ಆ್ಯಪ್ನಗರ

ಜಾರಕಿಹೊಳಿ ಕೆನ್ನೆ ಸವರಿದ ಎಚ್‌ಡಿಕೆ...CM ಕಾರಲ್ಲಿ ತೆರಳಿದ ಲಕ್ಷ್ಮಿ!

ಬೆಳಗಾವಿಯಲ್ಲಿ ಶನಿವಾರ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಕಾರ್ಯಕ್ರಮಗಳು ಹಲವು ವಿಶೇಷ ಕ್ಷ ಣಗಳಿಗೆ ಸಾಕ್ಷಿಯಾದವು.

Vijaya Karnataka 16 Sep 2018, 8:12 am
ಬೆಳಗಾವಿ: ಬೆಳಗಾವಿಯಲ್ಲಿ ಶನಿವಾರ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಕಾರ್ಯಕ್ರಮಗಳು ಹಲವು ವಿಶೇಷ ಕ್ಷ ಣಗಳಿಗೆ ಸಾಕ್ಷಿಯಾದವು.
Vijaya Karnataka Web BLG-1509-2-52-15RAMESH


ಮುಖ್ಯಮಂತ್ರಿ ವಿಮಾನ ನಿಲ್ದಾಣಕ್ಕೆ ಬಂದಿಳಿಯುವ ಮುನ್ನವೇ ರಾಷ್ಟ್ರಪತಿ ಅಲ್ಲಿಗೆ ಆಗಮಿಸಿದ್ದರು. ರಾಜ್ಯಪಾಲ ವಜುಭಾಯಿ ವಾಲಾ ಮತ್ತು ಅಧಿಕಾರಿಗಳು ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರನ್ನು ಸ್ವಾಗತಿಸಿದರು.

ಮುಖ್ಯಮಂತ್ರಿ ಆಗಮಿಸುತ್ತಿದ್ದಂತೆ ಹೂಗುಚ್ಚ ಕೊಟ್ಟು ಸ್ವಾಗತಿಸಿದ ಸಚಿವ ರಮೇಶ ಜಾರಕಿಹೊಳಿ ಅವರ ಎರಡೂ ಕೆನ್ನೆಗಳನ್ನು ಸವರಿದ ಕುಮಾರಸ್ವಾಮಿ, ಆತ್ಮೀಯತೆಯಿಂದ ಮಾತನಾಡಿಸಿ ಗಮನ ಸೆಳೆದರು. ರಾಷ್ಟ್ರಪತಿಗಳ ಕಾನ್ವೆ ಬೆನ್ನಿಗೇ ಮುಖ್ಯಮಂತ್ರಿಗಳ ಕಾನ್ವೆ ಕೂಡ ಹೊರಟಾಗ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್‌ ಮತ್ತು ಸಂಸದ ಪ್ರಕಾಶ್‌ ಹುಕ್ಕೇರಿ ಕುಮಾರಸ್ವಾಮಿ ಕಾರನ್ನೇರಿದರು. ತಮ್ಮ ಖಾಸಗಿ ಕಾರಿನಲ್ಲಿ ಅಲ್ಲಿಂದ ತೆರಳಿದ ಸಚಿವ ರಮೇಶ ಜಾರಕಿಹೊಳಿ ನಂತರ ಸಂಜೆಯವರೆಗೂ ಎಲ್ಲೂ ಮುಖ್ಯಮಂತ್ರಿಗಳ ಕಾರ್ಯಕ್ರಮದಲ್ಲಿ ಕಾಣಿಸಲೇ ಇಲ್ಲ.

ಲಕ್ಷ್ಮಿ ಹೆಬ್ಬಾಳಕರ್‌ ತಮ್ಮ ಕ್ಷೇತ್ರದ ಕುಮಾರಸ್ವಾಮಿ ಬಡಾವಣೆಯಲ್ಲಿ ಮುಖ್ಯಮಂತ್ರಿ ಸನ್ಮಾನ ಕಾರ್ಯಕ್ರಮ ಹಮ್ಮಿಕೊಂಡಿದ್ದಲ್ಲದೆ, ಬೆಳಗ್ಗೆಯಿಂದ ಸಂಜೆಯವರೆಗೂ ಅವರೊಂದಿಗಿದ್ದಿದ್ದು ವಿಶೇಷವಾಗಿತ್ತು. ಈಚೆಗಷ್ಟೆ ಕಚ್ಚಾಡಿದ್ದ ಶಾಸಕ ಸತೀಶ್‌ ಜಾರಕಿಹೊಳಿ ಹಾಗೂ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್‌ ಕೆಎಲ್‌ಎಸ್‌ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಅಕ್ಕಪಕ್ಕದಲ್ಲಿ ಕುಳಿತು ಗಮನ ಸೆಳೆದರು.

ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ 3 ಗಂಟೆಯಿಂದ 5 ಗಂಟೆಯವರೆಗೆ ಜನತಾ ದರ್ಶನ ನಡೆಸುತ್ತಾರೆ ಎಂದು ನಿಗದಿಯಾಗಿದ್ದರೂ, ಜನತಾದರ್ಶನ ಸ್ಥಳಕ್ಕೆ ಅವರು ಆಗಮಿಸಿದ್ದೇ 5 ಗಂಟೆಗೆ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ