Please enable javascript.Raibag Chinchali Jatra: ಫೆ.5 ರಿಂದ ಚಿಂಚಲಿ ಮಾಯಕ್ಕಾ ದೇವಿ ಜಾತ್ರೆ: ಜಾನುವಾರು ಸಂತೆ, ಎತ್ತುಗಳ ಮಾರಾಟ ನಿಷೇಧ | Vijaya Karnataka

Raibag Chinchali Jatra: ಫೆ.5 ರಿಂದ ಚಿಂಚಲಿ ಮಾಯಕ್ಕಾ ದೇವಿ ಜಾತ್ರೆ: ಜಾನುವಾರು ಸಂತೆ, ಎತ್ತುಗಳ ಮಾರಾಟ ನಿಷೇಧ

Vijaya Karnataka Web 10 Jan 2023, 9:21 am
Subscribe

ಚಿಂಚಲಿ ಮಾಯಕ್ಕಾ ದೇವಿ ಜಾತ್ರೆ ಫೆ.5ರಿಂದ ನಡೆಯುಲಿದೆ. ಜಾನುವಾರುಗಳಿಗೆ ಗಂಟು ರೋಗ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿಈ ವರ್ಷ ಜಾತ್ರೆ ಸಂದರ್ಭದಲ್ಲಿ ಜಾನುವಾರು ಜಾತ್ರೆ ರದ್ದುಗೊಳಿಸಲಾಗಿದೆ. ಚಿಂಚಲಿ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಬೇಕು. ಭಕ್ತರಿಗೆ ಅಗತ್ಯ ಸೌಲಭ್ಯ ಕಲ್ಪಿಸಬೇಕು,'' ಎಂದು ಶಾಸಕ ದುರ್ಯೋಧನ ಐಹೊಳೆ ಹೇಳಿದರು.

ಹೈಲೈಟ್ಸ್‌:

  • ಶಕ್ತಿ ದೇವತೆ ಚಿಂಚಲಿ ಮಾಯಕ್ಕಾ ದೇವಿ ಜಾತ್ರೆ ಫೆ.5ರಿಂದ ನಡೆಯುಲಿದ್ದು, ಜಾತ್ರೆ ಅವಧಿಯಲ್ಲಿ ಜಾನುವಾರು ಸಂತೆ- ಎತ್ತುಗಳ ಮಾರಾಟ ನಿಷೇಧ
  • ಜಾನುವಾರುಗಳಿಗೆ ಗಂಟು ರೋಗ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿಈ ವರ್ಷ ಜಾತ್ರೆ ಸಂದರ್ಭದಲ್ಲಿ ಜಾನುವಾರು ಜಾತ್ರೆ ರದ್ದುಗೊಳಿಸಲಾಗಿದೆ.
  • ಜಾತ್ರೆ ಸಂದರ್ಭದಲ್ಲಿ ಸೂಕ್ತ ಪೊಲೀಸ್‌ ಬಂದೋಬಸ್ತ್ ಮಾಡಲಾಗುವುದು. ಜಾತ್ರೆ ಅವಧಿಯಲ್ಲಿ ಕಬ್ಬು ಸಾಗಿಸಲು ಪರ್ಯಾಯ ರಸ್ತೆಯಲ್ಲಿ ಸಂಚಾರ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು
Duryodhana Aihole
ಸಂಗ್ರಹ ಚಿತ್ರ
ಬಾವನಸೌಂದತ್ತಿ: ಶಕ್ತಿ ದೇವತೆ ಚಿಂಚಲಿ ಮಾಯಕ್ಕಾ ದೇವಿ ಜಾತ್ರೆ ಫೆ.5ರಿಂದ ನಡೆಯುಲಿದ್ದು, ಜಾತ್ರೆ ಅವಧಿಯಲ್ಲಿ ಜಾನುವಾರು ಸಂತೆ- ಎತ್ತುಗಳ ಮಾರಾಟ ನಿಷೇಧಿಸಲಾಗಿದೆ ಎಂದು ಶಾಸಕ ದುರ್ಯೋಧನ ಐಹೊಳೆ ಹೇಳಿದರು.
ಚಿಂಚಲಿ ಪಟ್ಟಣದಲ್ಲಿಆಯೋಜಿಸಿದ್ದ ಚಿಂಚಲಿ ಮಾಯಕ್ಕಾ ದೇವಿ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆಯಲ್ಲಿಅವರು ಮಾತನಾಡಿದರು.

''ಜಾನುವಾರುಗಳಿಗೆ ಗಂಟು ರೋಗ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿಈ ವರ್ಷ ಜಾತ್ರೆ ಸಂದರ್ಭದಲ್ಲಿ ಜಾನುವಾರು ಜಾತ್ರೆ ರದ್ದುಗೊಳಿಸಲಾಗಿದೆ. ಚಿಂಚಲಿ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಬೇಕು. ಭಕ್ತರಿಗೆ ಅಗತ್ಯ ಸೌಲಭ್ಯ ಕಲ್ಪಿಸಬೇಕು,'' ಎಂದು ಅವರು ಸೂಚಿಸಿದರು.

ಸಚಿವ ಸ್ಥಾನದ ಆಸೆ ಇಲ್ಲಎಂದ ದುರ್ಯೋಧನ ಐಹೊಳೆ


ತಹಸೀಲ್ದಾರ ಆರ್‌.ಎಚ್‌.ಭಾಗವಾನ ಮಾತನಾಡಿ, ''ರಾಸಾಯನಿಕ ಮುಕ್ತ ಭಂಡಾರ (ಅರಿಶಿಣ) ಮತ್ತು ಸಿಹಿ ಪದಾರ್ಥಗಳನ್ನು ಮಾತ್ರ ಮಾರಾಟ ಮಾಡಬೇಕು. ಭಕ್ತರಿಗೆ ಶುದ್ಧ ಕುಡಿಯುವ ನೀರು ಪೂರೈಕೆ, ವಿದ್ಯುತ್‌ ದೀಪಗಳ ವ್ಯವಸ್ಥೆ, ಸ್ವಚ್ಛತೆ ಹಾಗೂ ವೈದ್ಯಕೀಯ ವ್ಯವಸ್ಥೆ ಮಾಡಬೇಕು,'' ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಸಿಪಿಐ ರವೀಂದ್ರ ಬಡಫಕೀರಪ್ಪಗೋಳ ಮಾತನಾಡಿ, ಜಾತ್ರೆ ಸಂದರ್ಭದಲ್ಲಿ ಸೂಕ್ತ ಪೊಲೀಸ್‌ ಬಂದೋಬಸ್ತ್ ಮಾಡಲಾಗುವುದು. ಜಾತ್ರೆ ಅವಧಿಯಲ್ಲಿ ಕಬ್ಬು ಸಾಗಿಸಲು ಪರ್ಯಾಯ ರಸ್ತೆಯಲ್ಲಿ ಸಂಚಾರ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.

ಜಾತ್ರೆ ಅವಧಿಯಲ್ಲಿ ಭಕ್ತರ ಅನುಕೂಲಕ್ಕಾಗಿ ಬಸ್‌ ವ್ಯವಸ್ಥೆ, ಕಾಲುವೆಗಳಿಗೆ ನೀರು ಹರಿಸುವುದು ಸೇರಿದಂತೆ ಇತರ ವಿಷಯಗಳ ಕುರಿತು ಚರ್ಚಿಸಲಾಯಿತು.

Boat Found In Maharashtra: ಮಹಾರಾಷ್ಟ್ರ ಕರಾವಳಿಯಲ್ಲಿ ಎಕೆ 47 ಇದ್ದ ದೋಣಿ ಪತ್ತೆ: ಭಯೋತ್ಪಾದನಾ ದಾಳಿ ಪ್ರಯತ್ನದ ಶಂಕೆ
ಜಿತೇಂದ್ರ ಜಾಧವ್‌ ಸರ್ಕಾರ್‌, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ ಕದ್ದು, ಪಿಎಸೈ ಮಾಳಪ್ಪ ಪೂಜೇರಿ, ನಿವೃತ್ತ ಡಿವೈಎಸ್ಪಿ ಪಡೋಲ್ಕರ, ಜಿಪಂ ಎಇಇ ಆರ್‌.ಬಿ.ಮನಿವಡ್ಡರ, ಹಾಲಪ್ಪ ಪೂಜಾರಿ, ಪಿಡಬ್ಲೂಡಿ ಎಇಇ ಕೆ. ಎನ್‌.ಹಂಚಿನಮಣಿ, ತಾಲೂಕಾ ಆರೋಗ್ಯ ಅಧಿಕಾರಿ ಡಾ. ಎಸ್‌.ಎಂ.ಪಾಟೀಲ ಹಾಗೂ ಇತರರು ಉಪಸ್ಥಿತರಿದ್ದರು.

ನಾನಾ ಕಾರ‍್ಯಕ್ರಮ
ಫೆಬ್ರವರಿ 5 ರಿಂದ 14 ರವರೆಗೆ ಮಾಯಕ್ಕದೇವಿ ಜಾತ್ರಾಮಹೋತ್ಸವ ಜರುಗಲಿದೆ. ಫೆ.9 ರಂದು ಮಹಾನೈವೇದ್ಯ ಮತ್ತು ಪಲ್ಲಕ್ಕಿ ಉತ್ಸವ ಜರುಗಲಿದೆ. ಜಾತ್ರೆ ಸಂದರ್ಭದಲ್ಲಿ ನಿತ್ಯ ನಾನಾ ಧಾರ್ಮಿಕ ಕಾರ‍್ಯಕ್ರಮಗಳು ನಡೆಯಲಿವೆ ಎಂದು ಜಾತ್ರೆ ಕಮಿಟಿ ಸದಸ್ಯರು ತಿಳಿಸಿದ್ದಾರೆ.
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ