ಆ್ಯಪ್ನಗರ

ಸಿಎಂ ಕೊಟ್ಟ ಮಾತಿನಂತೆ ನಡೆದುಕೊಳ್ಳಲಿ

ಯರಗಟ್ಟಿ: ಮುಖ್ಯಮಂತ್ರಿ ಎಚ್‌ಡಿ...

Vijaya Karnataka 29 May 2018, 5:00 am
ಯರಗಟ್ಟಿ: ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ರೈತರ ಸಾಲ ಸಂಪೂರ್ಣ ಮನ್ನಾ ಮಾಡಿ ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಈರಣ್ಣ ಚಂದರಗಿ ಹೇಳಿದರು.
Vijaya Karnataka Web BEL-28YGTPHOTO1


ಇಲ್ಲಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಬಿಜೆಪಿ ಹಾಗೂ ರೈತ ಸೇನೆ ಕರ್ನಾಟಕ ಸಂಘದವರು ರೈತರ ಸಾಲ ಮನ್ನಾ ಮಾಡಲು ಮುಖ್ಯಮಂತ್ರಿಗೆ ಆಗ್ರಹಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು. ರೈತ ಸೇನಾ ಜಿಲ್ಲಾಧ್ಯಕ್ಷ ಸೋಮು ರೈನಾಪೂರ ಮಾತನಾಡಿ, ಬಿಜೆಪಿ ಕಾರ್ಯಕರ್ತರ ಈ ಹೋರಾಟಕ್ಕೆ ತಮ್ಮ ಸಂಘಟನೆಯ ಬೆಂಬಲ ಇದೆ ಎಂದರು.

ಜಿಪಂ ಸದಸ್ಯ ಅಜಿತಕುಮಾರ ದೇಸಾಯಿ, ಎಪಿಎಮ್‌ಸಿ ಉಪಾಧ್ಯಕ್ಷ ಚಂದ್ರು ಅಳಗೋಡಿ, ಬಸಯ್ಯ ಹಿರೇಮಠ, ಶಿವುಕುಮಾರ ಜಕಾತಿ, ವೆಂಕಣ್ಣ ಹುರುಕನವರ, ಅರವಿಂದಗೌಡ ಪಾಟೀಲ ಮಾತನಾಡಿದರು. ವೆಂಕಣ್ಣ ಕೊಪ್ಪದ, ವೆಂಕಟೇಶ ದೇವರಡ್ಡಿ, ಸದಾನಂದ ಹಣಬರ, ಸಿದ್ದು ದೇವರಡ್ಡಿ, ಇಮಾಮಸಾಬ ಹುಸೇನಾಯ್ಕರ, ಶಿವಾನಂದ ಕರ್ಜಗಿಮಠ, ಪ್ರಕಾಶ ಹೊಸಮನಿ, ಸಿದ್ದಣ್ಣ ವಗ್ಗರ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ