ಆ್ಯಪ್ನಗರ

ತೆಲಸಂಗ: ಕಾನೂನು ಕೈಗೆತ್ತಿಕೊಳ್ಳದಂತೆ ಸಿಪಿಐ ತಾಕೀತು

ತೆಲಸಂಗ: ಅನ್ಯಾಯವಾಗಿದ್ದರೆ ಕಾನೂನಾತ್ಮಕವಾಗಿ ಹೋರಾಟ ಮಾಡಬೇಕೇ ವಿನಃ ಕಾನೂನು ಉಲ್ಲಂಘನೆಯಾದರೆ ಸಹಿಸಲಾಗದು ಎಂದು ಅಥಣಿ ಸಿಪಿಐ ಅಲಿಸಾಬ ತಾಕೀತು ಮಾಡಿದರು...

Vijaya Karnataka 28 Jun 2019, 5:00 am
ತೆಲಸಂಗ : ಅನ್ಯಾಯವಾಗಿದ್ದರೆ ಕಾನೂನಾತ್ಮಕವಾಗಿ ಹೋರಾಟ ಮಾಡಬೇಕೇ ವಿನಃ ಕಾನೂನು ಉಲ್ಲಂಘನೆಯಾದರೆ ಸಹಿಸಲಾಗದು ಎಂದು ಅಥಣಿ ಸಿಪಿಐ ಅಲಿಸಾಬ ತಾಕೀತು ಮಾಡಿದರು.
Vijaya Karnataka Web BEL-27TELSANG2


ಗ್ರಾಮದ ಮಾದಿಗ ಸಮುದಾಯದಿಂದ ಜಾಗಗಳ ವಿವಾದಕ್ಕೆ ಸಂಬಂಧಿಸಿದಂತೆ ವೀರೇಶ ಬಡಿಗೇರ ಅವರ ಮನೆಯ ತಗಡುಗಳನ್ನು ಕಿತ್ತುಹಾಕಿದ್ದಾರೆನ್ನಲಾದ ಸ್ಥಳಕ್ಕೆ ಗುರುವಾರ ಭೇಟಿ ನೀಡಿದ ಅವರು, ಇಲ್ಲಿ ಯಾರಿಗೂ ಅನ್ಯಾಯವಾಗುವುದು ಬೇಡ. ಅದಕ್ಕೆ ಅವಕಾಶ ಕೊಡುವುದಿಲ್ಲ. ಯಾರದೇ ಜಾಗ ಅತಿಕ್ರಮಣವಾಗಿದ್ದರೆ ತಹಸೀಲ್ದಾರ್‌ ಬಳಿ ಹೋಗಬೇಕು. ಇಲ್ಲವೇ ನ್ಯಾಯಾಲಯದ ಮೊರೆ ಹೋಗಬಹುದು. ಅದನ್ನು ಬಿಟ್ಟು ಕಾನೂನು ಕೈಗೆತ್ತಿಕೊಂಡರೆ ನಿರ್ದಾಕ್ಷಿಣ್ಯವಾಗಿ ಕೇಸು ದಾಖಲಿಸಲಾಗುವುದು ಎಂದು ಎಚ್ಚರಿಸಿದರು.

ನಂತರ ಗ್ರಾಮದ ಹಿರಿಯರೆಲ್ಲ ಸೇರಿ, ಪಂಚಾಯತಿ ನಡೆಸುವ ತೀರ್ಮಾನ ಕೈಗೊಂಡು, ಪರಸ್ಪರ ಮಾತನಾಡಿಸಿ ಸಮಸ್ಯೆ ಕೇಳಿ ಬಗೆಹರಿಸಲು ನಿರ್ಧರಿಸಿದರು. ಸದ್ಯಕ್ಕೆ ಯಾರೂ ಗಲಾಟೆ ಮಾಡದಂತೆ ತಿಳಿಹೇಳುವ ಮೂಲಕ ಪರಿಸ್ಥಿತಿ ತಿಳಿಗೊಳಿಸಿದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿದ್ದು ಪೊಲೀಸ್‌ ವಾಹನ ಬುಧವಾರ ರಾತ್ರಿಯಿಂದಲೇ ಗ್ರಾಮದಲ್ಲಿ ಬೀಡುಬಿಟ್ಟಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ