ಆ್ಯಪ್ನಗರ

ಹೋರಾಟ ಹಾದಿಯ ಅವಲೋಕನ ಅಹತ್ಯ

ಮತದಾನ ಜಾಗೃತಿಯಿಂದ ನಮ್ಮ ಶಕ್ತಿಯ ಪ್ರದರ್ಶನ ಮಾಡಬೇಕು. ನಾವೇ ಶಾಸನಸಭೆಗೆ ಹೋಗದಿದ್ದರೂ ನಮ್ಮ ಮಾತು ಕೇಳುವ, ಜನಪರ ಚಿಂತನೆ ಹೊಂದಿದ ಉತ್ತಮ ವ್ಯಕ್ತಿಯನ್ನು ಕಳುಹಿಸಿಕೊಡಬೇಕು. ಆ ಮೂಲಕ ಸಮಾಜದ ಪರಿವರ್ತನೆ, ಪ್ರಗತಿಗೆ ಮುಂದಾಗಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಆರ್‌.ಬಿ. ತಿಮ್ಮಾಪುರ ಹೇಳಿದರು.

Vijaya Karnataka 15 Dec 2018, 5:00 am
ಬೆಳಗಾವಿ: ಮತದಾನ ಜಾಗೃತಿಯಿಂದ ನಮ್ಮ ಶಕ್ತಿಯ ಪ್ರದರ್ಶನ ಮಾಡಬೇಕು. ನಾವೇ ಶಾಸನಸಭೆಗೆ ಹೋಗದಿದ್ದರೂ ನಮ್ಮ ಮಾತು ಕೇಳುವ, ಜನಪರ ಚಿಂತನೆ ಹೊಂದಿದ ಉತ್ತಮ ವ್ಯಕ್ತಿಯನ್ನು ಕಳುಹಿಸಿಕೊಡಬೇಕು. ಆ ಮೂಲಕ ಸಮಾಜದ ಪರಿವರ್ತನೆ, ಪ್ರಗತಿಗೆ ಮುಂದಾಗಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಆರ್‌.ಬಿ. ತಿಮ್ಮಾಪುರ ಹೇಳಿದರು.
Vijaya Karnataka Web BLG-1412-2-52-14RAJU-1


ನಗರದ ಕಾಲೇಜು ರಸ್ತೆಯ ಬೆನನ್‌ಸ್ಮಿತ್‌ ಮೈದಾನದಲ್ಲಿ ಶುಕ್ರವಾರ ಏರ್ಪಡಿಸಿದ್ದ ದಲಿತ ಸಂಘಟನೆಗಳ ಬೃಹತ್‌ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ''ಆವೇಶದ ಮಾತುಗಳಿಗಿಂತ ವಾಸ್ತವ ಅತಿ ಮುಖ್ಯ. ಈ ನಿಟ್ಟಿನಲ್ಲಿ ದಲಿತ ಸಂಘರ್ಷ ಸಮಿತಿಗಳು, ಶೋಷಿತ ಮತ್ತು ಹಿಂದುಳಿದ ವರ್ಗಗಳ ಎಲ್ಲ ಸಂಘಟನೆಗಳು ತಮ್ಮ ಹೋರಾಟದ ಹಾದಿಯ ಕುರಿತು ಆತ್ಮಾವಲೋಕನ ಮಾಡಿಕೊಳ್ಳಬೇಕು. ಒಡೆದ ಸಮಾಜ ಒಂದುಗೂಡಿಸಿ ಕರೆದೊಯ್ಯಬೇಕು'' ಎಂದು ಕಿವಿಮಾತು ಹೇಳಿದರು.

''ಸಾಮಾಜಿಕ ನ್ಯಾಯ ನೀಡಲು ಕೇಂದ್ರ, ರಾಜ್ಯ ಸರಕಾರಗಳು ಸಂವಿಧಾನ ಬದ್ಧವಾಗಿ ರೂಪಿಸಿದ ಕಾಯ್ದೆಗಳ ಆಶಯಕ್ಕೆ ವಿರುದ್ಧವಾಗಿ ಸುಪ್ರೀಂಕೋರ್ಟ್‌ ನೀಡಿರುವ ತೀರ್ಪುಗಳಿಂದ ಮನಸ್ಸಿಗೆ ನೋವಾಗಿದೆ. ಶೋಷಿತರು ಕೂಗು ಹಾಕುವುದಕ್ಕಿಂತ ಮತದಾನ ಶಕ್ತಿಯಿಂದಲೇ ತಮ್ಮ ಹಕ್ಕು ಪಡೆಯುವ ವಿವೇಚನೆ ಬೆಳೆಸಿಕೊಳ್ಳಬೇಕು'' ಎಂದು ಅವರು ಸಲಹೆ ನೀಡಿದರು.

ಮಾನವ ಬಂಧುತ್ವ ವೇದಿಕೆಯ ರಾಜ್ಯ ಸಂಚಾಲಕ ರವೀಂದ್ರ ನಾಯಕರ, ಮುಂಡರಗಿ ನಾಗರಾಜ್‌ ಮಾತನಾಡಿದರು. ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಹೆಣ್ಣೂರು ಶ್ರೀನಿವಾಸ ಅಧ್ಯಕ್ಷ ತೆ ವಹಿಸಿದ್ದರು. ಸತ್ಯ ಭದ್ರಾವತಿ ಸ್ವಾಗತಿಸಿದರು. ಮರೀಶ ನಾಗಣ್ಣವರ ಪ್ರಾಸ್ತಾವಿಕ ಮಾತನಾಡಿದರು. ಎಸ್‌.ಎನ್‌. ಮಲ್ಲಪ್ಪ ನಿರೂಪಿಸಿದರು.

ವಿಜಯ ನರಸಿಂಹ, ಸೂಲಿಕುಂಟೆ ರಮೇಶ, ಪಿ.ಎಸ್‌. ಭೀಮಜ್ಯೋತಿ ಸೀನು, ಡಿ.ಆರ್‌. ಪಾಂಡುರಂಗಸ್ವಾಮಿ, ಎಸ್‌. ವಿಘ್ನೇಶ, ಜೆ. ಶ್ರೀನಿವಾಸಲು, ಎಸ್‌.ಎನ್‌. ಬಳ್ಳಾರಿ, ಪ್ರಕಾಶ ತಳವಾರ, ಮಹಾಂತ ರಂಗಾಪುರಿ, ಬಾಬು ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ