ಆ್ಯಪ್ನಗರ

ತಹಸೀಲ್ದಾರರಿಂದ ಸರಕಾರಕ್ಕೆ ವಂಚನೆ: ಆರೋಪ

ಬೆಳಗಾವಿ: ರಾಯಬಾಗ ತಾಲೂಕಿನ ಹಿಂದಿನ ತಹಸೀಲ್ದಾರ ಕೆಎನ್‌...

Vijaya Karnataka 13 Mar 2019, 5:00 am
ಬೆಳಗಾವಿ : ರಾಯಬಾಗ ತಾಲೂಕಿನ ಹಿಂದಿನ ತಹಸೀಲ್ದಾರ ಕೆ.ಎನ್‌. ರಾಜಶೇಖರ ನಿಯಮಗಳನ್ನು ಗಾಳಿಗೆ ತೂರಿ ಖಾಸಗಿ ವ್ಯಕ್ತಿಗೆ 12 ಎಕರೆ, 24 ಗುಂಟೆ ಗಾಯರಾಣ ಜಮೀನು ಮಂಜೂರು ಮಾಡಿ ಸರಕಾರಕ್ಕೆ ವಂಚನೆ ಮಾಡಿರುವುದಾಗಿ ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಆರೋಪಿಸಿದ್ದಾರೆ.
Vijaya Karnataka Web cheating to government by tahsildar alleged bhimappa gadad
ತಹಸೀಲ್ದಾರರಿಂದ ಸರಕಾರಕ್ಕೆ ವಂಚನೆ: ಆರೋಪ


ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ಮಾಹಿತಿ ಹಕ್ಕಿನಡಿ ಈ ವಿಷಯವಾಗಿ ತಾವು ಪಡೆದುಕೊಂಡಿರುವ ನಾನಾ ದಾಖಲೆ ಮತ್ತು ಅವುಗಳ ವಿವರ ನೀಡಿದರು.

ಸುಲ್ತಾನಪುರ ಗ್ರಾಮದ ರಿ.ಸ.ನಂ. 82/2ರ ಈ ಜಮೀನು ಅಕ್ರಮ-ಸಕ್ರಮದಲ್ಲಿ ದುಂಡಪ್ಪ ದುರ್ಗಪ್ಪ ಮುರಗೋಡ ಎನ್ನುವವರಿಗೆ ಮಂಜೂರಾಗಿದೆ. ಆದರೆ ಅಕ್ರಮ-ಸಕ್ರಮದಲ್ಲಿ ಗಾಯರಾಣ ಜಮೀನು ಮಂಜೂರು ಮಾಡಲು ಬರುವುದಿಲ್ಲವೆಂದು ತಿಳಿಸಲಾಗಿದೆ. ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರ ಕುಟುಂಬದ ಸಂಬಂಧಿ ಎಂದು ಹೇಳಿಕೊಳ್ಳುವ ಕೆ.ಎನ್‌. ರಾಜಶೇಖರ, 'ಡಿ' ದರ್ಜೆ ನೌಕರರಾಗಿ ಸಚಿವಾಲಯದಲ್ಲಿ ಸೇರಿಕೊಂಡಿದ್ದು, ಪದೋನ್ನತಿ ಹೊಂದುತ್ತ ಶಾಖಾಧಿಕಾರಿಯಾಗಿದ್ದರು. ನಂತರ ತಮ್ಮ ರಾಜಕೀಯ ಪ್ರಭಾವ ಬಳಸಿ ರಾಯಬಾಗಕ್ಕೆ ತಹಸೀಲ್ದಾರರಾಗಿ ನೇಮಕಗೊಂಡಿದ್ದರು ಎಂದು ಗಡಾದ ಹೇಳಿದರು.

ಪದೋನ್ನತಿ ಹೊಂದಿದ 'ಡಿ' ದರ್ಜೆ ನೌಕರರೊಬ್ಬರು ತಹಸೀಲ್ದಾರ ಆಗಿದ್ದು ಹಾಗೂ ಇಷ್ಟೊಂದು ಜಮೀನಿಗೆ ಮಂಜೂರಾತಿ ಆದೇಶ ನೀಡಿರುವುದು ಇಡೀ ಕಂದಾಯ ಇಲಾಖೆ ಬೆಚ್ಚಿ ಬೀಳುವಂತೆ ಮಾಡಿದೆ. ಅಕ್ರಮ-ಸಕ್ರಮ ಯೋಜನೆಯಲ್ಲೂ ಎರಡು ಎಕರೆಗಿಂತ ಹೆಚ್ಚಿಗೆ ಜಮೀನು ಮಂಜೂರು ಮಾಡಲು ಬರುವುದಿಲ್ಲ. ಆದರೆ ಇಲ್ಲಿ ಎಲ್ಲ ನಿಯಮಗಳನ್ನೂ ಗಾಳಿಗೆ ತೂರಲಾಗಿದೆ ಎಂದು ದೂರಿದರು. ಈ ಸಂಬಂಧ, ಚಿಕ್ಕೋಡಿ ಉಪವಿಭಾಗಾಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿಸಿದರು.

ಚನ್ನಪ್ಪ ಅಥಣಿ, ಈರಣ್ಣ ಕೊಣ್ಣೂರ, ವಿಲೀನ ತಾರಿಹಾಳ, ಮಲ್ಲಪ್ಪ ತೆರದಾಳ ಹಾಗೂ ಇತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ