ಆ್ಯಪ್ನಗರ

ಜನರ ಮನಸ್ಸು ಕದ್ದ ಚೋರ್‌ ಮೋದಿ

ರಾಮದುರ್ಗ: ನರೇಂದ್ರ ಮೋದಿ ಒಬ್ಬ ವ್ಯಕ್ತಿಯಲ್ಲ, ಬಹು ದೊಡ್ಡ ಶಕ್ತಿ...

Vijaya Karnataka 22 Apr 2019, 5:00 am
ರಾಮದುರ್ಗ : ನರೇಂದ್ರ ಮೋದಿ ಒಬ್ಬ ವ್ಯಕ್ತಿಯಲ್ಲ, ಬಹು ದೊಡ್ಡ ಶಕ್ತಿ. ಅಲ್ಪ ಅವಧಿಯಲ್ಲಿಯೇ ಹಿಂದೆಂದೂ ಕಂಡರಿಯದಷ್ಟು ದೇಶದ ಅಭಿವೃದ್ಧಿ ಮಾಡಿದ್ದಾರೆ. ಮತ್ತೊಮ್ಮೆ ಅವರನ್ನು ಆಯ್ಕೆ ಮಾಡುವ ಜವಾಬ್ದಾರಿಯನ್ನು ಮತದಾರರು ವಹಿಸಿಕೊಳ್ಳಬೇಕೆಂದು ಕು. ಚೈತ್ರಾ ಕುಂದಾಪುರ ಹೇಳಿದರು.
Vijaya Karnataka Web BEL-21RD3


ತಾಲೂಕಿನ ಸಾಲಹಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡ 'ದೇಶಕ್ಕಾಗಿ ಮೋದಿ, ಮೋದಿಗಾಗಿ ನಾವು' ಎಂಬ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ವಿರೋಧ ಪಕ್ಷ ದವರು ನರೇಂದ್ರ ಮೋದಿ ಅವರನ್ನು 'ಚೌಕಿದಾರ್‌ ಅಲ್ಲ ಚೋರ್‌' ಎನ್ನುತ್ತಿರುವುದು ವಿಪರ್ಯಾಸ. ಮೋದಿ ದೇಶದ ಎಲ್ಲರ ಮನಸ್ಸನ್ನು ಗೆದ್ದ ಚೋರ್‌ ಎಂಬುದು ಎಲ್ಲರಿಗೂ ಗೊತ್ತಿದೆ. ಅಂಥ ಮೋದಿ ಅವರಿಗೆ ಮತ ನೀಡಲು ಮತದಾರರು ನಿರ್ಧರಿಸಬೇಕೆಂದು ಮನವಿ ಮಾಡಿದರು.

ಶಾಸಕ ಮಹಾದೇವಪ್ಪ ಯಾದವಾಡ ಮಾತನಾಡಿ, ಪ್ರಧಾನಿ ಮೋದಿ ಅವರ ಕೈ ಬಲಪಡಿಸಬೇಕಾದರೆ ಸುರೇಶ ಅಂಗಡಿ ಅವರನ್ನು ಆಯ್ಕೆ ಮಾಡಿ ಕಳಿಸಬೇಕಾಗಿದೆ. ತಾಲೂಕಿನಿಂದ 30 ಸಾವಿರ ಮತಗಳ ಲೀಡ್‌ ಕೊಡುವುದಾಗಿ ಭರವಸೆ ನೀಡಿದರು. ಸಂಕಲ್ಪ ಶೆಟ್ಟರ ಮಾತನಾಡಿದರು. ಮಲ್ಲಿಕಾರ್ಜುನ ಕೊಪ್ಪದ ಅಧ್ಯಕ್ಷ ತೆ ವಹಿಸಿದ್ದರು. ತಿಪ್ಪಣ್ಣ ಮುರಗೋಡ, ಅಪ್ಪಾಶಿಗೌಡ ಪಾಟೀಲ, ಶ್ರೀಶೈಲ ಅಂಗಡಿ, ಎಂ.ಬಿ. ಬಟಕುರ್ಕಿ ಸೇರಿದಂತೆ ಇತರ ಮುಖಂಡರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ