ಆ್ಯಪ್ನಗರ

ಕಾಂಗ್ರೆಸ್‌ ತೈಲ ಕ್ಷೇತ್ರದ ಚಿತ್ರಣ ಮುಚ್ಚಿಡುತ್ತಿದೆ

ಬೈಲಹೊಂಗಲ: ಭಾರತ ಪ್ರಪಂಚದಲ್ಲಿ ನಾಲ್ಕನೇ ಆರ್ಥಿಕ ಸದೃಢ ರಾಷ್ಟ್ರವಾಗಿ ಹೊರಹೊಮ್ಮುವ ...

Vijaya Karnataka 10 Sep 2018, 5:00 am
ಬೈಲಹೊಂಗಲ: ಭಾರತ ಪ್ರಪಂಚದಲ್ಲಿ ನಾಲ್ಕನೇ ಆರ್ಥಿಕ ಸದೃಢ ರಾಷ್ಟ್ರವಾಗಿ ಹೊರಹೊಮ್ಮುವ ಸಂದರ್ಭದಲ್ಲಿ ತೈಲ ಬೆಲೆ ಮಾತ್ರ ಮುಂದಿಟ್ಟುಕೊಂಡು ಕಾಂಗ್ರೆಸ್‌ ಪಕ್ಷ ಭಾರತ ಬಂದ್‌ಗೆ ಕರೆ ನೀಡಿದ್ದು ಪ್ರಜ್ಞಾವಂತ ಭಾರತೀಯರಲ್ಲಿ ಜಿಜ್ಞಾಸೆ ಮೂಡುವಂತಾಗಿದೆ ಎಂದು ಜಿಲ್ಲಾ ಬಿಜೆಪಿ ಗ್ರಾಮೀಣ ಅಧ್ಯಕ್ಷ ಡಾ.ವಿಶ್ವನಾಥ ಪಾಟೀಲ ಲೇವಡಿ ಮಾಡಿದ್ದಾರೆ.
Vijaya Karnataka Web BEL-9HTP4    DR V I PATIL


ಕಾಂಗ್ರೆಸ್‌ ಹಾಗೂ ವಿವಿಧ ಸಂಘಟನೆಗಳು ಕರೆ ನೀಡಿದ ಭಾರತ ಬಂದ್‌ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಭಾನುವಾರ ಸಂಜೆ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ''ಸ್ವತಂತ್ರ ಭಾರತದಲ್ಲಿ ಶೇ. 85ರಷ್ಟು ಅವಧಿ ಆಡಳಿತ ಮಾಡಿದ ಕಾಂಗ್ರೆಸ್‌, ದೇಶವನ್ನು ತೈಲದಲ್ಲಿ ಸ್ವಾವಲಂಬಿ ಮಾಡದೇ, ಆಮದು ಮಾಡಿಕೊಳ್ಳುವುದರಲ್ಲೆ ಕಾಲಹರಣ ಮಾಡಿ, ಈಗ ಕೇಂದ್ರ ಸರಕಾರ ಜಾರಿಗೆ ತಂದ ಜಿಎಸ್‌ಟಿಯಿಂದ ತೈಲವನ್ನು ಹೊರಗಿಡುವಂತೆ ಮಾಡಿ, ತೈಲ ಬೆಲೆ ಏರಿಕೆಯ ವಿರುದ್ಧ ಭಾರತ ಬಂದ್‌ಗೆ ಕಾಂಗ್ರೆಸ್‌ ಕರೆ ನೀಡುತ್ತಿರುವದು ಯಾವ ಪುರುಷಾರ್ಥಕ್ಕಾಗಿ? ತೈಲ ಕ್ಷೇತ್ರದ ವಾಸ್ತವ ಚಿತ್ರಣವನ್ನು ಕಾಂಗ್ರೆಸ್‌ ಸಂಪೂರ್ಣ ಮುಚ್ಚಿಡಲು ಪ್ರಯತ್ನಿಸುತ್ತಿದೆ,'' ಎಂದು ದೂರಿದರು.

''ಎನ್‌ಡಿಎ ಸರಕಾರ ಕಳೆದ 4.5 ವರ್ಷದಲ್ಲಿ 10 ಕೋಟಿ ಅನಿಲ ಸಂಪರ್ಕದಲ್ಲಿ ಬಿಪಿಎಲ್‌ ಕುಟುಂಬಗಳ 5 ಕೋಟಿ ಜನರಿಗೆ ಉಚಿತವಾಗಿ ನೀಡಿದೆ. ಇಂದು ಹಣದುಬ್ಬರ 4.17ಕ್ಕೆ ಇಳಿದರೂ ಕೇವಲ ತೈಲ ಬೆಲೆಯನ್ನು ಮುಂದಿಟ್ಟುಕೊಂಡು ಮುಂಬರುವ ಲೋಕಸಭಾ ಚುನಾವಣೆಗೆ ಗಿಮಿಕ್‌ ಮಾಡುತ್ತಿರುವ ಕಾಂಗ್ರೆಸ್‌ ಪಕ್ಷ ಕ್ಕೆ ದೇಶದ ಜನತೆ ತಕ್ಕ ಪಾಠ ಕಲಿಸಲಿದ್ದಾರೆ. ಆದ್ದರಿಂದ ದೇಶದ ಜನತೆ ಇದನ್ನು ಅಥೈರ್‍ಸಿಕೊಂಡು ಮತ್ತೆ ದೇಶದ ಅಭಿವೃದ್ಧಿಗಾಗಿ ಬಿಜೆಪಿಯನ್ನು ಬೆಂಬಲಿಸಬೇಕು,'' ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ