ಆ್ಯಪ್ನಗರ

ಸತೀಶ್‌, ಲಖನ್‌ ವಿರುದ್ಧ ವಿರುದ್ಧ ಅಂಬಿರಾವ್‌ ಸ್ಪರ್ಧೆ

ಗೋಕಾಕ: ''ಸತೀಶ್‌ ಜಾರಕಿಹೊಳಿ ಸಹೋದರರ ನಡುವೆ ಜಗಳ ...

Vijaya Karnataka 6 Dec 2019, 10:00 pm
ಗೋಕಾಕ: ''ಸತೀಶ್‌ ಜಾರಕಿಹೊಳಿ ಸಹೋದರರ ನಡುವೆ ಜಗಳ ಹಚ್ಚಿದ್ದಾನೆ. ಅವನ ನೆರಳು ಸಹ ನನ್ನ ಜತೆಗೆ ಬೇಡ. ಮುಂದೆ ಅಂಬಿರಾವ್‌ ಪಾಟೀಲ…ರನ್ನು ಸತೀಶ್‌, ಲಖನ್‌ ವಿರುದ್ಧ ಸ್ಪರ್ಧೆ ಮಾಡಿಸುತ್ತೇನೆ'' ಎಂದು ರಮೇಶ ಜಾರಕಿಹೊಳಿ ಸವಾಲು ಹಾಕಿದ್ದಾರೆ.
Vijaya Karnataka Web contest between ambirao vs satish and lakhan
ಸತೀಶ್‌, ಲಖನ್‌ ವಿರುದ್ಧ ವಿರುದ್ಧ ಅಂಬಿರಾವ್‌ ಸ್ಪರ್ಧೆ


ಮತದಾನದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಹರಾಮಿ ದುಡ್ಡು ಖಾಲಿ ಮಾಡಲು ಲಖನ್‌ ಚುನಾವಣೆಗೆ ಸ್ಪರ್ಧೆ ಮಾಡಿದ್ದಾನೆ'' ಎಂದರು.

ಗೋಕಾಕದಲ್ಲಿಭ್ರಷ್ಟಾಚಾರ ನಡೆದಿದೆ ಎಂದು ಸತೀಶ ಹಾಗೂ ಲಖನ್‌ ಜಾರಕಿಹೊಳಿ ಅವರು ರಮೇಶ ಜಾರಕಿಹೊಳಿ ಅಳಿಯ ಅಂಬಿರಾವ್‌ ಪಾಟೀಲ್‌ ಅವರನ್ನೇ ಗುರಿಯಾಗಿಸಿ ಕಲಹಕ್ಕೆ ಇಳಿದಿದ್ದರು. ಈಗ ಅವರ ವಿರುದ್ಧವೇ ಅಳಿಯನನ್ನು ಕಣಕ್ಕಿಳಿಸುವುದಾಗಿ ರಮೇಶ್‌ ಹಾಕಿರುವ ಸವಾಲು ಮಹತ್ವ ಪಡೆದುಕೊಂಡಿದೆ.

ಸಿದ್ದರಾಮಯ್ಯ ಅವರನ್ನೂ ಬಿಜೆಪಿಗೆ ಕರೆದು ತರುತ್ತೇವೆ
''ಬೆಳಗಾವಿ ಉಸಾಬರಿ ಬಿಟ್ಟರೆ ಡಿಕೆ (ಡಿ.ಕೆ. ಶಿವಕುಮಾರ) ನನ್ನ ಒಳ್ಳೆಯ ಸ್ನೇಹಿತ. ಮುಂದಿನ ದಿನದಲ್ಲಿಸಿದ್ದರಾಮಯ್ಯ ಅವರನ್ನೂ ಬಿಜೆಪಿಗೆ ಕರೆ ತರುತ್ತೇವೆ'' ಎಂದು ಹೇಳಿದ ರಮೇಶ್‌ ಜಾರಕಿಹೊಳಿ, 'ಬಸ್‌ ಸ್ಟ್ಯಾಂಡ್‌ ಹೂ, ಎಸ್‌ಟಿಡಿ ಬೂತ್‌ ಚಿಲ್ಲರೆ ಎಣಿಸಿದ ಹೆಣ್ಣು ಮಗಳ ಬಗ್ಗೆ ಮಾತನಾಡಲ್ಲ'' ಎಂದು ಲಕ್ಷ್ಮೀ ಹೆಬ್ಬಾಳ್ಕರ್‌ ವಿರುದ್ಧವೂ ಖಾರವಾಗಿ ಪ್ರತಿಕ್ರಿಯಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ