ಆ್ಯಪ್ನಗರ

ಬೆಳಗಾವಿ: ಬಾವಿಗೆ ಬಿದ್ದ ಮೊಸಳೆ ರಕ್ಷಣೆ

ಖಡಕಲಾಟ: ನಿಪ್ಪಾಣಿ ತಾಲೂಕಿನ ನೆರೆ ಪೀಡಿತ ನಾಗನೂರ ಗ್ರಾಮದಲ್ಲಿ ನದಿ ಪ್ರವಾಹದೊಂದಿಗೆ ನುಸುಳಿ ಬಂದ ಮೊಸಳೆಯನ್ನು ...

Vijaya Karnataka 18 Aug 2019, 5:22 pm
ಖಡಕಲಾಟ : ನಿಪ್ಪಾಣಿ ತಾಲೂಕಿನ ನೆರೆ ಪೀಡಿತ ನಾಗನೂರ ಗ್ರಾಮದಲ್ಲಿ ನದಿ ಪ್ರವಾಹದೊಂದಿಗೆ ನುಸುಳಿ ಬಂದ ಮೊಸಳೆಯನ್ನು ಶನಿವಾರ ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಹಿಡಿದಿದ್ದಾರೆ.
Vijaya Karnataka Web BLG-1708-2-52-17 KLT 5


ಗ್ರಾಮದ ಕೋಗಲೆ ಕುಟುಂಬಕ್ಕೆ ಸೇರಿದ ಸುಮಾರು 40 ಅಡಿ ಬಾವಿಯಲ್ಲಿ ಸುಮಾರು 10 ಅಡಿ ಉದ್ದದ ಮೊಸಳೆ ಕಾಣಿಕೊಂಡಿತ್ತು. ಅರಣ್ಯ ಇಲಾಖೆ ಸಿಬ್ಬಂದಿ ಪ್ರಭಾಕರ ಗೋಕಾಕ ಮತ್ತು ಇತರ ಸಿಬ್ಬಂದಿ ಕ್ರೇನ್‌ ಸಹಾಯದಿಂದ ಮೊಸಳೆಯನ್ನು ಸೆರೆ ಹಿಡಿದರು.

ಗ್ರಾಮದ ಗೌರಾಬಾಯಿ ನಿಂಬಾಳಕರ ಎಂಬ ಮಹಿಳೆ ಶುಕ್ರವಾರ ಬಾವಿಯ ಮೋಟರ್‌ ಸ್ವಿಚ್‌ ಆನ್‌ ಮಾಡಲು ಹೋದಾಗ ಬಾವಿಯ ಕಟ್ಟೆಯ ಮೇಲೆ ಮೊಸಳೆ ಕಂಡಿತ್ತು. ಕೂಡಲೇ ಅವರು ತಮ್ಮ ಪುತ್ರ ಸಂತೋಷ ಮತ್ತಿತರರನ್ನು ಕರೆದು ವಿಷಯ ತಿಳಿಸಿದರು. ನಂತರ ದಯಾನಂದ ಕೋಗಲೆ ಅರಣ್ಯ ಮತ್ತು ಪೊಲೀಸ್‌ ಇಲಾಖೆಗೆ ಸಂಪರ್ಕಿಸಿ ಮೊಸಳೆ ಪ್ರತ್ಯಕ್ಷವಾಗಿರುವ ಕುರಿತು ಮಾಹಿತಿ ನೀಡಿದರು.

ಆದರೆ ಮೊಸಳೆ ಸುಮಾರು 40 ಅಡಿ ನೀರಿನಲ್ಲಿದ್ದುದರಿಂದ ಅದನ್ನು ಹಿಡಿಯುವುದು ಕಷ್ಟಕರವಾಗಿತ್ತು. ಶನಿವಾರ ಬೆಳಗ್ಗೆ ಬಾವಿಯ ನೀರನ್ನು ಮೋಟರ್‌ ಮೂಲಕ ತೆಗೆಯಲಾಯಿತು. ನಂತರ ಪ್ರಭಾಕರ ಗೋಕಾಕ ಕ್ರೇನ್‌ ಮೂಲಕ ಬಾವಿಗಿಳಿದು ಅದನ್ನು ಸೆರೆಹಿಡಿದರು. ಅಲ್ಲಿಯವರೆಗೆ ಆತಂಕದಲ್ಲಿದ್ದ ಗ್ರಾಮಸ್ಥರು ನಿಟ್ಟುಸಿರು ಬಿಟ್ಟರು.

ವಿವೇಕ ಕೋಗಲೆ, ಅಮೃತ ಪಾಟೀಲ, ವಿಠ್ಠಲ್‌ ಕೋಗಲೆ, ಬಾಳಾಸಾಹೇಬ ಕೋಗಲೆ, ಸಂದೀಪ ಖದರೆ, ಅನಿಲ ಚೌಗುಲೆ, ವಿಜಯ ಪರೀಟ, ಗ್ರಾಪಂ ಸದಸ್ಯ ಸುಶಾಂತ ಪಾಟೀಲ, ಭೀಮರಾವ ಹಜಾರೆ, ಬಾಬಾಜಿ ಬನ್ನೆ, ಕಿರಣ ಕಾಂಬಳೆ, ಸಾಗರ ಚೆಂಡಕೆ ಮೊಸಳೆ ಸೆರೆ ಹಿಡಿಯಲು ಅರಣ್ಯ ಇಲಾಖೆಗೆ ಸಹಕರಿಸಿದರು. ಮೊಸಳೆಯನ್ನು ಕಟ್ಟಿ ವಾಹನದಲ್ಲಿ ಹಾಕಿಕೊಂಡು ಹೋದ ಗೋಕಾಕ ಅವರು ಅದನ್ನು ಹಿಡಕಲ್‌ ಡ್ಯಾಂನಲ್ಲಿ ಬಿಡಲಾಗುವುದು ಎಂದು ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ