ಆ್ಯಪ್ನಗರ

ಸಮ್ಮಿಶ್ರ ಸರಕಾರ ಎಂದರೆ LoC ಇದ್ದಂತೆ: ಸಚಿವ ಜಾರಕಿಹೊಳಿ

ಆಪರೇಷನ್ ಕಮಲ ಕಳೆದ ಏಳು ತಿಂಗಳಿನಿಂದ‌ ನಡೆಸುವ ಪ್ರಯತ್ನ‌‌ ನಡೆಸುತ್ತಿದ್ದಾರೆ. ಆದರೆ, ರಾಜ್ಯದಲ್ಲಿ ಸಮ್ಮಿಶ್ರ ಸರಕಾರ ಭದ್ರವಾಗಿದೆ ಎಂದು ಹೇಳಿದರು.

Vijaya Karnataka Web 26 Jan 2019, 11:54 am
ಬೆಳಗಾವಿ: ಸಮ್ಮಿಶ್ರ ಸರಕಾರ ಎಂದರೆ ಎಲ್ಓಸಿ ( ಲೈನ್ ಆಫ್ ಕಂಟ್ರೋಲ್ ) ಇದ್ದ ಹಾಗೆ. ಈ ಸರಕಾರದಲ್ಲಿ ನಾವೆಲ್ಲ ಕಾಶ್ಮೀರದ ಎಲ್ಓಸಿಯಲ್ಲಿ ಇದ್ದ ಹಾಗೆ ಇದ್ದೇವೆ. ಸದಾ ಎಚ್ಚರಿಕೆಯಲ್ಲಿ ಇರಬೇಕು.
Vijaya Karnataka Web ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ


ಹೀಗೆಂದವರು, ಅರಣ್ಯ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಶನಿವಾರ ಧ್ವಜಾರೋಹಣ ಬಳಿಕ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಆಪರೇಷನ್ ಕಮಲ ಕುರಿತ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿರು. ಒಂದು ಸಾರಿ ಅವರಿಂದ (ಬಿಜೆಪಿ) ದಾಳಿಯಾಗುತ್ತದೆ‌‌. ಇನ್ನೊಂದು ಸಾರಿ ನಮ್ಮಿಂದ ದಾಳಿಯಾಗುತ್ತಿರುತ್ತದೆ. ಈ ಸಾರಿ ನಾವು ಗೆದ್ದಿದ್ದೇವೆ ಎಂದರು.

ಆಪರೇಷನ್ ಕಮಲ ಕಳೆದ ಏಳು ತಿಂಗಳಿನಿಂದ‌ ನಡೆಸುವ ಪ್ರಯತ್ನ‌‌ ನಡೆಸುತ್ತಿದ್ದಾರೆ. ಆದರೆ, ರಾಜ್ಯದಲ್ಲಿ ಸಮ್ಮಿಶ್ರ ಸರಕಾರ ಭದ್ರವಾಗಿದೆ ಎಂದು ಹೇಳಿದರು.

ಸಮ್ಮಿಶ್ರ ಸರಕಾರದಲ್ಲಿ ಒಪ್ಪಂದವಾಗಿದೆ. ಹಿಂದಿನ ಸರಕಾರದ ಯೋಜನೆಗಳನ್ನೇ ಮುಂದುವರೆಸಲಾಗುತ್ತಿದೆ. ಜನಪರ ಯೋಜನೆಗಳನ್ನು ನೀಡಿ ರಾಜ್ಯವನ್ನು ಅಭಿವೃದ್ಧಿ ಪಡಿಸಲಾಗುವುದು. ರೆಸಾರ್ಟ್ ರಾಜಕಾರಣದ ಗಲಾಟೆಯ ಸಂದರ್ಭದಲ್ಲಿ ನಾನು ಅಲ್ಲಿ ಇರಲಿಲ್ಲ ಎಂದರು.

ಇಗಲ್‌ಟನ್ ರೆಸಾರ್ಟ್‌ನಲ್ಲಿ ಶಾಸಕ ಆನಂದ ಸಿಂಗ ಹಾಗೂ ಜೆ.ಎನ್.ಗಣೇಶ ಪರಸ್ಪರ ಗಲಾಟೆ ಮಾಡಿದ‌ ವೇಳೆ ನಾನು ಅಲ್ಲಿ ಇರಲಿಲ್ಲ. ಯಾವ ಕಾರಣಕ್ಕೆ ಜಗಳವಾಡಿದ್ದಾರೆ ಎಂದು ಇನ್ನೂ ತಿಳಿದು‌ ಬಂದಿಲ್ಲ. ಪೊಲೀಸ್‌ರು ತನಿಖೆ ನಡೆಸಿದ್ದು, ನಂತರ ಎಲ್ಲವೂ ತಿಳಿದು ಬರುತ್ತದೆ ಎಂದು ಹೇಳಿದರು.

ರಮೇಶ ಜಾರಕಿಹೊಳಿ ಅವರು ಇನ್ನೂ ಸಿಕ್ಕಿಲ್ಲ. ಅವರನ್ನು‌ ಭೇಟಿ ಮಾಡಿ ಎಂದು ವರಿಷ್ಠರು ಹೇಳಿದ್ದಾರೆ. ಸಮಯ ನೋಡಿ ಮಾತನಾಡುತ್ತೇನೆ ಎಂದು ಹೇಳಿದರು.

ಬೆಳಗಾವಿ ಪ್ರಾಣಿ ಸಂಗ್ರಹಾಲಯದಲ್ಲಿ ಸಫಾರಿ ಆರಂಭಿಸಲು ಈಗಾಗಲೇ ಎರಡು ಹುಲಿಗಳನ್ನು ಕಾಯ್ದಿರಿಸಲಾಗಿದೆ. ಆರು ತಿಂಗಳಲ್ಲಿ ಆ ಹುಲಿಗಳನ್ನು ತಂದು ಬಿಡುತ್ತೇವೆ. ಇದಕ್ಕಾಗಿಯೇ 10 ಕೋಟಿ ರು. ವೆಚ್ಚ ಮಾಡುತ್ತಿದ್ದೇವೆ ಎಂದರು.

ಭೀಮಗಡ ಅರಣ್ಯ ಪ್ರದೇಶದ ಗ್ರಾಮ ಕುಟುಂಬಗಳ ಸ್ಥಳಾಂತರ ಸದ್ಯಕ್ಕೆ ಇಲ್ಲ. ಅರಣ್ಯ ಸಮಿತಿಯ ಸಭೆಯ ಬಳಿಕ ನಿರ್ಣಯ ತೆಗೆದುಕೊಳ್ಳಲಾಗುವುದು ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ