ಸವದತ್ತಿ : ರಾಜ್ಯದಲ್ಲಿನ ಸರಕಾರಿ ಹಾಸ್ಟೆಲ್ಗಳ ಅವ್ಯವಸ್ಥೆ ಖಂಡಿಸಿ ಸವದತ್ತಿ ತಾಲೂಕು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಘಟಕದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ ಶುಕ್ರವಾರ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.
ಹಾಸ್ಟೆಲ್ಗಳಲ್ಲಿ ವಿದ್ಯಾರ್ಥಿಗಳಿಗೆ ಸಿಗಬೇಕಾದ ಸವಲತ್ತುಗಳು ಸಿಗುತ್ತಿಲ್ಲ ಎಂದು ಸಂಘಟನೆ ಸದಸ್ಯರು ಆರೋಪಿಸಿದರು. ಎಬಿವಿಪಿ ನಗರ ಕಾರ್ಯದರ್ಶಿ ಉಲ್ಲಾಸ ಕಲ್ಲೂರ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಪತ್ರಿಕೆಗಳಲ್ಲಿ ಹಾಸ್ಟೆಲ್ಗಳ ನಿಜ ಮುಖವಾಡವನ್ನು ಬಯಲು ಮಾಡಲಾಗಿದೆ. ಇಷ್ಟಾದರೂ ಸರಕಾರಗಳು ಎಚ್ಚೆತ್ತುಕೊಳ್ಳದೆ ಇರುವುದು ವಿಷಾದನೀಯವಾಗಿದ್ದು, ರಾಜ್ಯ ಸರಕಾರ ಕೂಡಲೇ ಎಚ್ಚೆತ್ತುಕೊಂಡು ಹಾಸ್ಟೆಲ್ಗಳ ಸುಧಾರಣೆಗೆ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು. ತಹಸೀಲ್ದಾರ ಎಮ್.ಎನ್.ಮಠದರವರಿಗೆ ಮನವಿ ಸಲ್ಲಿಸಲಾಯಿತು.
ಶಿವು ಅಂಬಿಗೇರ, ವೀರಣ್ಣ ಚೌಗಲಾ, ವೀರು ಗುಡೆನ್ನವರ, ಸಚಿನ ಚೌಗಲಾ, ಸಂಧ್ಯಾ ಹಳ್ಳಿಕೇರಿ, ಜ್ಯೋತಿ ಮೂಗಬಸವ, ಸಲ್ಮಾ ನದಾಫ ಉಪಸ್ಥಿತರಿದ್ದರು.
ಹಾಸ್ಟೆಲ್ಗಳಲ್ಲಿ ವಿದ್ಯಾರ್ಥಿಗಳಿಗೆ ಸಿಗಬೇಕಾದ ಸವಲತ್ತುಗಳು ಸಿಗುತ್ತಿಲ್ಲ ಎಂದು ಸಂಘಟನೆ ಸದಸ್ಯರು ಆರೋಪಿಸಿದರು. ಎಬಿವಿಪಿ ನಗರ ಕಾರ್ಯದರ್ಶಿ ಉಲ್ಲಾಸ ಕಲ್ಲೂರ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಪತ್ರಿಕೆಗಳಲ್ಲಿ ಹಾಸ್ಟೆಲ್ಗಳ ನಿಜ ಮುಖವಾಡವನ್ನು ಬಯಲು ಮಾಡಲಾಗಿದೆ. ಇಷ್ಟಾದರೂ ಸರಕಾರಗಳು ಎಚ್ಚೆತ್ತುಕೊಳ್ಳದೆ ಇರುವುದು ವಿಷಾದನೀಯವಾಗಿದ್ದು, ರಾಜ್ಯ ಸರಕಾರ ಕೂಡಲೇ ಎಚ್ಚೆತ್ತುಕೊಂಡು ಹಾಸ್ಟೆಲ್ಗಳ ಸುಧಾರಣೆಗೆ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು. ತಹಸೀಲ್ದಾರ ಎಮ್.ಎನ್.ಮಠದರವರಿಗೆ ಮನವಿ ಸಲ್ಲಿಸಲಾಯಿತು.
ಶಿವು ಅಂಬಿಗೇರ, ವೀರಣ್ಣ ಚೌಗಲಾ, ವೀರು ಗುಡೆನ್ನವರ, ಸಚಿನ ಚೌಗಲಾ, ಸಂಧ್ಯಾ ಹಳ್ಳಿಕೇರಿ, ಜ್ಯೋತಿ ಮೂಗಬಸವ, ಸಲ್ಮಾ ನದಾಫ ಉಪಸ್ಥಿತರಿದ್ದರು.