ಆ್ಯಪ್ನಗರ

ಸೈಕಲ್‌ ಕಳುವು ಆರೋಪಿ ಬಂಧನ: 6 ಸೈಕಲ್‌ ವಶ

ಇಚಲಕರಂಜಿ: ಕಳುವು ಮಾಡಿದ ಸೈಕಲ್‌ ಮೇಲೆ ತೆರಳುವಾಗ ಎದುರಾದ ಪೊಲೀಸರನ್ನು ಕಂಡು ತನ್ನಷ್ಟಕ್ಕೆ ತಾನೇ ಭಯಪಟ್ಟು ...

Vijaya Karnataka 24 Aug 2018, 5:00 am
ಇಚಲಕರಂಜಿ: ಕಳುವು ಮಾಡಿದ ಸೈಕಲ್‌ ಮೇಲೆ ತೆರಳುವಾಗ ಎದುರಾದ ಪೊಲೀಸರನ್ನು ಕಂಡು ತನ್ನಷ್ಟಕ್ಕೆ ತಾನೇ ಭಯಪಟ್ಟು ಓಡಿ ಹೋಗಲೆತ್ನಿಸಿದ ಯುವಕ ಈಗ ಪೊಲೀಸರ ಅತಿಥಿಯಾಗಿದ್ದಾನೆ.
Vijaya Karnataka Web cycle stolen accused arrested 6 bicycles recovered
ಸೈಕಲ್‌ ಕಳುವು ಆರೋಪಿ ಬಂಧನ: 6 ಸೈಕಲ್‌ ವಶ


ಯೋಗೇಶ ಉತ್ತಮ ತುಪರವಾಡಕರ (22) ಸಿಕ್ಕಿಬಿದ್ದ ಆರೋಪಿ. ನಗರದ ಶಹಾಪುರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಪೊಲಿಸರು ಗಸ್ತು ತಿರುಗುತ್ತಿದ್ದಾಗ ಧನಗರಮಾಳ ಪರಿಸರದಲ್ಲಿ ಈತ ರೇಸರ್‌ ಸೈಕಲ್‌ನಲ್ಲಿ ತೆರಳುತ್ತಿದ್ದ. ಎದುರಿಗೆ ಬಂದ ಪೋಲಿಸರನ್ನು ಕಂಡವನೇ ತನ್ನಷ್ಟಕ್ಕೆ ತಾನೇ ಆತಂಕಗೊಂಡು ಸೈಕಲ್‌ನ್ನು ರಸ್ತೆಯಲ್ಲಿಯೇ ಬಿಟ್ಟು ಓಡತೊಡಗಿದ. ಇದರಿಂದ ಸಂಶಯಗೊಂಡ ಪೊಲೀಸರು ಆತನನ್ನು ವಶಕ್ಕೆ ತೆಗೆದುಕೊಂಡು ವಿಚಾರಿಸಿದಾಗ ಸ್ಟೇಶನ್‌ ರಸ್ತೆಯಲ್ಲಿರುವ ಪಂಚಗಂಗಾ ಸಕ್ಕರೆ ಕಾರ್ಖಾನೆಯ ಮೇನ್‌ಗೇಟ್‌ ಬಳಿಯ ಸೈಕಲ್‌ ಸ್ಟ್ಯಾಂಡ್‌ನಿಂದ ರೇಸರ್‌ ಸೈಕಲ್‌ ಕಳ್ಳತನ ಮಾಡಿ ತಂದಿರುವುದಾಗಿ ತಿಳಿಸಿದ್ದಾನೆ.

ಇನ್ನಷ್ಟು ವಿಚಾರಣೆಗೆ ಗುರಿಪಡಿಸಿದಾಗ ಬಟ್ಟೆ ಮಾರುಕಟ್ಟೆ, ರಾಧಾಕೃಷ್ಣ ಟಾಕೀಸ್‌, ಡೆಕ್ಕನ್‌ ನೂಲಿನ ಗಿರಣಿ ಪರಿಸರದಿಂದ ರೇಸರ್‌, ರೇಂಜರ್‌ ಹಾಗೂ ಅಟ್ಲಾಸ್‌ ಕಂಪನಿಗಳ 6 ಸೈಕಲ್‌ಗಳನ್ನು ಕಳ್ಳತನ ಮಾಡಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ. ಎಲ್ಲ ಆರೂ ಸೈಕಲ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು ಇವುಗಳ ಮೌಲ್ಯ 44ಸಾವಿರ ರೂ. ಎಂದು ಅಂದಾಜಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ