ಆ್ಯಪ್ನಗರ

ಸಂವಿಧಾನ ನೀಡಿದ ಹಕ್ಕು, ಕರ್ತವ್ಯಗಳ ಪ್ರಜ್ಞೆ ಪ್ರಜೆಗಳಿಗೆ ಮಾರ್ಗಸೂಚಿ

ಚಿಕ್ಕೋಡಿ : ನಮ್ಮ ದೇಶದ ಸಂವಿಧಾನ ನೀಡಿದ ಹಕ್ಕು ಮತ್ತು ಕರ್ತವ್ಯಗಳ ಪ್ರಜ್ಞೆ ಭಾರತೀಯ ಜನತೆಗೆ ಮಾರ್ಗಸೂಚಿಯಾಗಿದೆ ಎಂದು ಬಸವಜ್ಯೋತಿ ಯುಥ್‌ ಫೌಂಡೇಶನ್‌ ...

Vijaya Karnataka 27 Jan 2019, 5:00 am
ಚಿಕ್ಕೋಡಿ : ನಮ್ಮ ದೇಶದ ಸಂವಿಧಾನ ನೀಡಿದ ಹಕ್ಕು ಮತ್ತು ಕರ್ತವ್ಯಗಳ ಪ್ರಜ್ಞೆ ಭಾರತೀಯ ಜನತೆಗೆ ಮಾರ್ಗಸೂಚಿಯಾಗಿದೆ ಎಂದು ಬಸವಜ್ಯೋತಿ ಯುಥ್‌ ಫೌಂಡೇಶನ್‌ ಅಧ್ಯಕ್ಷ ಬಸವಪ್ರಸಾದ ಜೊಲ್ಲೆ ಹೇಳಿದರು.
Vijaya Karnataka Web BEL-26CKD7


ಅವರು ಶನಿವಾರ ಯಕ್ಸಂಬಾ ಪಟ್ಟಣದ ಜೊಲ್ಲೆ ಉದ್ಯೋಗ ಸಮೂಹದ ಶಿವಶಂಕರ ಜೊಲ್ಲೆ ಶಾಲೆಯಲ್ಲಿ ಆಯೋಜಿಸಿದ್ದ 70 ನೇ ಗಣರಾಜ್ಯೋತ್ಸವ ಸಮಾರಂಭವನ್ನುದ್ದೇಶಿಸಿ ಮಾತನಾಡಿ, ನಮ್ಮ ರಾಷ್ಟ್ರದ ಭವಿಷ್ಯ ಯುವ ಜನಾಂಗದ ಕೈಯಲ್ಲಿದೆ. ಭಾರತೀಯರು ದೇಶಿಯ ಉತ್ಪನ್ನಗಳನ್ನು ಬಳಸುವುದರೊಂದಿಗೆ ಧನಾತ್ಮಕ ಚಿಂತನೆಗಳನ್ನು ಮೈಗೂಡಿಸಿಕೊಂಡು ತಮ್ಮ ಜವಾಬ್ದಾರಿಗಳನ್ನು ನಿಭಾಯಿಸಬೇಕೆಂದು ತಿಳಿಸಿದರು.

ಧ್ವಜಾರೋಹಣವನ್ನು ಆಶಾಜ್ಯೋತಿ ಬುದ್ದಿಮಾಂದ್ಯ ಮಕ್ಕಳ ಶಾಲೆಯ ಅಧ್ಯಕ್ಷ ಜ್ಯೋತಿಪ್ರಸಾದ ಜೊಲ್ಲೆ ನೆರವೇರಿಸಿದರು. ಶಾಲೆಯ ವಿದ್ಯಾರ್ಥಿಗಳು ವಿಜ್ಞಾನದಲ್ಲಿ ರಂಗೋಲಿ, ಸ್ವಾತಂತ್ರ್ಯ ಹೋರಾಟಗಾರರ ಹಾಗೂ ಆಯಾ ರಾಜ್ಯಗಳ ಮುಖ್ಯಮಂತ್ರಿಗಳ ಭಾವಚಿತ್ರದ ಪ್ರದರ್ಶನ, ಭಾಷಣ, ನೃತ್ಯರೂಪಕ, ಪಥ ಸಂಚಲನ, ಕವಾಯತ ಮುಂತಾದ ಕಾರ್ಯಕ್ರಮಗಳ ಮೂಲಕ ದೇಶದ ಐತಿಹಾಸಿಕ ಪರಂಪರೆಗಳನ್ನು ಮೆರೆದರು.

ಮುಖ್ಯಾಧ್ಯಾಪಕ ವಿ.ಆರ್‌.ಭಿವಸೆ , ಬೀರೇಶ್ವರ ಸಂಸ್ಥೆಯ ಅಧ್ಯಕ್ಷ ಜಯಾನಂದ ಜಾಧವ, ಸಂಚಾಲಕರಾದ ಅಪ್ಪಾಸಾಬ ಜೊಲ್ಲೆ, ದಿನಕರ ಪೇಟಕರ, ಲಕ್ಷ ್ಮಣ ಕಬಾಡೆ, ಮಹೇಶ ನೂಲಿ, ಶಾಲೆಯ ಆಡಳಿತ ಮಂಡಳಿ ಸದಸ್ಯರಾದ ಗಂಗೂಬಾಯಿ ಗಜಬರ, ಲಕ್ಷ್ಮೀಬಾಯಿ ಮೇತ್ರೆ, ಲತಾ ವಾಳಕೆ, ಮಹಾದೇವಿ ಡೊಂಗೆರೆ, ಗಿರಿಜಾ ಪಾಟೀಲ, ಅನಸೂಯಾ ಪಾಟೀಲ, ಹಾಗೂ ಜೊಲ್ಲೆ ಉದ್ಯೋಗ ಸಮೂಹದ ಸಂಯೋಜನಾಧಿಕಾರಿ ವಿಜಯ ರಾವುತ, ಎಸ್‌.ಡಿ. ಕುಲಕರ್ಣಿ, ಬೀರೇಶ್ವರ ಸಂಸ್ಥೆಯ ಪ್ರಧಾನ ವ್ಯವಸ್ಥಾಪಕ ಆರ್‌.ಸಿ.ಚೌಗಲಾ, ವಿಜಯ ಖಡಕಬಾವಿ, ಎ.ವಿ. ಕುಲಕರ್ಣಿ, ಸಂಸ್ಥೆಯ ಅಧೀಕ್ಷ ಕ ಮಹಾದೇವ ಪಾಟೀಲ, ಕಾರ್ಯದರ್ಶಿ ತಾನಾಜಿ ಶಿಂಧೆ, ಪ್ರಾಚಾರ್ಯೆ ಗೀತಾ ನಾಯ್ಡು, ಉರ್ಮಿಳಾ ಚೌಗುಲೆ, ಸಹಕಾರ ಶಿಕ್ಷ ಣ ಸಂಸ್ಥೆಯ ಅಂಗಸಂಸ್ಥೆಗಳ ಪ್ರಾಚಾರ್ಯರು, ಉಪನ್ಯಾಸಕರು, ಉಪಸ್ಥಿತರಿದ್ದರು.

ದಿವ್ಯಾ ಕುಂಬಾರ ಸ್ವಾಗತಿಸಿದರು. ಸುಹಾನ್‌ ತಾಂಬೋಳೆ ನಿರೂಪಿಸಿದರು. ತೇಜಶ್ರೀ ಕಟ್ಟೀಕರ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ