ಆ್ಯಪ್ನಗರ

ಸೈಕಲ್‌ ಸ್ಪರ್ಧೆ: ಕುನ್ನೂರ ಗ್ರಾಮದ ಸವಾರರಿಗೆ ಜಯ

ಐನಾಪುರ: ಐನಾಪುರದ ಶ್ರೀ ಸಿದ್ಧೇಶ್ವರ ದೇವರ 49ನೇ ಜಾತ್ರೆ ನಿಮಿತ್ತ ಆಯೋಜಿಸಿದ್ದ ಪುರುಷರ ಸೈಕಲ್‌ ಸ್ಪರ್ಧೆಯಲ್ಲಿ ಜಮಖಂಡಿ ತಾಲೂಕಿನ ಕುನ್ನೂರ ಗ್ರಾಮದ 3 ...

Vijaya Karnataka 17 Jan 2019, 5:00 am
ಐನಾಪುರ : ಐನಾಪುರದ ಶ್ರೀ ಸಿದ್ಧೇಶ್ವರ ದೇವರ 49ನೇ ಜಾತ್ರೆ ನಿಮಿತ್ತ ಆಯೋಜಿಸಿದ್ದ ಪುರುಷರ ಸೈಕಲ್‌ ಸ್ಪರ್ಧೆಯಲ್ಲಿ ಜಮಖಂಡಿ ತಾಲೂಕಿನ ಕುನ್ನೂರ ಗ್ರಾಮದ 3 ಸೈಕಲ್‌ ಸವಾರರು ಗೆದ್ದಿದ್ದಾರೆ.
Vijaya Karnataka Web BEL-16 AINAPUR 1 NEWS PHOTO


ಬುಧವಾರ ಬೆಳಗ್ಗೆ ಜರುಗಿದ ಸೈಕಲ್‌ ಸ್ಪರ್ಧೆಯಲ್ಲಿ ಜಮಖಂಡಿ ತಾಲೂಕಿನ ಕುನ್ನೂರ ಗ್ರಾಮದ ಶ್ರೀಧರ ಪ್ರಥಮ, ಬಾಗಲಕೋಟ ಜಿಲ್ಲೆಯ ಬೀಳಗಿ ತಾಲೂಕಿನ ಸಂತೋಷ ಹಳ್ಳಿ ದ್ವಿತೀಯ, ಜಮಖಂಡಿ ತಾಲೂಕಿನ ಕುನ್ನೂರ ಗ್ರಾಮದ ಬಸು ಬಾಗಲಕೋಟ ತೃತೀಯ ಮತ್ತು ಸಂದೇಶ ಉಪ್ಪಾರ ಚತುರ್ಥ ಸ್ಥಾನ ಪಡೆದಿದ್ದಾರೆ.

ಸ್ಪರ್ಧಾವಿಜೇತರಿಗೆ ಅನುಕ್ರಮವಾಗಿ 7001, 5001, 3001, 1001 ರೂ. ನಗದು ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು. ಉಗಾರ ಖುರ್ದ ಕಿರಾಣಿ ವ್ಯಾಪಾರಿ ಅಣ್ಣಾಸಾಬ ಸಾಂಗಲೆ, ನಿಂಗಪ್ಪಾ ಚೌಗಲಾ, ಮಲ್ಲಪ್ಪಾ ಪಾಟೀಲ, ರಾಜು ಅಡಿಶೇರಿ, ಸುಹಾನ್‌ ಕಮತೆ ಬಹುಮಾನ ವಿತರಿಸಿದರು.

ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ರವೀಂದ್ರ ಗಾಣಿಗೇರ, ಜಾತ್ರಾ ಕಮಿಟಿ ಅಧ್ಯಕ್ಷ ಸುಭಾಷ ಪಾಟೀಲ, ಗುಂಡೆವಾಡಿ ಗ್ರಾಮದ ಮುಖಂಡ ರಾವಸಾಹೇಬ ಪಾಟೀಲ, ಪಾಯಪ್ಪಾ ಕುಡವಕ್ಕಲಗಿ, ಗ್ರಾಮದ ಗೌಡರು, ಜಾತ್ರಾ ಕಮಿಟಿ ಪ್ರಮುಖರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ