ಆ್ಯಪ್ನಗರ

ಡೈವೋರ್ಸ್‌ ಹಂತದಲ್ಲಿ ‘ಸಮ್ಮಿಶ್ರ’ ಮದುವೆ

ಬೆಳಗಾವಿ: ರಾಜ್ಯದಲ್ಲಿ ಕಾಂಗ್ರೆಸ್‌-ಜೆಡಿಎಸ್‌ ನಡುವಿನ ಬಲವಂತದ ಮದುವೆ ಈಗ ಡೈವೋರ್ಸ್‌ ಹಂತದಲ್ಲಿದ್ದು, ಇನ್ನು 15 ದಿನಗಳಲ್ಲಿ ಸಮ್ಮಿಶ್ರ ಸರಕಾರ ಪತನವಾಗುತ್ತದೆ ...

Vijaya Karnataka 26 Aug 2018, 5:00 am
ಬೆಳಗಾವಿ: ರಾಜ್ಯದಲ್ಲಿ ಕಾಂಗ್ರೆಸ್‌-ಜೆಡಿಎಸ್‌ ನಡುವಿನ ಬಲವಂತದ ಮದುವೆ ಈಗ ಡೈವೋರ್ಸ್‌ ಹಂತದಲ್ಲಿದ್ದು, ಇನ್ನು 15 ದಿನಗಳಲ್ಲಿ ಸಮ್ಮಿಶ್ರ ಸರಕಾರ ಪತನವಾಗುತ್ತದೆ ಎಂದು ಸಂಸದ ಸುರೇಶ ಅಂಗಡಿ ಹೇಳಿದ್ದಾರೆ.
Vijaya Karnataka Web coalition marriage at divorce stage
ಡೈವೋರ್ಸ್‌ ಹಂತದಲ್ಲಿ ‘ಸಮ್ಮಿಶ್ರ’ ಮದುವೆ


ಶನಿವಾರ ನಗರಕ್ಕೆ ಬಂದ ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಚಿತಾಭಸ್ಮ ಮೆರವಣಿಗೆ ವೇಳೆ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ದೇವೇಗೌಡರಾದಿಯಾಗಿ ಹಲವರಿಗೆ ಕಾಂಗ್ರೆಸ್‌ ಮೋಸ ಮಾಡಿದೆ. ಅದರಂತೆ ಸಿದ್ದರಾಮಯ್ಯ ಅವರು ಸದ್ಯದಲ್ಲಿಯೇ ಚಾಪೆ ಜಗ್ಗುವ ಕೆಲಸ ಮಾಡುತ್ತಾರೆ. ಅದಾದ 15 ದಿನಗಳಲ್ಲಿ ಸರಕಾರ ಉರುಳುತ್ತದೆ. ಬೇರೆ ಸರಕಾರ ರಚನೆಯಾಗುತ್ತದೆ ಎಂದರು.

ಮದುವೆ ಮುರಿದು ಬೀಳಲು ಬಿಡೆವು: ಸತೀಶ್‌:

ಬೆಳಗಾವಿ: ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರಕಾರದ ಮದುವೆ ಮುರಿದು ಬೀಳಲು ಬಿಡುವುದಿಲ್ಲ ಎಂದು ಶಾಸಕ ಸತೀಶ ಜಾರಕಿಹೊಳಿ ಹೇಳಿದರು.

ಜಿಲ್ಲಾಧಿಕಾರಿ ಸಭೆ ಬಳಿಕ ಸಂಸದ ಅಂಗಡಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸಮ್ಮಿಶ್ರ ಸರಕಾರ ಐದು ವರ್ಷ ಆಡಳಿತ ನಡೆಸುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ''ಪಕ್ಷದಲ್ಲಿ ಎಲ್ಲವನ್ನೂ ಹೈ ಕಮಾಂಡ್‌ ನಿರ್ಧರಿಸುತ್ತದೆ. ರಾಜಕಾರಣದಲ್ಲಿ ಎಲ್ಲರೂ ಮಿತ್ರರು, ಎಲ್ಲರೂ ಶತ್ರುಗಳು. ಸದ್ಯ ಈಗಿನ ವ್ಯವಸ್ಥೆ ಮುಂದುವರಿಯುತ್ತದೆ'', ಎಂದರು.
ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿ, ''ಇದೆಲ್ಲ ರಾಜಕಾರಣದಲ್ಲಿ ಸಾಮಾನ್ಯ. ರಾಜಕೀಯದಲ್ಲಿ ಹುಷಾರಾಗಿ ಇರಬೇಕು'', ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ