ಆ್ಯಪ್ನಗರ

ಅಡುಗೆ ಸಿಲಿಂಡರ್‌ ಸ್ಫೋಟ: ತಪ್ಪಿದ ಅನಾಹುತ

ಬೆಳಗಾವಿ: ನಗರದ ಕಪಿಲೇಶ್ವರ ಮೇಲ್ಸೇತುವೆ ಅಂಚಿನಲ್ಲಿದ್ದ ...

Vijaya Karnataka 18 Nov 2019, 5:00 am
ಬೆಳಗಾವಿ: ನಗರದ ಕಪಿಲೇಶ್ವರ ಮೇಲ್ಸೇತುವೆ ಅಂಚಿನಲ್ಲಿದ್ದ ಶನಿಮಂದಿರದ ಎದುರಿನ ವಡಾ ಪಾವ್‌ ಅಂಗಡಿಯಲ್ಲಿಭಾನುವಾರ ಸಂಜೆ ಅಡುಗೆ ಸಿಲಿಂಡರ್‌ ಸ್ಫೋಟಗೊಂಡಿದ್ದು, ಭಾರೀ ಅನಾಹುತ ತಪ್ಪಿದೆ.
Vijaya Karnataka Web 17PRAMOD3081756
ಸಿಲಿಂಡರ್‌ ಸ್ಫೋಟದ ದೃಶ್ಯ.


ಸೇತುವೆಯ ಒಂದು ತುದಿಗೆ ಹೊಂದಿಕೊಂಡಂತೆ ಇದ್ದ ಸಣ್ಣ ಅಂಗಡಿಯಲ್ಲಿಸಿಲಿಂಡರ್‌ ಸ್ಫೋಟಗೊಂಡಿದೆ. ಸಮೀಪದಲ್ಲಿಯಾರೂ ಇಲ್ಲದೇ ಇದ್ದರಿಂದ ಗಂಭೀರ ಹಾನಿ ಆಗಿಲ್ಲ. ವಡಾಪಾವ್‌ ವ್ಯಾಪಾರಿ ರಮೇಶ ಉಚಗಾಂವಕರ ಎನ್ನುವವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಅಗ್ನಿಶಾಮಕ ದಳ ಸ್ಥಳಕ್ಕೆ ಬಂದು ಸುರಕ್ಷತಾ ಕ್ರಮ ಕೈಗೊಂಡಿದೆ.

ಸಂಜೆ ಅಂಗಡಿಯಲ್ಲಿಗ್ಯಾಸ್‌ ಹಚ್ಚಿದ ತಕ್ಷಣವೇ ಸಿಲಿಂಡರ್‌ನಲ್ಲಿಬೆಂಕಿ ಹೊತ್ತಿಕೊಂಡಿದೆ. ರಮೇಶ ಅವರು ಮಣ್ಣು ಸುರಿದು ಬೆಂಕಿ ಆರಿಸುವ ಯತ್ನ ನಡೆಸಿದರು. ನೋಡ ನೋಡುತ್ತಿದ್ದಂತೆಯೇ ಸಿಲಿಂಡರ್‌ ಸ್ಫೋಟಗೊಂಡಿತು. ಅದರ ಬೆಂಕಿಯ ಕೆನ್ನಾಲಿಗೆ ರಸ್ತೆವರೆಗೂ ವ್ಯಾಪಿಸಿ ಕೆಲ ನಿಮಿಷದಲ್ಲಿಆರಿತು. ಘಟನೆ ನಡೆದಾಗ ಭಾರೀ ಸದ್ದಾಗಿ ಸುತ್ತಲಿನ ಸ್ಥಳದಲ್ಲಿಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಸಿಲಿಂಡರ್‌ ಅಂಗಡಿ ಬಳಿಯೇ ಬಿದ್ದಿತ್ತು. ರೋಹಿತ ಪಾಟೀಲ್‌ ಎನ್ನುವವರಿಗೆ ಸೇರಿದ ಅಂಗಡಿಯಲ್ಲಿರಮೇಶ ವಡಾಪಾವ್‌ ವ್ಯಾಪಾರ ನಡೆಸುತ್ತಿದ್ದ. ಆ ಸ್ಥಳದಲ್ಲಿಕೆಲವೊಮ್ಮೆ ಸಂಚಾರ ದಟ್ಟಣೆ ಆಗುತ್ತಿತ್ತು. ಅದೃಷ್ಟವಶಾತ್‌ ಭಾನುವಾರ ಸಂಜೆ ಅಂಥ ಯಾವುದೇ ಘಟನೆ ನಡೆದಿಲ್ಲಎಂದು ಸ್ಥಳೀಯರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ