ಆ್ಯಪ್ನಗರ

ವ್ಯವಸ್ಥಿತ ತ್ಯಾಜ್ಯ ನಿರ್ವಹಣೆಗೆ ಸಹಕರಿಸಿ

ರಾಯಬಾಗ: ವ್ಯವಸ್ಥಿತ ತ್ಯಾಜ್ಯ ನಿರ್ವಹಣೆಯಿಂದ ಪರಿಸರ ನೈರ್ಮಲ್ಯ, ಆರೋಗ್ಯ ಪೂರ್ಣ ...

Vijaya Karnataka 23 Sep 2019, 5:00 am
ರಾಯಬಾಗ: ವ್ಯವಸ್ಥಿತ ತ್ಯಾಜ್ಯ ನಿರ್ವಹಣೆಯಿಂದ ಪರಿಸರ ನೈರ್ಮಲ್ಯ, ಆರೋಗ್ಯ ಪೂರ್ಣ ವಾತಾವರಣ ನಿರ್ಮಿಸಬಹುದಾಗಿದೆ. ಹೀಗಾಗಿ ಪಟ್ಟಣದ ಸ್ವಚ್ಛತೆಗೆ ಶ್ರಮ ವಹಿಸುತ್ತಿರುವ ಪೌರಸೇವಾ ಸಿಬ್ಬಂದಿಗೆ ತ್ಯಾಜ್ಯ ವಸ್ತುಗಳ ವಿಲೇವಾರಿಯಲ್ಲಿಸಾರ್ವಜನಿಕರು ಸಹಕರಿಸಬೇಕು ಎಂದು ಮುಖ್ಯಾಧಿಕಾರಿ ಎಸ್‌.ಜಿ. ಪೂಜೇರಿ ಹೇಳಿದರು.
Vijaya Karnataka Web 22RAIBAG1PHOTO_53


ಅವರು, ತಾಲೂಕಿನ ಚಿಂಚಲಿಯಲ್ಲಿಪಟ್ಟಣ ಪಂಚಾಯಿತಿ, ಪ್ರಾಥಮಿಕ ಆರೋಗ್ಯ ಕೇಂದ್ರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗಳ ಸಹಯೋಗದಲ್ಲಿಡೈ-ನಲ್ಮ್‌ ಯೋಜನೆಯಡಿ ಹಮ್ಮಿಕೊಳ್ಳಲಾದ ಆಯುಷ್ಮಾನ್‌ ಭಾರತ, ಜಲಶಕ್ತಿ ಅಭಿಯಾನ ಪೋಷಣ ಅಭಿಯಾನ, ಶಹರಿ ಸಮೃದ್ಧಿ ಯೋಜನೆ ಕುರಿತ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮನೆಗಳಲ್ಲಿಸಂಗ್ರಹವಾಗುವ ಹಸಿ, ಒಣ ಹಾಗೂ ನಿರುಪಯುಕ್ತ ಕಸ ಎಂದು ಮೂರು ಭಾಗಗಳಾಗಿ ಪ್ರತ್ಯೇಕವಾಗಿ ವಿಂಗಡಿಸಿ ಪೌರ ಕಾರ್ಮಿಕರಿಗೆ ನೀಡಬೇಕು ಎಂದರು.

ಉಪನ್ಯಾಸ ನೀಡಿದ ಜಲ ಶಕ್ತಿ ಅಭಿಯಾನದ ಎಸ್‌.ಪಿ. ಕಂಕಣವಾಡಿ ಜಲ ರಕ್ಷಣೆಯ ಅವಶ್ಯಕತೆಯನ್ನು ಮನದಟ್ಟು ಮಾಡಿದರು.

ನೀರಿನ ಬಳಕೆ, ಸ್ವಚ್ಛತೆ, ಘನ ತ್ಯಾಜ್ಯ ನಿರ್ವಹಣೆಯ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲು ಪಟ್ಟಣದ ಪ್ರಮುಖ ಬೀದಿಗಳಲ್ಲಿಘೋಷಣೆಗಳ ಫಲಕಗಳನ್ನು ಪ್ರದರ್ಶಿಸುವ ಜಾಥಾದಲ್ಲಿಶಾಲಾ ಮಕ್ಕಳು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತರು, ಸ್ತ್ರೀಶಕ್ತಿ ಸಂಘ ಹಾಗೂ ಡಾ. ಅಂಬೇಡ್ಕರ್‌ ಸಾಂಸ್ಕೃತಿಕ ಕಲಾ ಸಂಘದವರು ಜನರಲ್ಲಿಜಾಗೃತಿ ಮೂಡಿಸಿದರು.

ಕಾರ್ಯಕ್ರಮದಲ್ಲಿಅಂಗನವಾಡಿ ಮೇಲ್ವಿಚಾರಕಿ ಎಸ್‌.ಆರ್‌. ಪಾಟೀಲ ಪೋಷಕ ಅಭಿಯಾನ, ಮಾನೆ ಆಯುಷ್ಮಾನ್‌ ಭಾರತ, ಡಾ. ಜೀವನ ಹೊಸಟ್ಟಿ, ಆರೋಗ್ಯ ಹಾಗೂ ಶಹರಿ ಸಮೃದ್ಧಿ ಕುರಿತು ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿಹಿರಿಯ ಆರೋಗ್ಯ ಸಹಾಯಕಿ ಡಾ. ಜಿ.ಜಿ. ಗಲಗಲಿ, ಸಚಿನ್‌ ನಿಂಗನೂರೆ, ರವಿ ಖೋತ, ನಾಮದೇವ, ಮೀರಾಸಾಬ ಕೋಥಳಿ, ಲಕ್ಷತ್ರ್ಮಣ ಕೋಳಿಗುಡ್ಡೆ, ಪಿಂಟು ವಡ್ಡರ, ಶ್ರಾವಣ ಕಾಂಬಳೆ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ