ಆ್ಯಪ್ನಗರ

ವಿಟಿಯು ಹಗರಣ: ಮಾಜಿ ಕುಲಪತಿ ವಿರುದ್ಧ ಕ್ರಿಮಿನಲ್‌ ಖಟ್ಲೆ

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (ವಿಟಿಯು) ಸಿಬ್ಬಂದಿ ನೇಮಕ ಹಗರಣಕ್ಕೆ ಸಂಬಂಧಿಸಿದಂತೆ ಎರಡು ವರ್ಷಗಳ ಹಿಂದೆ ನ್ಯಾ. ಕೇಶವನಾರಾಯಣ ಸಮಿತಿ ಕೊಟ್ಟಿದ್ದ ವರದಿಯನ್ನು ಸಂಪೂರ್ಣವಾಗಿ ಜಾರಿ ಮಾಡಲು ವಿಶ್ವವಿದ್ಯಾಲಯದ ಆಡಳಿತ ಮಂಡಳಿ ನಿರ್ಧರಿಸಿದೆ.

Vijaya Karnataka Web 24 Mar 2018, 8:40 am
ಬೆಳಗಾವಿ: ಇಲ್ಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (ವಿಟಿಯು) ಸಿಬ್ಬಂದಿ ನೇಮಕ ಹಗರಣಕ್ಕೆ ಸಂಬಂಧಿಸಿದಂತೆ ಎರಡು ವರ್ಷಗಳ ಹಿಂದೆ ನ್ಯಾ. ಕೇಶವನಾರಾಯಣ ಸಮಿತಿ ಕೊಟ್ಟಿದ್ದ ವರದಿಯನ್ನು ಸಂಪೂರ್ಣವಾಗಿ ಜಾರಿ ಮಾಡಲು ವಿಶ್ವವಿದ್ಯಾಲಯದ ಆಡಳಿತ ಮಂಡಳಿ ನಿರ್ಧರಿಸಿದ್ದು , ಪ್ರಕರಣಕ್ಕೆ ಮತ್ತೆ ಜೀವ ಬಂದಂತಾಗಿದೆ.
Vijaya Karnataka Web charges against vtu former vc
ವಿಟಿಯು ಹಗರಣ: ಮಾಜಿ ಕುಲಪತಿ ವಿರುದ್ಧ ಕ್ರಿಮಿನಲ್‌ ಖಟ್ಲೆ


ಈ ವಿಷಯದ ಕುರಿತು ಕಾರ್ಯಕಾರಿ ಮಂಡಳಿ ಎರಡು ದಿನಗಳ ಕಾಲ ಸುದೀರ್ಘ‌ ಚರ್ಚೆ ನಡೆಸಿದೆವಿಟಿಯುನ ಮಾಜಿ ಕುಲಪತಿ ಎಚ್‌. ಮಹೇಶಪ್ಪ ಹಾಗೂ ಅವರಿಗೆ ನೆರವು ನೀಡಿದ ಹಣಕಾಸು ವಿಭಾಗದ ಅಧಿಕಾರಿಗಳ ವಿರುದ್ಧ ಕ್ರಿಮಿನಲ್‌ ಕೇಸ್‌ ದಾಖಲಿಸಲು ಆಡಳಿತ ಮಂಡಳಿ ಮುಂದಾಗಿದೆ.

ವಿವಿಯಲ್ಲಿಸಿಬ್ಬಂದಿ ನೇಮಕ ಹಾಗೂ ಹಣದ ವ್ಯವಹಾರದಲ್ಲಿನೂರಾರು ಕೋಟಿ ರೂ. ಅವ್ಯವಹಾರ ಆಗಿರುವ ಬಗ್ಗೆ ಎರಡು ವರ್ಷಗಳ ಹಿಂದೆಯೇ ನ್ಯಾ. ಕೇಶವನಾರಾಯಣ ಸಮಿತಿ ವರದಿ ಕೊಟ್ಟಿದೆ. ಈ ವರದಿ ಆಧರಿಸಿ 2016ರ ಮಾರ್ಚ್‌ನಲ್ಲಿರಾಜ್ಯಪಾಲ ವಜುಭಾಯಿ ವಾಲಾ ಅವರು ಎಚ್‌. ಮಹೇಶಪ್ಪ ಅವರನ್ನು ಅಮಾನತು ಮಾಡಿದ್ದರು. ಜತೆಗೆ ಅವರ ವಿರುದ್ಧ ಕ್ರಿಮಿನಲ್‌ ಕೇಸ್‌ ದಾಖಲಿಸುವಂತೆಯೂ ರಾಜ್ಯ ಸರಕಾರಕ್ಕೆ ನಿರ್ದೇಶಿಸಿದ್ದರು.

ಇಷ್ಟೇ ಅಲ್ಲದೆ, ಮಹೇಶಪ್ಪ ಅವರ ಅವಧಿಯಲ್ಲಿತೆರಿಗೆ ಪಾವತಿ ಮಾಡದ ಕಾರಣಕ್ಕೆ ಆದಾಯ ತೆರಿಗೆ ಇಲಾಖೆ ವಿಶ್ವವಿದ್ಯಾಲಯದ 439 ಕೋಟಿ ರೂ. ಜಪ್ತಿ ಮಾಡಿದೆ. ಅದನ್ನು ಹಿಂಪಡೆಯಲು ರಾಜ್ಯ ಸರಕಾರ ಈಗಲೂ ಕಸರತ್ತು ನಡೆಸುತ್ತಿದೆ. ಹೀಗಿದ್ದರೂ, ಕಳೆದ ವರ್ಷ ಮಹೇಶಪ್ಪ ಅವರನ್ನು ಕಾಂಗ್ರೆಸ್‌ ತನ್ನ ಐಟಿ ಸೆಲ್‌ನ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಿಕೊಂಡಿದೆ. ಈಗ ಅದೇ ಮಹೇಶಪ್ಪ ಅವರು ಹರಿಹರ ಕ್ಷೇತ್ರದಲ್ಲಿಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ. ಅದಕ್ಕಾಗಿ ಕ್ಷೇತ್ರದಲ್ಲಿಪ್ರಚಾರವನ್ನೂ ಆರಂಭಿಸಿದ್ದಾರೆ.

ನಕಲಿ ಹೆಸರಿನಲ್ಲಿ ವೇತನ ಲೂಟಿ

ನ್ಯಾ. ಕೇಶವನಾರಾಯಣ ಸಮಿತಿ ವರದಿ ಆಧರಿಸಿ ವಿಟಿಯು ಹಣಕಾಸು ವಿಭಾಗ ಈಗ ಹಲವು ಪ್ರಕರಣಗಳನ್ನು ಪ್ರತ್ಯೇಕಿಸಿ ದಾಖಲೆಗಳನ್ನು ಸಂಗ್ರಹಿಸಿದೆ.

ಅದರಲ್ಲಿಮಾಜಿ ಕುಲಪತಿ ಮಹೇಶಪ್ಪ ಅವರ ಅವಧಿಯಲ್ಲಿ30ಕ್ಕೂ ಹೆಚ್ಚು ನಕಲಿ ಸಿಬ್ಬಂದಿ ಹೆಸರಿನಲ್ಲಿವರ್ಷಗಳ ಕಾಲ ವೇತನ ಪಾವತಿಸಿಕೊಳ್ಳಲಾಗಿದೆ. ಅನೇಕ ಸಿಬ್ಬಂದಿ ಹೆಸರಿನಲ್ಲಿಹೆಚ್ಚುವರಿಯಾಗಿ ಹಣ ಪಾವತಿಸಿ ದುಡ್ಡು ಲಪಟಾಯಿಸಲಾಗಿದೆ. ಗುತ್ತಿಗೆ ವಿಷಯದಲ್ಲಿಯೂ ಕೋಟ್ಯಂತರ ರೂ. ಹಣ ಹೊಡೆಯಲು ಹಣಕಾಸು ವಿಭಾಗದ ಸಿಬ್ಬಂದಿ ಕುಲಸಚಿವರಿಗೆ ನೆರವಾಗಿದ್ದಾರೆ. ಇದರಲ್ಲಿಬ್ಯಾಂಕ್‌ ಸಿಬ್ಬಂದಿ ಕೈವಾಡವೂ ಇದೆ ಎಂದು ಆರೋಪಿಸಲಾಗಿದೆ.

ವಿವಿಯಲ್ಲಿಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ಸಿಬ್ಬಂದಿಯನ್ನು ಕಾಯಂ ಮಾಡುವುದಾಗಿ ಆಗಿನ ಕುಲಪತಿ ಮಹೇಶಪ್ಪ ಅವರು ಸುಮಾರು 400 ನೌಕರರಿಂದ 20 ತಿಂಗಳ ವೇತನ ಪಡೆದಿದ್ದಾರೆ ಎಂದು ಗ್ರಾಮೀಣ ಠಾಣೆಯಲ್ಲಿದೂರು ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ