ಆ್ಯಪ್ನಗರ

ರೇಷ್ಮೆ ಕೃಷಿ ವಲಯ ಅಧಿಕಾರಿಗಳ ಕಚೇರಿ ಸ್ಥಳಾಂತರಕ್ಕೆ ಖಂಡನೆ

ಹುಕ್ಕೇರಿ: ಸಂಕೇಶ್ವರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಹೋಬಳಿ ಮಟ್ಟದ ರೇಷ್ಮೆ ಕೃಷಿ ವಲಯ ಅಧಿಕಾರಿಗಳ ಕಚೇರಿಯನ್ನು ಅಮ್ಮಣಗಿ ಗ್ರಾಮಕ್ಕೆ ...

Vijaya Karnataka 14 Jul 2019, 5:00 am
ಹುಕ್ಕೇರಿ : ಸಂಕೇಶ್ವರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಹೋಬಳಿ ಮಟ್ಟದ ರೇಷ್ಮೆ ಕೃಷಿ ವಲಯ ಅಧಿಕಾರಿಗಳ ಕಚೇರಿಯನ್ನು ಅಮ್ಮಣಗಿ ಗ್ರಾಮಕ್ಕೆ ಸ್ಥಳಾಂತರಿಸಿರುವುದನ್ನು ವಿರೋಧಿಸಿ ಶ್ರೀರಾಮಸೇನಾ ಹಿಂದುಸ್ಥಾನ ಸಂಕೇಶ್ವರ ಘಟಕದ ಪದಾಧಿಕಾರಿಗಳು ಉಪತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.
Vijaya Karnataka Web BEL-13 HUKKERI 01


ಸಂಕೇಶ್ವರದ ಮಾರ್ಕೇಟ್‌ಯಾರ್ಡ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಚೇರಿಯು ಸಂಕೇಶ್ವರ, ಕಣಗಲಾ, ಹೆಬ್ಬಾಳ, ದಡ್ಡಿ, ಅಮ್ಮಣಗಿ ಜಿಪಂ ವ್ಯಾಪ್ತಿಯ ಗ್ರಾಮಗಳಿಗೆ ಕೇಂದ್ರ ಸ್ಥಳವಾಗಿತ್ತು. ಆದರೆ ಸಾರ್ವಜನಿಕರ ಗಮನಕ್ಕೆ ತಾರದೆ ಕಳೆದ ಎರಡು ತಿಂಗಳಿಂದ ಕಚೇರಿಯನ್ನು ಅಮ್ಮಣಗಿ ಗ್ರಾಮಕ್ಕೆ ಸ್ಥಳಾಂತರಿಸಲಾಗಿದೆ. ಇದರಿಂದ ರೈತರಿಗೆ ತುಂಬಾ ಅನಾನುಕೂಲವಾಗುತ್ತಿದೆ. ರೈತರ ಅನುಕೂಲಕ್ಕಾಗಿ ಈ ಮೊದಲಿದ್ದ ಸಂಕೇಶ್ವರ ನಗರಕ್ಕೇ ಕಚೇರಿಯನ್ನು ಪುನಃ ಸ್ಥಳಾಂತರಗೊಳಿಸಬೇಕು. ಇಲ್ಲವಾದರೆ ತೀವ್ರ ಹೋರಾಟ ಮಾಡಲಾಗುವುದೆಂದು ಮನವಿಯಲ್ಲಿ ಸಂಘಟನೆಯವರು ಎಚ್ಚರಿಸಿದ್ದಾರೆ.

ಈ ವೇಳೆ ಸಂಘದ ತಾಲೂಕು ಅಧ್ಯಕ್ಷ ಶಾಮ ಯಾಧವ, ಅಮೂಲ ಗೋಧಂಳಿ, ದೇವರಾಜ ಚೌಗಲಾ, ಯಲ್ಲಪ್ಪ ನಾಯಿಕ, ಇಂದ್ರಜೀತ ಶೆಂಡೆ, ಸಂದೀಪ ಗೋಂದಳಿ, ಶೇಖರ ಸೂರ್ಯವಂಶಿ, ರೇವಣ್ಣಾ ಮ್ಯಾಕ್ಷಿ, ಅಜಯ ಸನದಿ, ಅಭಿ ಬೋರಗಾಂವಿ, ಗೋಪಿ ದವಡತೆ, ಸಂತೋಷ ಶೇಲಾರ ಮತ್ತಿತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ