ಆ್ಯಪ್ನಗರ

ಬೆಳಗಾವಿ: ತಬ್ಲಿಘಿ ಧಾರ್ಮಿಕ ಸಭೆ, ದೆಹಲಿಯಲ್ಲಿ ಸಿಕ್ಕ ಸಿಮ್‌ ಸೃಷ್ಟಿಸಿದ ಅವಾಂತರ!

ದೇಶದ ರಾಜಧಾನಿಯಲ್ಲಿ ನಡೆದ ಮುಸ್ಲಿಂ ಧಾರ್ಮಿಕ ಸಭೆ ಸಂಚಲನ ಸೃಷ್ಟಿಸಿರುವ ಹಿನ್ನೆಲೆಯಲ್ಲಿ ಬೆಳಗಾವಿಯ ವ್ಯಕ್ತಿಯೋರ್ವನ ಸಿಮ್‌ ಕಾರ್ಡ್‌ ದೆಹಲಿಯಲ್ಲಿ ಸಿಕ್ಕಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ.

Vijaya Karnataka Web 3 Apr 2020, 2:40 pm
ಬೆಳಗಾವಿ: ತಬ್ಲಿಘಿ ಜಮಾತ್‌ನ ಧರ್ಮಸಭೆ ಸಂಚಲನ ಸೃಷ್ಟಿಸಿರುವ ಹಿನ್ನೆಲೆಯಲ್ಲಿ ಪಟ್ಟಣದ ವ್ಯಕ್ತಿಯೋರ್ವನ ಸಿಮ್‌ ಕಾರ್ಡ್‌ ದೆಹಲಿಯಲ್ಲಿ ಸಿಕ್ಕಿದ್ದೀಗ ಅವಾಂತರಕ್ಕೆ ಕಾರಣವಾಗಿದೆ.
Vijaya Karnataka Web Tabligh-e-Jamaat


ಈ ವಿಷಯ ಪಟ್ಟಣದಲ್ಲಿ ಹರಡಿ ಜನ ಭಯಭೀತರಾಗಿದ್ದರು. ಸಿಮ್‌ ಕಾರ್ಡ್‌ ಜಾಡು ಹಿಡಿದ ಬೆಂಗಳೂರಿನ ಡಿಜಿ ಕಚೇರಿಯ ಸಿಪಿಐ ಎಂ.ಆರ್‌. ಪವಾರ್‌ ನೇತೃತ್ವದ ತಂಡ ಐನಾಪುರಕ್ಕೆ ಆಗಮಿಸಿ ಸಂಬಂಧಿಸಿದ ವ್ಯಕ್ತಿಯನ್ನು ವಿಚಾರಣೆಗೊಳಪಡಿಸಿದ್ದಾರೆ.

ಆತ ಮದರಸಾದ ಸ್ನೇಹಿತನೊಬ್ಬನಿಗೆ ಸಿಮ್‌ ಕಾರ್ಡ್‌ ಕೊಟ್ಟಿದ್ದಾಗಿ ಮಾಹಿತಿ ನೀಡಿದ್ದು, ಆತನ ಮೂಲಕ ಬೇರೊಬ್ಬ ವ್ಯಕ್ತಿಗೆ ಸಿಮ್‌ ರವಾನೆಯಾಗಿದೆ. ಸಿಮ್‌ ಪಡೆದು ದೆಹಲಿ ಧರ್ಮಸಭೆಯಲ್ಲಿಭಾಗವಹಿಸಿದ್ದಾತ ಈಗ ದೆಹಲಿಯಲ್ಲೇ ಕ್ವಾರಂಟೈನ್‌ನಲ್ಲಿದ್ದಾನೆ ಎಂದು ತಿಳಿದುಬಂದಿದೆ.

ಚೀನಾದ 'ಹಸಿ ಮಾರುಕಟ್ಟೆ'ಗಳ ಮೇಲೆ ಕ್ರಮ ಯಾವಾಗ?: ಆಸೀಸ್ ಪ್ರಧಾನಿಯ ಪ್ರಶ್ನೆ!


ನಿಜ ವಿಷಯ ತಿಳಿದ ನಂತರ ಪಟ್ಟಣದ ನಾಗರಿಕರು ನಿಟ್ಟುಸಿರುಬಿಟ್ಟಿದ್ದಾರೆ. ಸ್ಥಳೀಯವಾಗಿ ಸಿಮ್‌ ಕಾರ್ಡ್‌ ಹಂಚಿಕೊಂಡ ಇಬ್ಬರ ಮನೆಯವರನ್ನು ಕೂಡ ಪೊಲೀಸರು ಮತ್ತು ವೈದ್ಯಾಧಿಕಾರಿಗಳು ತಪಾಸಣೆಗೊಳಪಡಿಸಿದ್ದಾರೆ.

ಪಿರಮಿಡ್ ರಾಷ್ಟ್ರದಲ್ಲಿ ನಮ್ಮಷ್ಟು ಕಠಿಣವಾಗಿಲ್ಲ ಲಾಕ್‌ಡೌನ್: ಮಿಲಿಟರಿ ಭಯವಿದೆ ಅಂತಾರೆ ಈಜಿಪ್ಟ್‌ ಕನ್ನಡತಿ

ಭಯಭೀತರಾದ ಅಥಣಿ ಜನಅಥಣಿ: ದೆಹಲಿಯ ನಿಜಾಮುದ್ದೀನ್‌ ಪ್ರದೇಶದ ತಬ್ಲಿಘಿ ಧಾರ್ಮಿಕ ಸಮಾವೇಶದಲ್ಲಿಅವಿಭಜಿತ ಅಥಣಿ ತಾಲೂಕಿನ ನಾನಾ ಗ್ರಾಮಗಳ ಸುಮಾರು 15 ಜನ ಪಾಲ್ಗೊಂಡಿದ್ದಾರೆಂದು ತಿಳಿದುಬಂದಿದ್ದು, ತಾಲೂಕಿನ ಜನ ಭಯಭೀತರಾಗಿದ್ದಾರೆ. ಆದರೆ ಅವರೆಲ್ಲ ಈಗ ಬೇರೆ ಬೇರೆ ಕಡೆ ಕ್ವಾರಂಟೈನ್‌ನಲ್ಲಿದ್ದು, ತಾಲೂಕಿಗೆ ಆಗಮಿಸಿಲ್ಲ ಎಂದು ತಾಲೂಕು ಮುಖ್ಯ ವೈದ್ಯಾಧಿಕಾರಿ ಡಾ.ಚನಗೌಡ ಪಾಟೀಲ ಹೇಳಿ ದ್ದಾರೆ. ''ಜನರು ವದಂತಿಗಳಿಗೆ ಕಿವಿಗೊಟ್ಟು ಗಾಬರಿಗೆ ಒಳಗಾಗ ಬೇಡಿ. ಅಥಣಿ ತಾಲೂಕಿನಲ್ಲಿಕೊರೊನಾ ಸೋಂಕು ಪತ್ತೆಯಾಗಿಲ್ಲ'', ಎಂದು ಡಿವೈಎಸ್ಪಿ ಎಸ್‌.ವಿ. ಗಿರೀಶ್‌ ಹೇಳಿದ್ದಾರೆ.

ಬೆಳಗಾವಿ: ತಬ್ಲಿಘಿ ಧಾರ್ಮಿಕ ಸಭೆ, ದೆಹಲಿಯಲ್ಲಿ ಸಿಕ್ಕ ಸಿಮ್‌ ಸೃಷ್ಟಿಸಿದ ಅವಾಂತರ!

ಗುಜರಾತ್‌ ಸಭೆಗೆ ತೆರಳಿದವರು ಪತ್ತೆಯಾಗಿಲ್ಲ

ದೆಹಲಿಯ ನಿಜಾಮುದ್ದೀನ್‌ ಪ್ರದೇಶದ ತಬ್ಲಿಘಿ ಜಮಾತ್‌ ಧಾರ್ಮಿಕ ಕಾರ‍್ಯಕ್ರಮದ ಮಾದರಿಯಲ್ಲೇ ಗುಜರಾತ್‌ನಲ್ಲಿ ನಡೆದ ಧರ್ಮಸಭೆಯಲ್ಲಿ ಜಿಲ್ಲೆಯಿಂದ ಜನರು ಪಾಲ್ಗೊಂಡಿರುವುದು ಈವರೆಗಿನ ವಿಚಾರಣೆಯಲ್ಲಿ ತಿಳಿದುಬಂದಿಲ್ಲ ಎಂದು ಜಿಲ್ಲಾಆರೋಗ್ಯ ಅಧಿಕಾರಿ ಶಶಿಕಾಂತ ಮುನ್ಯಾಳ ತಿಳಿಸಿದ್ದಾರೆ.''ನಿಜಾಮುದ್ದೀನ್‌ನಲ್ಲಿ ಈಚೆಗೆ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬಂದ ಬೆಳಗಾವಿಗರ ಪೈಕಿ ಏ.1 ರವರೆಗೆ ಒಟ್ಟು 62 ಜನರನ್ನು ಜಿಲ್ಲಾಡಳಿತ ಪತ್ತೆ ಮಾಡಿದೆ.

ಎಲ್ಲರ ತಪಾಸಣೆ ನಡೆಸಲಾಗಿದ್ದು ಯಾರಲ್ಲಿಯೂ ಕೊರೊನಾ ವೈಸರ್ ಸೋಂಕು ಕಂಡು ಬಂದಿಲ್ಲ. ಆದರೂ ಆಸ್ತಮಾ, ಮಧುಮೇಹ ಹೀಗೆ ಬೇರೆ ಕಾಯಿಲೆಗಳು ಇರುವ ಮತ್ತು 60 ವರ್ಷ ಮೇಲ್ಪಟ್ಟ
33 ಜನರ ಗಂಟಲು ದ್ರವವನ್ನು ಕೊರೊನಾ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾ ಗಿದೆ'', ಎಂದು ಜಿಲ್ಲಾಧಿಕಾರಿ ಎಸ್‌.ಬಿ. ಬೊಮ್ಮನಹಳ್ಳಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ