ಆ್ಯಪ್ನಗರ

ಮಳೆಗಾಲಕ್ಕೆ ಮುನ್ನ ಬಾಂದಾರ ಕಾಮಗಾರಿ ಪೂರ್ಣ

ರಾಯಬಾಗ: ತಾಲೂಕಿನ ಸಿದ್ದಾಪುರ ಬಳಿ ಕೃಷ್ಣಾ ನದಿಗೆ ಅಡ್ಡಲಾಗಿ 6 ಕೋಟಿ ರೂ...

Vijaya Karnataka 15 May 2019, 5:00 am
ರಾಯಬಾಗ : ತಾಲೂಕಿನ ಸಿದ್ದಾಪುರ ಬಳಿ ಕೃಷ್ಣಾ ನದಿಗೆ ಅಡ್ಡಲಾಗಿ 6 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸುತ್ತಿರುವ ಬಾಂದಾರ ಕಾಮಗಾರಿ ಪ್ರಗತಿಯಲ್ಲಿದ್ದು ಮಳೆಗಾಲಕ್ಕೆ ಮುನ್ನ ಪೂರ್ಣಗೊಳಿಸಲಾಗುವುದು ಎಂದು ಸಣ್ಣ ನೀರಾವರಿ ಇಲಾಖೆಯ ಅಭಿಯಂತರ ಎಂ.ಐ. ಹತ್ತಿ ಹೇಳಿದರು.
Vijaya Karnataka Web BEL-14RAIBAG1PHOTO


ಬಾಂದಾರ ಕಾಮಗಾರಿ ವೀಕ್ಷಿಸಿ ಮಾತನಾಡಿದ ಅವರು, ಒಂದು ವೇಳೆ ಮಹಾರಾಷ್ಟ್ರದ ಕೋಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಬಂದರೂ ಕಾಮಗಾರಿ ಮುಂದುವರೆಯುತ್ತದೆ. ಕಾಮಗಾರಿ ಪೂರ್ಣಗೊಂಡಾಗ ನದಿಯಲ್ಲಿ 0.3 ಟಿಎಂಸಿ ಸಂಗ್ರಹವಾಗುತ್ತದೆ ಎಂದರು.

ಈ ಬಾಂದಾರ ನಿರ್ಮಾಣದಿಂದ ಸಿದ್ದಾಪುರದಿಂದ ಮಳವಾಡದವರೆಗೆ ನೀರು ನಿಲ್ಲಲಿದೆ. ಇದರಿಂದ ಸಿದ್ದಾಪುರ, ಖೇಮಲಾಪುರ, ಶಿರಗೂರ, ಗುಂಡವಾಡ, ಕುಡಚಿ ಗ್ರಾಮಗಳಿಗೆ ಮುಂದಿನ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರುವದಿಲ್ಲ ಎಂದರು.

ನದಿಯ ಪಶ್ಚಿಮ ಭಾಗದಲ್ಲಿ ಎರೆಮಣ್ಣು ಜಾಸ್ತಿ ಇರುವದರಿಂದ ಅದನ್ನು ಬೇರೆಡೆ ಸಾಗಿಸುವುದು ದೊಡ್ಡ ಸಮಸ್ಯೆಯಾಗಿದೆ. ನದಿಯಲ್ಲಿ ನೀರು ಬಂದರೆ ಮತ್ತೆ ಮಣ್ಣು ಅಲ್ಲಿಯೇ ಸಂಗ್ರಹವಾಗಲಿದೆ. ರೈತರು ಈ ಮಣ್ಣನ್ನು ಉಚಿತವಾಗಿ ತೆಗೆದುಕೊಂಡು ಹೋಗುವಂತೆ ತಿಳಿಸಲಾಗಿದೆ. ರೈತರು ಮಣ್ಣನ್ನು ತೆಗೆದುಕೊಂಡು ಹೋಗದಿದ್ದರೆ ಅಲ್ಲಿಯೇ ಒಂದು ಕಡೆ ಗುಡ್ಡೆ ಹಾಕಲಾಗುವುದು ಎಂದು ಎಂ.ಐ. ಹತ್ತಿ ಹೇಳಿದರು.

ಗುತ್ತಿಗೆದಾರ ಗಾಣಿಗೇರ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ