದೆಯನ್ನು ಮುಂದೆ ತಂದಿದ್ದಾರೆ. ಪ್ರತಿಭಟನೆಯಲ್ಲಿ ಭಾಗಿಯಾದವರು ದೇಶದ್ರೋಹಿಗಳು ಎನ್ನಲು ಬಿಜೆಪಿಯವರು ಯಾರು?’’ ಎಂದು ಸತೀಶ್‌ ಜಾರಕಿಹೊಳಿ ಹರಿಹಾಯ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ