ಆ್ಯಪ್ನಗರ

ಮೋದಿ ಹುಟ್ಟುಹಬ್ಬದಲ್ಲಿಭಾಗಿಯಾದ ಕೈ ಶಾಸಕ!

ಬೈಲಹೊಂಗಲ (ಬೆಳಗಾವಿ): ಇಲ್ಲಿನ ಕಾಂಗ್ರೆಸ್‌ ಶಾಸಕ ಮಹಾಂತೇಶ್‌ ಕೌಜಲಗಿ ಪ್ರಧಾನಿ ...

Vijaya Karnataka 18 Sep 2019, 5:00 am
ಬೈಲಹೊಂಗಲ (ಬೆಳಗಾವಿ): ಇಲ್ಲಿನ ಕಾಂಗ್ರೆಸ್‌ ಶಾಸಕ ಮಹಾಂತೇಶ್‌ ಕೌಜಲಗಿ ಪ್ರಧಾನಿ ನರೇಂದ್ರ ಮೋದಿ ಜನ್ಮದಿನದ ನಿಮಿತ್ತ ಬಿಜೆಪಿ ಮಂಗಳವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿಪಾಲ್ಗೊಂಡು, ಸಸಿ ನೆಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
Vijaya Karnataka Web 17HTP6_53


ಪಟ್ಟಣದ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿಕಿತ್ತೂರು ಶಾಸಕ ಮಹಾಂತೇಶ್‌ ದೊಡಗೌಡರ ನೇತೃತ್ವದಲ್ಲಿಪ್ರಧಾನಿ ಜನ್ಮದಿನದ ನಿಮಿತ್ತ ವನಮಹೋತ್ಸವ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿಹುಮ್ಮಸ್ಸಿನಿಂದ ಪಾಲ್ಗೊಂಡ ಶಾಸಕ ಮಹಾಂತೇಶ್‌ ಕೌಜಲಗಿ ಎಲ್ಲರ ಹುಬ್ಬೇರುವಂತೆ ಮಾಡಿದರು. ಬಿಜೆಪಿ ಮತ್ತು ಪ್ರಧಾನಿ ಎಂದರೆ ಸಿಡಿಮಿಡಿಗೊಳ್ಳುತ್ತಿದ್ದ ಕೌಜಲಗಿ ಅವರು ಪ್ರಧಾನಿ ಹುಟ್ಟು ಹಬ್ಬವನ್ನು ಸಸಿ ನೆಡುವ ಮೂಲಕ ಆಚರಿಸಿದ್ದು, ಕ್ಷೇತ್ರದಾದ್ಯಂತ ಚರ್ಚೆಗೆ ಗ್ರಾಸ ಒದಗಿಸಿದೆ.

ಶಾಸಕರ ಜತೆಗೆ ಕಾಂಗ್ರೆಸ್‌ನ ಜಿಪಂ ಸದಸ್ಯ ಅನಿಲ್‌ ಮೇಕಲಮರ್ಡಿ, ಮಾಜಿ ಪುರಸಭಾಧ್ಯಕ್ಷ, ಕಾಂಗ್ರೆಸ್‌ ಯುವ ಮುಖಂಡ ರಾಜು ಜನ್ಮಟ್ಟಿ ಕೂಡ ಪಾಲ್ಗೊಂಡಿದ್ದರು. ತಾಪಂ ಉಪಾಧ್ಯಕ್ಷ ಮಲ್ಲನಾಯ್ಕ ಭಾಂವಿ, ನೇಸರಗಿಯ ಆರ್‌ಎಫ್‌ಒ ನಾಗರಾಜ ಬಾಳೇಹೊಸೂರ, ಅರಣ್ಯಾಧಿಕಾರಿಗಳು, ಶಾಲೆಯ ಶಿಕ್ಷಕರು, ಮಕ್ಕಳು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ