ಆ್ಯಪ್ನಗರ

ಇಮ್ರಾನ್‌ ಕುಟುಂಬದವರಿಗೆ ಪರಿಹಾರ ಚೆಕ್‌ ವಿತರಣೆ

ಹುಕ್ಕೇರಿ : ಪ್ರಾಕೃತಿಕ ವಿಕೋಪಕ್ಕೆ ಬಲಿಯಾಗಿರುವ ಇಮ್ರಾನ್‌ ನದಾಫ್‌ ಕುಟುಂಬಕ್ಕೆ ಸರಕಾರದಿಂದ ದೊರೆಯುವ ಎಲ್ಲ ರೀತಿಯಲ್ಲಿ ಸಹಾಯ ಸಹಕಾರ ನೀಡಲಾಗುವುದು ಎಂದು ...

Vijaya Karnataka 6 Jun 2018, 5:00 am
ಹುಕ್ಕೇರಿ: ಪ್ರಾಕೃತಿಕ ವಿಕೋಪಕ್ಕೆ ಬಲಿಯಾಗಿರುವ ಇಮ್ರಾನ್‌ ನದಾಫ್‌ ಕುಟುಂಬಕ್ಕೆ ಸರಕಾರದಿಂದ ದೊರೆಯುವ ಎಲ್ಲ ರೀತಿಯಲ್ಲಿ ಸಹಾಯ ಸಹಕಾರ ನೀಡಲಾಗುವುದು ಎಂದು ಶಾಸಕ ಉಮೇಶ ಕತ್ತಿ ಹೇಳಿದರು.
Vijaya Karnataka Web BEL-5 HUKKERI 01


ಅವರು ತಾಲೂಕಿನ ತಾಲೂಕಿನ ಕೊಟಬಾಗಿ ಗ್ರಾಮದಲ್ಲಿ ಮಳೆ ನೀರಲ್ಲಿ ಕೊಚ್ಚಿ ಹೋಗಿ ಮೃತಪಟ್ಟ ಇಮ್ರಾನ್‌ ನದಾಫ್‌ ತಾಯಿ ಬೀಬಿ ಆಯೇಶಾ ಅವರಿಗೆ ಪ್ರವಾಹ ಪೀಡಿತರ ಪರಿಹಾರದಲ್ಲಿ 4 ಲಕ್ಷ ಹಾಗೂ ಮುಖ್ಯಮಂತ್ರಿಗಳ ಪರಿಹಾರ ನಿಧಿಧಿಯಡಿ 1 ಲಕ್ಷ ಸೇರಿ ಒಟ್ಟು 5 ಲಕ್ಷ ರೂ. ಗಳ ಪರಿಹಾರ ಧನದ ಚೆಕ್‌ವಿತರಿಸಿ ಮಾತನಾಡಿದರು.

ತಲೆ ತಲಾಂತರಗಳಿಂದ ಟೇಲರಿಂಗ್‌ ಉದ್ಯೋಗ ಮಾಡುತ್ತಿರುವ ಈ ಕುಟುಂಬಕ್ಕೆ ಇಮ್ರಾನ್‌ ಸಾವಿನಿಂದ ಬರಸಿಡಿಲು ಬಡಿದಂತಾಗಿದೆ. ಯಾವುದೇ ಕಾರಣಕ್ಕೆ ಕುಟುಂಬ ಧೈರ್ಯಗೆಡಬಾರದು ಎಂದು ಕತ್ತಿ ಸಾಂತ್ವನ ಹೇಳಿದರು.

ತಹಸೀಲ್ದಾರ್‌ ಅಶೋಕ ಗುರಾಣಿ, ವಿದ್ಯುತ್‌ ಸಹಕಾರಿ ಸಂಘದ ಅಧ್ಯಕ್ಷ ಬಸವರಾಜ ಮರಡಿ, ಬಿಜೆಪಿ ಘಟಕಾಧ್ಯಕ್ಷ ಪರಗೌಡ ಪಾಟೀಲ, ಕಂದಾಯ ನಿರೀಕ್ಷ ಕ ಎಂ.ಎಸ್‌.ಸುಲದಾಳ ಗ್ರಾಮಸ್ಥರು ಉಪಸ್ಥಿತರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ