ಆ್ಯಪ್ನಗರ

ಚಿಂಚಣಿ, ಕಬ್ಬೂರಿನ ಟೋಲ್‌ಗೇಟ್‌ ಪುನಾರಂಭ

ಕಬ್ಬೂರ: ಕರ್ನಾಟಕ ಸರಕಾರದ ನಿರ್ದೇಶನದಂತೆ ...

Vijaya Karnataka 19 Oct 2019, 5:00 am
ಕಬ್ಬೂರ: ಕರ್ನಾಟಕ ಸರಕಾರದ ನಿರ್ದೇಶನದಂತೆ ಕೆಆರ್‌ಡಿಎಲ್‌ಸಿಯವರು ಪಟ್ಟಣದ ಮುಧೋಳ-ನಿಪ್ಪಾಣಿ ರಾಜ್ಯ ಹೆದ್ದಾರಿ 18ರಲ್ಲಿಚಿಂಚಣಿ ಮತ್ತು ಕಬ್ಬೂರಿನಲ್ಲಿಪ್ರಾರಂಭಿಸಿದ್ದ ಟೋಲ್‌ಗೇಟ್‌ಗಳನ್ನು ಸ್ಥಳೀಯರಿಗೆ ವಿನಾಯಿತಿ ಘೋಷಿಸುವ ಮೂಲಕ ಶುಕ್ರವಾರ ಪುನಾರಂಭಿಸಲಾಗಿದೆ.
Vijaya Karnataka Web 18KABBUR01 (3)_53


ಈ ಮೂಲಕ ಟೋಲ್‌ಗೇಟ್‌ ಸ್ಥಾಪನೆ ವಿರುದ್ಧ ಸ್ಥಳೀಯ ನಾಗರಿಕರು ಆರಂಭಿಸಿದ್ದ ಪ್ರಬಲ ಹೋರಾಟಕ್ಕೆ ಜಯ ಸಿಕ್ಕಂತಾಗಿದೆ.

ಕಬ್ಬೂರ ಪಟ್ಟಣ, ನಾಗರಮುನ್ನೋಳಿ ಹಾಗೂ ಜಾಗನೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೀರಾಪುರಹಟ್ಟಿ, ಜೋಡಟ್ಟಿ, ಕೆಂಚನಟ್ಟಿ, ಮಮದಾಪುರ ಕೆ.ಕೆ., ಬೆಳಗಲಿ,ಪೋಗತ್ಯಾನಟ್ಟಿ, ಗ್ರಾಮಗಳ ವ್ಯಾಪ್ತಿಯ ಎಲ್ಲವಾಹನಗಳಿಗೆ ಸಂಪೂರ್ಣವಾಗಿ ಮೂರು ವರ್ಷಗಳ ಕಾಲ ಉಚಿತವಾಗಿ ಓಡಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ಟೋಲ್‌ ಸಂಗ್ರಹದ ಗುತ್ತಿಗೆ ಪಡೆದ ಬೆಂಗಳೂರಿನ ವಿನಯಾ ಲಾಡ್‌ ಎಂಟರ್‌ಪ್ರೈಸಿಸ್‌ ಕಂಪನಿಯವರು ಲಿಖಿತ ಭರವಸೆ ಮೇರೆಗೆ ಟೊಲ್‌ಗೇಟ್‌ ಮುಂದುವರಿಯಲು ಅವಕಾಶ ಕಲ್ಪಿಸಲಾಗಿದೆ.

ಕಬ್ಬೂರ ಪಟ್ಟಣ ಹಾಗೂ ನಾಗರಮುನ್ನೋಳಿ ಮತ್ತು ಜಾಗನೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯವರು ತಮ್ಮ ಯಾವುದೇ ವಾಹನಗಳ ಆರ್‌ಸಿ ಬುಕ್‌ ಮತ್ತು ಆಧಾರ್‌ ಕಾರ್ಡ್‌ ತಂದು ಟೋಲ್‌ನಾಕಾದಲ್ಲಿನೋಂದಣಿ ಮಾಡಿಕೊಂಡು ವಿನಾಯಿತಿ ಪಡೆಯಲು ತಿಳಿಸಲಾಗಿದೆ.

ಈ ಹೆದ್ದಾರಿಯಲ್ಲಿಕೇವಲ 40 ಕಿಮೀ ಅಂತರದಲ್ಲಿಎರಡು ಗೇಟ್‌ಗಳನ್ನು ಪ್ರಾರಂಭಿಸಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದ ಸ್ಥಳೀಯರು ಹಲವು ಹಂತಗಳ ಹೋರಾಟ ನಡೆಸಿ ಅವುಗಳನ್ನು ತಾತ್ಕಾಲಿಕ ಸ್ಥಗಿತಗೊಳಿಸಲು ಕಾರಣವಾಗಿದ್ದರು. ಈ ವಿಷಯದಲ್ಲಿಇತ್ತೀಚೆಗಷ್ಟೇ ನಡೆದಿದ್ದ ಅಧಿಕಾರಿಗಳ ಸಭೆಯಲ್ಲೂಜನಾಕ್ರೋಶ ವ್ಯಕ್ತವಾಗಿತ್ತು.

ಪಿಎಸ್‌ಐ ಬಸವರಾಜ ಅವಟೆ, ಅನಿಲ ಕುಂಬಾರ ಹಾಗೂ ಸಿಪಿಐ ಬಸವರಾಜ ಮುಕರ್ತಿಹಾಳ, ಸತ್ಯೆನಾಯಿಕ ಹಾಗೂ ಪೊಲೀಸ್‌ ಸಿಬ್ಬಂದಿ ಶುಕ್ರವಾರ ಭದ್ರತೆ ಒದಗಿಸಿ ಶಾಂತಿಯಿಂದ ಟೋಲ್‌ಗೇಟ್‌ ಆರಂಭಕ್ಕೆ ಅವಕಾಶ ಕಲ್ಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ