ಆ್ಯಪ್ನಗರ

ಹೃದಯಕ್ಕೆ ಚಿಕಿತ್ಸೆ ಬೇಡಿದ ಮಗು

ಬೆಳಗಾವಿ: ಎಲ್ಲರೊಂದಿಗೆ ಆಡಿ ನಲಿಯಬೇಕಿದ್ದ ಒಂಬತ್ತು ತಿಂಗಳ ಪುಟ್ಟ ಮಗುವಿನ ಹೃದಯಕ್ಕೆ ಭಾವನೆಗಳು ಚಿಗುರುವ ಮೊದಲೇ ...

Vijaya Karnataka 8 May 2019, 5:00 am
ಬೆಳಗಾವಿ : ಎಲ್ಲರೊಂದಿಗೆ ಆಡಿ ನಲಿಯಬೇಕಿದ್ದ ಒಂಬತ್ತು ತಿಂಗಳ ಪುಟ್ಟ ಮಗುವಿನ ಹೃದಯಕ್ಕೆ ಭಾವನೆಗಳು ಚಿಗುರುವ ಮೊದಲೇ ಕಾಯಿಲೆಯೊಂದು ಅಪ್ಪಳಿಸಿ ಕಷ್ಟಕ್ಕೆ ನೂಕಿದೆ.
Vijaya Karnataka Web BLG-0705-2-52-7PRAMOD1A


ಬೈಲಹೊಂಗಲ ತಾಲೂಕಿನ ಶ್ರೀಕಾಂತ ದೊಡ್ಡತಮ್ಮಣ್ಣವರ ಮತ್ತು ಹೀನಾ ದಂಪತಿಯ ಮಗು ಶ್ಯಾಮ್‌ ಇಂಥದೊಂದು ಸಮಸ್ಯೆಗೆ ಸಿಲುಕಿದೆ. ಮಗುವಿಗೆ ಹುಟ್ಟಿನಿಂದಲೇ ಹೃದಯದ ಕಾಯಿಲೆ ಇದೆ. ಇಷ್ಟು ದಿನ ಮಾತ್ರೆಯಲ್ಲಿ ಕಡಿಮೆ ಮಾಡುವ ಯತ್ನ ನಡೆದಿತ್ತು. ಹಲವು ರೀತಿಯಲ್ಲಿ ಚಿಕಿತ್ಸೆ ಕೊಡಿಸಿದ್ದರೂ, ಆರ್ಥಿಕ ತೊಂದರೆಯಿಂದ ಅತ್ಯಾಧುನಿಕ ಚಿಕಿತ್ಸೆ ಕೊಡಲು ಸಾಧ್ಯವಾಗಿಲ್ಲ. ಈಗ ಮಗುವಿಗೆ ಶಸ್ತ್ರ ಚಿಕಿತ್ಸೆಯ ಅನಿವಾರ್ಯತೆ ಇದೆ.

ಆ ಶಸ್ತ್ರ ಚಿಕಿತ್ಸೆಯ ಸೌಲಭ್ಯ ಸರಕಾರಿ ಆಸ್ಪತ್ರೆಯಲ್ಲಿಲ್ಲ. ಮಗುವಿನ ಚಿಕಿತ್ಸೆಗೆ ಬೇರೆ ಆಸ್ಪತ್ರೆಗೆ ಹೋಗುವಂತೆ ಜಿಲ್ಲಾಸ್ಪತ್ರೆಯಿಂದಲೇ ಶಿಫಾರಸ್ಸು ಪತ್ರ ಕೊಡಲಾಗಿದೆ. ಆರೋಗ್ಯ ಕರ್ನಾಟಕ ಯೋಜನೆಯಲ್ಲೂ ಮಗುವಿಗಿರುವ ಕಾಯಿಲೆಯ ಶಸ್ತ್ರ ಚಿಕಿತ್ಸೆ ಸೌಲಭ್ಯ ಇಲ್ಲ. ಖಾಸಗಿ ಆಸ್ಪತ್ರೆಯೇ ಈಗ ಗತಿಯಾಗಿದ್ದು, ಅಲ್ಲಿ ಚಿಕಿತ್ಸೆಗೆ 2.50 ಲಕ್ಷ ರೂ. ಖರ್ಚಾಗುತ್ತದೆ ಎಂದು ವೈದ್ಯರು ಹೇಳಿದ್ದಾರೆ. ಅಷ್ಟೊಂದು ಹಣ ಹೊಂದಿಸಲಾಗದೆ ದಂಪತಿ ದಾನಿಗಳ ನೆರವು ಬೇಡಿದ್ದಾರೆ.

ಶ್ರೀಕಾಂತ ದೊಡ್ಡತಮ್ಮಣ್ಣವರ (ಮೊ:7022072100) ಅವರ ಬ್ಯಾಂಕ್‌ ಖಾತೆ ಮಾಹಿತಿ: ಕೆನರಾ ಬ್ಯಾಂಕ್‌, ಉದ್ಯಮಹಾಗ, ಬೆಳಗಾವಿ. ಖಾತೆ ಸಂಖ್ಯೆ- 1829101007491. ಐಎಫ್‌ಎಸ್‌ಸಿ ಕೋಡ್‌: ಸಿಎನ್‌ಆರ್‌ಬಿ0001829.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ