ಆ್ಯಪ್ನಗರ

ವಿದ್ಯುತ್‌ ಪರಿವರ್ತಕ ಅಳವಡಿಕೆಗೆ ನಾಗರಿಕರ ಒತ್ತಾಯ

ಬಾವನಸೌಂದತ್ತಿ : ಗ್ರಾಮದ ವಾರ್ಡ್‌ ನಂ...

Vijaya Karnataka 26 Jun 2019, 5:00 am
ಬಾವನಸೌಂದತ್ತಿ: ಗ್ರಾಮದ ವಾರ್ಡ್‌ ನಂ.1ರಲ್ಲಿ ವಿದ್ಯುತ್‌ ಶಾರ್ಟ್‌ ಸಕ್ರ್ಯೂಟ್‌ದಿಂದ ಪರಿವರ್ತಕ ಸುಟ್ಟು ಹೋಗಿ ಹದಿನೈದು ದಿನಗಳು ಕಳೆದರೂ ಹೆಸ್ಕಾಂ ಅಧಿಕಾರಿಗಳು ಅದೇ ಸಾಮರ್ಥ್ಯ‌ದ ಪರ್ಯಾಯ ಟಿಸಿ ಅಳವಡಿಸುವ ವ್ಯವಸ್ಥೆ ಮಾಡದೇ ಸಮಯ ದೂಡುತ್ತಿರುವುದು ವಾರ್ಡ್‌ ನಿವಾಸಿಗಳು ಆಕ್ರೋಶಗೊಳ್ಳುವಂತೆ ಮಾಡಿದೆ.
Vijaya Karnataka Web BEL-25 BSDT 01


ಟಿಸಿ ಸುಟ್ಟುಹೋದ ಸಮಯದಲ್ಲಿ ಇಲ್ಲಿನ ಕೆಲ ಜನರ ಟಿವಿ, ರಿಸೀವರ್‌ಗಳು ಸೇರಿದಂತೆ ಅನೇಕ ಎಲೆಕ್ಟ್ರಿಕಲ್‌ ಪರಿಕರಗಳು ಹಾನಿಗೀಡಾಗಿವೆ. ಗ್ರಾಮದ ವಿದ್ಯುತ್‌ ಪೂರೈಕೆ ಉಸ್ತುವಾರಿ ನೋಡಿಕೊಳ್ಳುವ ಸೆಕ್ಷ ನ್‌ಅಧಿಕಾರಿ ಸುಟ್ಟು ಹೋಗಿರುವ ಟಿಸಿ ದುರಸ್ತಿಗಾಗಿ ಒಯ್ದು ಈವರೆಗೂ ತಂದು ಅಳವಡಿಸುವ ವ್ಯವಸ್ಥೆ ಮಾಡಿಲ್ಲ ಎಂದು ವಾರ್ಡ್‌ನ ನಿವಾಸಿಗಳು ಆರೋಪಿಸಿದ್ದಾರೆ.

ಸುಟ್ಟು ಹೋದ ಟಿಸಿಯಿಂದ ವಿದ್ಯುತ್‌ ಸರಬರಾಜು ಆಗುತ್ತಿದ್ದ ವಾರ್ಡ್‌ಗೆ ಬೇರೆ ಭಾಗದ ಟಿಸಿಯಿಂದ ವಿದ್ಯುತ್‌ ಸರಬರಾಜು ಮಾಡಲಾಗುತ್ತಿದ್ದು ಆ ಟಿಸಿ ಮೇಲೆ ಹೆಚ್ಚಿನ ಲೋಡ್‌ ಬಿದ್ದು ಪದೇ ಪದೇ ವ್ಯತ್ಯಯ ಉಂಟಾಗುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.

ಈ ಟಿಸಿಯಿಂದ ಅಪಾಯ ಸಂಭವಿಸುವ ಆತಂಕವಿದ್ದು, ಕೂಡಲೇ ಹೆಸ್ಕಾಂ ಅಧಿಕಾರಿಗಳು ಟಿಸಿ ರಿಪೇರಿ ಮಾಡಿಸಿ ವಾರ್ಡ್‌ ನಿವಾಸಿಗಳಿಗೆ ಸಮರ್ಪಕ ವಿದ್ಯುತ್‌ ಒದಗಿಸಿಕೊಡಬೇಕು. ಸರಿಯಾಗಿ ಕಾರ್ಯ ನಿರ್ವಹಿಸದ ಇಲ್ಲಿನ ಸೆಕ್ಷ ನ್‌ಅಧಿಕಾರಿಯನ್ನು ಬೇರೆಡೆ ವರ್ಗಾಯಿಸಬೇಕೆಂದು ಒತ್ತಾಯಿಸಿದ್ದಾರೆ.

ಈ ಸಂಬಂಧವಾಗಿ ಈಗಾಗಲೇ ರಾಯಬಾಗ ಹೆಸ್ಕಾಂ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದ್ದು, ಇನ್ನು ಎರಡು ದಿನಗಳಲ್ಲಿ ಟಿಸಿ ಅಳವಡಿಸದಿದ್ದರೆ ರಾಯಬಾಗ ಹೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸುವುದಾಗಿ ಗ್ರಾಪಂ ಸದಸ್ಯ ಅನಿಲ ಹಂಜೆ ಮತ್ತಿತರರು ಎಚ್ಚರಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ