ಆ್ಯಪ್ನಗರ

ಮಣ್ಣು ಹಾಕಿ ಮುಚ್ಚುವ ಅಧಿಕಾರಿಗಳ ತಂತ್ರಕ್ಕೆ ಕೆಸರುಗದ್ದೆ ನಿರ್ಮಾಣ

ಬೈಲಹೊಂಗಲ: ಇಲ್ಲಿನ ಪ್ರಮುಖ ಬಜಾರ್‌ ರಸ್ತೆ ಸೇರಿದಂತೆ ಪಟ್ಟಣದ ಬಹುತೇಕ ರಸ್ತೆಗಳಲ್ಲಿ ಗುಂಡಿಗಳೇ ದರ್ಬಾರ್‌ ನಡೆಸುತ್ತಿದ್ದು, ಪಾದಚಾರಿಗಳು ವಾಹನ ಸವಾರರಿಗೆ ...

Vijaya Karnataka 13 Jul 2019, 5:00 am
ಬೈಲಹೊಂಗಲ : ಇಲ್ಲಿನ ಪ್ರಮುಖ ಬಜಾರ್‌ ರಸ್ತೆ ಸೇರಿದಂತೆ ಪಟ್ಟಣದ ಬಹುತೇಕ ರಸ್ತೆಗಳಲ್ಲಿ ಗುಂಡಿಗಳೇ ದರ್ಬಾರ್‌ ನಡೆಸುತ್ತಿದ್ದು, ಪಾದಚಾರಿಗಳು ವಾಹನ ಸವಾರರಿಗೆ ತೀವ್ರ ಅಡಚಣೆ ಉಂಟಾಗಿದೆ.
Vijaya Karnataka Web BEL-12HTP4


ಪಟ್ಟಣದ ಬೆಳಗಾವಿ ಹಾಗೂ ಚನ್ನಮ್ಮನ ವೃತ್ತದಿಂದ ಹಿಡಿದು ಕೇಂದ್ರ ಬಸ್‌ ನಿಲ್ದಾಣ ಆವರಣ, ಬಸ್‌ ನಿಲ್ದಾಣ ರಸ್ತೆ, ರಾಯಣ್ಣ ವೃತ್ತ, ಮುರಗೋಡ, ಹೊಸೂರ ರಸ್ತೆಗಳೆಲ್ಲ ಗುಂಡಿಗಳಿಂದಲೇ ಆವೃತವಾಗಿವೆ. ಇವುಗಳಿಂದ ಅನೇಕ ಜೀವ ಹಾನಿಯಾಗುತ್ತಿದ್ದರೂ ಪುರಸಭೆ, ಲೋಕೋಪಯೋಗಿ ಅಧಿಕಾರಿಗಳು ಗಮನ ಹರಿಸುತ್ತಿಲ್ಲ.

ಕೂಡಲೇ ಪ್ರಮುಖ ರಸ್ತೆಗಳ ಗುಂಡಿ ಮುಚ್ಚಿಸಿ ಮುಂದಾಗುವ ಅನಾಹುತಗಳನ್ನು ತಡೆಯಿರಿ ಎಂದು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಕೆಲ ಯುವಕರು ಅಧಿಕಾರಿಗಳ ಕಾರ್ಯವೈಖರಿ ಖಂಡಿಸಿ ಗುಂಡಿಗಳಲ್ಲಿ ಕಾಗದದ ದೋಣಿ ಬಿಟ್ಟು ವಿನೂತನ ಪ್ರತಿಭಟನೆ ನಡೆಸಿದ್ದಾರೆ. ಇದಕ್ಕೆ ತಕ್ಷ ಣ ಎಚ್ಚೆತ್ತುಕೊಂಡ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಕೆಲ ರಸ್ತೆ ಗುಂಡಿಗಳಲ್ಲಿ ಮಣ್ಣು, ಉಸುಕು, ಮಟ್ಟಿ ಕಲ್ಲು ಹಾಕಿ ಮುಚ್ಚಿದರು. ಆದರೆ ಮಳೆಯಿಂದಾಗಿ ಬಜಾರ್‌ ರಸ್ತೆ ಸಂಪೂರ್ಣ ಕೆಸರು ಗದ್ದೆಯಾಗಿ ವ್ಯಾಪಾರಸ್ಥರಿಗೆ, ಪಾದಚಾರಿಗಳಿಗೆ ತೀವ್ರ ತೊಂದರೆ ಉಂಟು ಮಾಡುತ್ತಿದೆ.

ರಸ್ತೆ ಡಾಂಬರೀಕಣ ಕಾಮಗಾರಿ ಕೈಗೊಳ್ಳಿ ಎಂದು ಅಧಿಕಾರಿಗಳನ್ನು ಕೇಳಿದರೆ ಮಳೆ ನೆಪ ಒಡ್ಡಿ ಜಾರಿಕೊಳ್ಳುತ್ತಿದ್ದಾರೆ. ಬೇಸಿಗೆ ಬಂದ ಮೇಲೆ ರಸ್ತೆ ಡಾಂಬರೀಕರಣಗೊಳಿಸುವುದಾಗಿ ತಿಳಿಸಿ ಸಮಜಾಯಿಸಿ ನೀಡುತ್ತಿದ್ದಾರೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಪಾದಚಾರಿಗಳಿಗೆ, ವಾಹನ ಸವಾರರಿಗೆ ತೊಂದರೆ ಆಗದ ರೀತಿಯಲ್ಲಿ ರಸ್ತೆಯಲ್ಲಿರುವ ಗುಂಡಿಗಳನ್ನು ಶಾಶ್ವತವಾಗಿ ಮುಚ್ಚಿಸಬೇಕು. ಆಗುತ್ತಿರುವ ಅನಾಹುತಗಳನ್ನು ತಪ್ಪಿಸಬೇಕು ಎಂದು ಪ್ರೇಮ ಬಿಳ್ಳೂರ, ವಿಕಾಸ ಕುರ್ಲಿ, ಮಲ್ಲಿಕಾರ್ಜುನ ಗುಳೆನ್ನವರ, ಯುವರಾಜ ಮಹೇಂದ್ರಕರ ಒತ್ತಾಯಿಸಿದ್ದಾರೆ.

ದ್ವಿಚಕ್ರ ವಾಹನ ಸವಾರರು ಮಟ್ಟಿ ಕಲ್ಲಿನಿಂದ ಮುಚ್ಚಿಸಿರುವ ರಸ್ತೆಗಳ ಗುಂಡಿಗಳಲ್ಲಿ ಬೀಳುತ್ತಿದ್ದಾರೆ. ಬಜಾರ್‌ ರಸ್ತೆಯಲ್ಲಂತೂ ಪಾದಚಾರಿಗಳು ನಡೆದುಕೊಂಡು ಹೋಗದ ರೀತಿಯಲ್ಲಿ ಜಾರಿಕೆಯಾಗಿ ನಡೆಯುವುದೇ ದುಸ್ತರವಾಗಿದೆ.
- ಅಜಯ ಭಜಂತ್ರಿ, ಬೈಲಹೊಂಗಲ ಶೋಟ್ಸ್‌ ಫೇಸ್‌ಬುಕ್‌ ಗ್ರುಪ್‌ ಮುಖ್ಯಸ್ಥ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ