ಆ್ಯಪ್ನಗರ

ಚಿಕ್ಕೋಡಿ ಗೆಲುವು: ಬಿಜೆಪಿ ಕಾರ್ಯಕರ್ತರಿಂದ ವಿಜಯೋತ್ಸವ

ಹುಕ್ಕೇರಿ: ಕೇಂದ್ರದಲ್ಲಿ 2ನೇ ಬಾರಿಗೆ ಬಿಜೆಪಿ ಸರಕಾರ ಬಹುಮತ ಗಳಿಸಿರುವುದು ಹಾಗೂ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಅವ ...

Vijaya Karnataka 24 May 2019, 5:00 am
ಹುಕ್ಕೇರಿ : ಕೇಂದ್ರದಲ್ಲಿ 2ನೇ ಬಾರಿಗೆ ಬಿಜೆಪಿ ಸರಕಾರ ಬಹುಮತ ಗಳಿಸಿರುವುದು ಹಾಗೂ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಅವ ಭಾರಿ ಬಹುಮತದ ಆಯ್ಕೆಯ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಗುಲಾಲ್‌ ಎರಚಿ ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.
Vijaya Karnataka Web BEL-23 HUKKERI 01


ಫಲಿತಾಂಶ ಹೊರಬೀಳುತ್ತಿದ್ದಂತೆ ತಾಲೂಕಿನ ಹಲವಾರು ಗ್ರಾಮಗಳಲ್ಲಿ ಕಾರ್ಯಕರ್ತರು ಅಭಿಮಾನಿಗಳು ಪಟ್ಟಣದ ನಾನಾ ಬಡವಾಣೆ ಹಾಗೂ ಮುಖ್ಯರಸ್ತೆಯಲ್ಲಿ ದ್ವಿಚಕ್ರ ವಾಹನಗಳ ಮೇಲೆ ಬಿಜೆಪಿ ಧ್ವಜ ಹಿಡಿದುಕೊಂಡು ಪ್ರಧಾನಿ ಮೋದಿ ಪರ ಜಯಘೋಷಗಳನ್ನು ಹಾಕಿ ರಾರ‍ಯಲಿ ನಡೆಸಿದರು. ಮತದಾರರಿಗೆ ಸಿಹಿ ಹಂಚುತ್ತಿರುವುದು ವಿಶೇಷವಾಗಿತ್ತು.

ಬೆಳಗ್ಗೆ ಫಲಿತಾಂಶ ನಿರೀಕ್ಷೆಗಾಗಿ ಟಿವಿ ಮುಂದೆ ಕಾದು ಕುಳಿತ ಬಿಜೆಪಿ, ಕಾಂಗ್ರಸ್‌ ಎರಡು ಪಕ್ಷ ದ ಕಾರ್ಯಕರ್ತರು ಸ್ತಬ್ಧರಾಗಿದ್ದರು. ಮಧ್ಯಾಹ್ನದ ನಂತರ ಫಲಿತಾಂಶ ನಿಚ್ಚಳವಾಗುತ್ತಿದ್ದಂತೆ ದ್ವಿಚಕ್ರಗಳ ಮೇಲೆ ಬಿಜೆಪಿ ಧ್ವಜಗಳನ್ನು ಏರಿಸಿಕೊಂಡು ಒಬ್ಬರಿಗೊಬ್ಬರು ಗುಲಾಲ್‌ ಎರಚಿಕೊಂಡು ಸಂಭ್ರಮಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ