ಗೋಕಾಕ: ಗೋಕಾಕ ನಗರಸಭೆ ಕಾಮಗಾರಿಗಳಲ್ಲಿಭ್ರಷ್ಟಾಚಾರ ಮತ್ತು ಸೇಡಿನ ರಾಜಕೀಯ ನಡೆದಿದೆ ಎಂದು ಕಾಂಗ್ರೆಸ್ ಮುಖಂಡ ಲಖನ್ ಜಾರಕಿಹೊಳಿ ಸಹೋದರ ರಮೇಶ್ ಜಾರಕಿಹೊಳಿ ಹಾಗೂ ಅವರ ಅಳಿಯ ಅಂಬಿರಾವ್ ಪಾಟೀಲ್ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದ್ದಾರೆ.
ಗೃಹ ಕಚೇರಿಯಲ್ಲಿ ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ''ಚುನಾವಣೆ ನಂತರ ಶಾಸಕ ರಮೇಶ್ ಜಾರಕಿಹೊಳಿ ಬೆಂಗಳೂರು ಸೇರಿದ್ದರೆ, ಮತ್ತೊಬ್ಬ ಸಹೋದರ ಬಾಲಚಂದ್ರ ಜಾರಕಿಹೊಳಿಯೂ ನಾಪತ್ತೆಯಾಗಿದ್ದಾರೆ. ಇಲ್ಲಿಮತ್ತೆ ಎಂದಿನಂತೆ ಅಳಿಯ ಅಂಬಿರಾವ್ ದಬ್ಬಾಳಿಕೆ ಮುಂದುವರಿದಿದೆ'', ಎಂದು ಕಿಡಿಕಾರಿದರು.
''ಚುನಾವಣೆಯಲ್ಲಿನಮ್ಮನ್ನು ಬೆಂಬಲಿಸಿದ್ದಕ್ಕಾಗಿ ಕಲ್ಲೋಳೆಪ್ಪ ಬಾಗಲಕೋಟಿ ಎಂಬುವರ ವಸತಿ ಸಮುಚ್ಛಯಕ್ಕೆ ಕುಡಿಯುವ ನೀರಿನ ಸಂಪರ್ಕ ಸ್ಥಗಿತಗೊಳಿಸಲಾಗಿದೆ. ನಗರ ಸಭೆ ಶಾಸಕರ ಅಳಿಯನ ಅಣತಿಯಂತೆ ನಡೆದುಕೊಳ್ಳುತ್ತಿದೆ. ಈ ಮೂಲಕ ಚುನಾವಣೆಯಲ್ಲಿನಮ್ಮ ಜತೆ ಗುರ್ತಿಸಿಕೊಂಡವರಿಗೆ ಕಾಡಲು ಪ್ರಾರಂಭಿಸಿದ್ದಾರೆ'', ಎಂದು ದೂರಿದರು.
10 ಕೋಟಿ ಕಿಕ್ಬ್ಯಾಕ್
''ಮಾಸ್ಟರ್ಪ್ಲ್ಯಾನ್ ನೆಪದಲ್ಲಿನಗರಸಭೆ ರಸ್ತೆ ಬದಿ ವ್ಯಾಪಾರಸ್ಥರ ಅಂಗಡಿಗಳನ್ನು ತೆರವುಗೊಳಿಸುತ್ತಿದೆ. ಇದರ ಹಿಂದೆ ಭಾರಿ ಭ್ರಷ್ಟಾಚಾರ ಅಡಗಿದೆ. ಫುಟ್ಪಾತ್ ಟೆಂಡರ್ ನೆಪ ಹೇಳಿ ಅಂಗಡಿಗಳನ್ನು ತೆರವುಗೊಳಿಸಲಾಗುತ್ತಿದೆ. ಫುಟ್ಪಾತ್ಗಾಗಿ ಒಟ್ಟು 24 ಕೋಟಿ ರೂ. ಟೆಂಡರ್ ಪಾಸಾಗಿದೆ. ಇದರಲ್ಲಿಸುಮಾರು ಹತ್ತು ಕೋಟಿ ರೂ. ಕಿಕ್ ಬ್ಯಾಕ್ ಪಡೆಯಲು ಶಾಸಕರ ಅಳಿಯ ಪಿತೂರಿ ನಡೆಸುತ್ತಿದ್ದಾರೆ'', ಎಂದು ಲಖನ್ ಗಂಭೀರ ಆರೋಪ ಮಾಡಿದರು.
ಗೃಹ ಕಚೇರಿಯಲ್ಲಿ ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ''ಚುನಾವಣೆ ನಂತರ ಶಾಸಕ ರಮೇಶ್ ಜಾರಕಿಹೊಳಿ ಬೆಂಗಳೂರು ಸೇರಿದ್ದರೆ, ಮತ್ತೊಬ್ಬ ಸಹೋದರ ಬಾಲಚಂದ್ರ ಜಾರಕಿಹೊಳಿಯೂ ನಾಪತ್ತೆಯಾಗಿದ್ದಾರೆ. ಇಲ್ಲಿಮತ್ತೆ ಎಂದಿನಂತೆ ಅಳಿಯ ಅಂಬಿರಾವ್ ದಬ್ಬಾಳಿಕೆ ಮುಂದುವರಿದಿದೆ'', ಎಂದು ಕಿಡಿಕಾರಿದರು.
''ಚುನಾವಣೆಯಲ್ಲಿನಮ್ಮನ್ನು ಬೆಂಬಲಿಸಿದ್ದಕ್ಕಾಗಿ ಕಲ್ಲೋಳೆಪ್ಪ ಬಾಗಲಕೋಟಿ ಎಂಬುವರ ವಸತಿ ಸಮುಚ್ಛಯಕ್ಕೆ ಕುಡಿಯುವ ನೀರಿನ ಸಂಪರ್ಕ ಸ್ಥಗಿತಗೊಳಿಸಲಾಗಿದೆ. ನಗರ ಸಭೆ ಶಾಸಕರ ಅಳಿಯನ ಅಣತಿಯಂತೆ ನಡೆದುಕೊಳ್ಳುತ್ತಿದೆ. ಈ ಮೂಲಕ ಚುನಾವಣೆಯಲ್ಲಿನಮ್ಮ ಜತೆ ಗುರ್ತಿಸಿಕೊಂಡವರಿಗೆ ಕಾಡಲು ಪ್ರಾರಂಭಿಸಿದ್ದಾರೆ'', ಎಂದು ದೂರಿದರು.
10 ಕೋಟಿ ಕಿಕ್ಬ್ಯಾಕ್
''ಮಾಸ್ಟರ್ಪ್ಲ್ಯಾನ್ ನೆಪದಲ್ಲಿನಗರಸಭೆ ರಸ್ತೆ ಬದಿ ವ್ಯಾಪಾರಸ್ಥರ ಅಂಗಡಿಗಳನ್ನು ತೆರವುಗೊಳಿಸುತ್ತಿದೆ. ಇದರ ಹಿಂದೆ ಭಾರಿ ಭ್ರಷ್ಟಾಚಾರ ಅಡಗಿದೆ. ಫುಟ್ಪಾತ್ ಟೆಂಡರ್ ನೆಪ ಹೇಳಿ ಅಂಗಡಿಗಳನ್ನು ತೆರವುಗೊಳಿಸಲಾಗುತ್ತಿದೆ. ಫುಟ್ಪಾತ್ಗಾಗಿ ಒಟ್ಟು 24 ಕೋಟಿ ರೂ. ಟೆಂಡರ್ ಪಾಸಾಗಿದೆ. ಇದರಲ್ಲಿಸುಮಾರು ಹತ್ತು ಕೋಟಿ ರೂ. ಕಿಕ್ ಬ್ಯಾಕ್ ಪಡೆಯಲು ಶಾಸಕರ ಅಳಿಯ ಪಿತೂರಿ ನಡೆಸುತ್ತಿದ್ದಾರೆ'', ಎಂದು ಲಖನ್ ಗಂಭೀರ ಆರೋಪ ಮಾಡಿದರು.