ಬೆಳಗಾವಿ : ಸಂವಿಧಾನ ಇಲ್ಲದೇ ಹೋದರೆ ಜಾತಿ, ಮೂಲಭೂತವಾದ ಎಲ್ಲೆಡೆ ರಾರಾಜಿಸಿ ದೇಶದಲ್ಲಿ ಅರಾಜಕತೆ ನಿರ್ಮಾಣವಾಗುತ್ತದೆ ಎಂದು ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ ದಾಸ್ ಹೇಳಿದರು.
ಮಾನವ ಬಂಧುತ್ವ ವೇದಿಕೆ ವತಿಯಿಂದ ಡಾ. ಬಿ.ಆರ್. ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ದಿನ ನಿಮಿತ್ತ ಇಲ್ಲಿನ ಸದಾಶಿವನಗರದ ಸ್ಮಶಾನದಲ್ಲಿ ಗುರುವಾರ ನಡೆದ ಮೌಢ್ಯ ವಿರೋಧಿ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
''ಭಾರತದ ಸಂವಿಧಾನವನ್ನು ಕೆಲವರು ಬದಲಾಯಿಸುವುದಾಗಿ ಹೇಳುತ್ತಿದ್ದರೂ ಪರಾರಯಯ ಏನು ಎಂಬುದರ ಬಗ್ಗೆ ಮೌನವಾಗಿದ್ದಾರೆ. ಇಂಥದ್ದಕ್ಕೆ ಅವಕಾಶ ನೀಡಬಾರದು. ಆಯಾ ಧರ್ಮಗಳಿಗೆ ಧರ್ಮಗ್ರಂಥ ಇರುವಂತೆ ಇಡೀ ದೇಶಕ್ಕೆ ಸಂವಿಧಾನ ಧರ್ಮ ಗ್ರಂಥ. ಇದರಲ್ಲಿ ದೋಷವಿಲ್ಲ, ಆದರೆ ಅನುಷ್ಠಾನದ ರೀತಿಯಲ್ಲಿ ದೋಷವಿದೆ ಎಂಬುದನ್ನು ನಾವೆಲ್ಲ ಅರಿತುಕೊಳ್ಳಬೇಕಿದೆ'', ಎಂದು ಕಿವಿಮಾತು ಹೇಳಿದರು.
''ನಮಗೆ ಗಟ್ಟಿ ಸಂವಿಧಾನ ನೀಡಿದ ಡಾ. ಬಿ.ಆರ್. ಅಂಬೇಡ್ಕರ್ ಅವರ ಬಗ್ಗೆ ಜನ ಅಮಲು ಬೆಳೆಸಿಕೊಳ್ಳುವುದಕ್ಕಿಂತ ಅವರ ವಿಚಾರಗಳ ತಿಳಿವಳಿಕೆ ಪಡೆಯಬೇಕು. ರಾಜಕಾರಣದಲ್ಲಿ ನಿತ್ಯ ಮೌಲ್ಯಗಳು ಕುಸಿಯುತ್ತಿವೆ. ಜಾತಿ, ಮೂಲಭೂತವಾದ, ಅಸಹಿಷ್ಣುತೆ ಸಮಸ್ಯೆಯಾಗಿ ಕಾಡುತ್ತಿದೆ. ಇಂಥ ಸಂದರ್ಭದಲ್ಲಿ ನಾವೆಲ್ಲ ಸಂವಿಧಾನ ಓದಿ ಅರ್ಥೈಸಿಕೊಂಡು ಒಂದಾಗಿ ಹೋಗಬೇಕು. ಆಗ ಹಕ್ಕು ಬಾಧ್ಯತೆಗಳು ಗೊತ್ತಾಗುತ್ತವೆ'', ಎಂದು ಅವರು ಸಲಹೆ ನೀಡಿದರು.
ಡಾ. ಜಿ. ಪ್ರಶಾಂತ ನಾಯಕ ಬರೆದಿರುವ 'ದಾರ್ಶನಿಕ ದಾರಿ' ಕೃತಿ ಮತ್ತು ವೈಚಾರಿಕ ಚಿಂತನೆಯ ಧ್ವನಿ ಸುರುಳಿಯನ್ನು ಬಿಡುಗಡೆ ಮಾಡಲಾಯಿತು. ಬಾಬುರಾವ್ ನಡೋಣಿ ಮತ್ತು ಕಲಾವಿದರ ತಂಡದ ಮೌಢ್ಯವಿರೋಧಿ ಕಲಾಕೃತಿಗಳ ರಚನೆಗೆ ಚಾಲನೆ ಕೊಡಲಾಯಿತು. ಕಾರ್ಯಕ್ರಮದ ರೂವಾರಿ ಶಾಸಕ ಸತೀಶ್ ಜಾರಕಿಹೊಳಿ ಅಧ್ಯಕ್ಷತೆ ವಹಿಸಿದ್ದರು. ಬಸವಕಲ್ಯಾಣದ ಶ್ರೀ ಡಾ. ಬಸವಲಿಂಗ ಪಟ್ಟದ್ದೇವರು, ಕಲಬುರಗಿಯ ಶ್ರೀ ವಿಶ್ವನಾಥ ಕೊರಣೇಶ್ವರ ಅಪ್ಪಗಳು ಹಾಗೂ ಇತರೆ ಗಣ್ಯರು ಮಾತನಾಡಿದರು.
ಲಿಂ. ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮೀಜಿ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮೂಲಕ ಕಾರ್ಯಕ್ರಮ ಉದ್ಘಾಟಿಸಲಾಯಿತು. ಮಾನವ ಬಂಧುತ್ವ ವೇದಿಕೆ ಕಲಾ ತಂಡದವರು ಆಶಯ ಮತ್ತು ಕ್ರಾಂತಿ ಗೀತೆ ಹಾಡಿದರು. ವಿದ್ಯಾರ್ಥಿನಿ ಏಕತಾ ಕಾಡಪ್ಪ ಮಸಾನೆ ವೈಚಾರಿಕ ಭಾಷಣ ಮಾಡಿದರು. ವಿಲ್ಫ್ರೆಡ್ ಡಿಸೋಜಾ ಪ್ರಾಸ್ತಾವಿಕ ಮಾತನಾಡಿದರು. ಅನಂತ ನಾಯ್ಕ್, ಕೆ.ಎಸ್. ಸತೀಶ್ಕುಮಾರ ನಿರೂಪಿಸಿದರು. ಆರ್. ಜಯಕುಮಾರ ವಂದಿಸಿದರು. ಗೋಷ್ಠಿ, ಕಲಾ ಪ್ರದರ್ಶನಗಳು ನಡೆದವು.
ಚಿಂತನೆಯಲ್ಲಿರುವ ಮೌಢ್ಯ ತೊಲಗಿಸಿ: ಬರಗೂರು :
ಜನಪರ ಚಿಂತಕ ನಾಡೋಜ ಡಾ. ಬರಗೂರು ರಾಮಚಂದ್ರಪ್ಪ, ಮೌಢ್ಯದ ಮೂಲ ಮತ್ತು ಅದರಿಂದ ವಿಮೋಚನೆ ಗೊಳ್ಳುವ ಕುರಿತು ವಿವರಿಸಿದರು. ''ಚಿಂತನೆಯಲ್ಲಿರುವ ಮೌಢ್ಯವನ್ನು ತೊಲಗಿಸಿದರೆ ಆಚರಣೆಗಳಲ್ಲಿರುವ ಮೌಢ್ಯಗಳು ಕಡಿಮೆಯಾಗುತ್ತವೆ. ಮಠಮಾನ್ಯಗಳು ಮೌಢ್ಯದಿಂದ ಮುಕ್ತಗೊಳ್ಳಬೇಕು. ಅವು ಜಾತಿಕೇಂದ್ರಗಳಾಗದೆ ಧರ್ಮಕೇಂದ್ರಗಳಾಗಿಯೇ ಉಳಿಯಬೇಕು. ಅಧಿಕಾರದ ಕೇಂದ್ರಗಳೂ ಇದಕ್ಕೆ ಹೊರತಲ್ಲ. ಸಂವಿಧಾನ ಬಹುತ್ವವನ್ನು ಪ್ರತಿಪಾದಿಸುತ್ತದೆ. ನಾವು ವೈಯಕ್ತಿಕತೆಯನ್ನು ಬದಿಗಿರಿಸಿ ಇದನ್ನು ಗೌರವಿಸಬೇಕು'', ಎಂದು ಪ್ರತಿಪಾದಿಸಿದರು.
ಮೌಢ್ಯದಲ್ಲಿ ಶೋಷಣೆ ಇದೆ. ಮೇಲು ಕೀಳು ಇದೆ. ಇದನ್ನು ತೊಡೆದು ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು. ಮಾನವ ಬಂಧುತ್ವ ವೇದಿಕೆ ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ ಕೆಲಸ.
- ಎಚ್.ಎನ್. ನಾಗಮೋಹನ ದಾಸ್, ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ
ಮಾನವ ಬಂಧುತ್ವ ವೇದಿಕೆ ವತಿಯಿಂದ ಡಾ. ಬಿ.ಆರ್. ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ದಿನ ನಿಮಿತ್ತ ಇಲ್ಲಿನ ಸದಾಶಿವನಗರದ ಸ್ಮಶಾನದಲ್ಲಿ ಗುರುವಾರ ನಡೆದ ಮೌಢ್ಯ ವಿರೋಧಿ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
''ಭಾರತದ ಸಂವಿಧಾನವನ್ನು ಕೆಲವರು ಬದಲಾಯಿಸುವುದಾಗಿ ಹೇಳುತ್ತಿದ್ದರೂ ಪರಾರಯಯ ಏನು ಎಂಬುದರ ಬಗ್ಗೆ ಮೌನವಾಗಿದ್ದಾರೆ. ಇಂಥದ್ದಕ್ಕೆ ಅವಕಾಶ ನೀಡಬಾರದು. ಆಯಾ ಧರ್ಮಗಳಿಗೆ ಧರ್ಮಗ್ರಂಥ ಇರುವಂತೆ ಇಡೀ ದೇಶಕ್ಕೆ ಸಂವಿಧಾನ ಧರ್ಮ ಗ್ರಂಥ. ಇದರಲ್ಲಿ ದೋಷವಿಲ್ಲ, ಆದರೆ ಅನುಷ್ಠಾನದ ರೀತಿಯಲ್ಲಿ ದೋಷವಿದೆ ಎಂಬುದನ್ನು ನಾವೆಲ್ಲ ಅರಿತುಕೊಳ್ಳಬೇಕಿದೆ'', ಎಂದು ಕಿವಿಮಾತು ಹೇಳಿದರು.
''ನಮಗೆ ಗಟ್ಟಿ ಸಂವಿಧಾನ ನೀಡಿದ ಡಾ. ಬಿ.ಆರ್. ಅಂಬೇಡ್ಕರ್ ಅವರ ಬಗ್ಗೆ ಜನ ಅಮಲು ಬೆಳೆಸಿಕೊಳ್ಳುವುದಕ್ಕಿಂತ ಅವರ ವಿಚಾರಗಳ ತಿಳಿವಳಿಕೆ ಪಡೆಯಬೇಕು. ರಾಜಕಾರಣದಲ್ಲಿ ನಿತ್ಯ ಮೌಲ್ಯಗಳು ಕುಸಿಯುತ್ತಿವೆ. ಜಾತಿ, ಮೂಲಭೂತವಾದ, ಅಸಹಿಷ್ಣುತೆ ಸಮಸ್ಯೆಯಾಗಿ ಕಾಡುತ್ತಿದೆ. ಇಂಥ ಸಂದರ್ಭದಲ್ಲಿ ನಾವೆಲ್ಲ ಸಂವಿಧಾನ ಓದಿ ಅರ್ಥೈಸಿಕೊಂಡು ಒಂದಾಗಿ ಹೋಗಬೇಕು. ಆಗ ಹಕ್ಕು ಬಾಧ್ಯತೆಗಳು ಗೊತ್ತಾಗುತ್ತವೆ'', ಎಂದು ಅವರು ಸಲಹೆ ನೀಡಿದರು.
ಡಾ. ಜಿ. ಪ್ರಶಾಂತ ನಾಯಕ ಬರೆದಿರುವ 'ದಾರ್ಶನಿಕ ದಾರಿ' ಕೃತಿ ಮತ್ತು ವೈಚಾರಿಕ ಚಿಂತನೆಯ ಧ್ವನಿ ಸುರುಳಿಯನ್ನು ಬಿಡುಗಡೆ ಮಾಡಲಾಯಿತು. ಬಾಬುರಾವ್ ನಡೋಣಿ ಮತ್ತು ಕಲಾವಿದರ ತಂಡದ ಮೌಢ್ಯವಿರೋಧಿ ಕಲಾಕೃತಿಗಳ ರಚನೆಗೆ ಚಾಲನೆ ಕೊಡಲಾಯಿತು. ಕಾರ್ಯಕ್ರಮದ ರೂವಾರಿ ಶಾಸಕ ಸತೀಶ್ ಜಾರಕಿಹೊಳಿ ಅಧ್ಯಕ್ಷತೆ ವಹಿಸಿದ್ದರು. ಬಸವಕಲ್ಯಾಣದ ಶ್ರೀ ಡಾ. ಬಸವಲಿಂಗ ಪಟ್ಟದ್ದೇವರು, ಕಲಬುರಗಿಯ ಶ್ರೀ ವಿಶ್ವನಾಥ ಕೊರಣೇಶ್ವರ ಅಪ್ಪಗಳು ಹಾಗೂ ಇತರೆ ಗಣ್ಯರು ಮಾತನಾಡಿದರು.
ಲಿಂ. ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮೀಜಿ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮೂಲಕ ಕಾರ್ಯಕ್ರಮ ಉದ್ಘಾಟಿಸಲಾಯಿತು. ಮಾನವ ಬಂಧುತ್ವ ವೇದಿಕೆ ಕಲಾ ತಂಡದವರು ಆಶಯ ಮತ್ತು ಕ್ರಾಂತಿ ಗೀತೆ ಹಾಡಿದರು. ವಿದ್ಯಾರ್ಥಿನಿ ಏಕತಾ ಕಾಡಪ್ಪ ಮಸಾನೆ ವೈಚಾರಿಕ ಭಾಷಣ ಮಾಡಿದರು. ವಿಲ್ಫ್ರೆಡ್ ಡಿಸೋಜಾ ಪ್ರಾಸ್ತಾವಿಕ ಮಾತನಾಡಿದರು. ಅನಂತ ನಾಯ್ಕ್, ಕೆ.ಎಸ್. ಸತೀಶ್ಕುಮಾರ ನಿರೂಪಿಸಿದರು. ಆರ್. ಜಯಕುಮಾರ ವಂದಿಸಿದರು. ಗೋಷ್ಠಿ, ಕಲಾ ಪ್ರದರ್ಶನಗಳು ನಡೆದವು.
ಚಿಂತನೆಯಲ್ಲಿರುವ ಮೌಢ್ಯ ತೊಲಗಿಸಿ: ಬರಗೂರು :
ಜನಪರ ಚಿಂತಕ ನಾಡೋಜ ಡಾ. ಬರಗೂರು ರಾಮಚಂದ್ರಪ್ಪ, ಮೌಢ್ಯದ ಮೂಲ ಮತ್ತು ಅದರಿಂದ ವಿಮೋಚನೆ ಗೊಳ್ಳುವ ಕುರಿತು ವಿವರಿಸಿದರು. ''ಚಿಂತನೆಯಲ್ಲಿರುವ ಮೌಢ್ಯವನ್ನು ತೊಲಗಿಸಿದರೆ ಆಚರಣೆಗಳಲ್ಲಿರುವ ಮೌಢ್ಯಗಳು ಕಡಿಮೆಯಾಗುತ್ತವೆ. ಮಠಮಾನ್ಯಗಳು ಮೌಢ್ಯದಿಂದ ಮುಕ್ತಗೊಳ್ಳಬೇಕು. ಅವು ಜಾತಿಕೇಂದ್ರಗಳಾಗದೆ ಧರ್ಮಕೇಂದ್ರಗಳಾಗಿಯೇ ಉಳಿಯಬೇಕು. ಅಧಿಕಾರದ ಕೇಂದ್ರಗಳೂ ಇದಕ್ಕೆ ಹೊರತಲ್ಲ. ಸಂವಿಧಾನ ಬಹುತ್ವವನ್ನು ಪ್ರತಿಪಾದಿಸುತ್ತದೆ. ನಾವು ವೈಯಕ್ತಿಕತೆಯನ್ನು ಬದಿಗಿರಿಸಿ ಇದನ್ನು ಗೌರವಿಸಬೇಕು'', ಎಂದು ಪ್ರತಿಪಾದಿಸಿದರು.
ಮೌಢ್ಯದಲ್ಲಿ ಶೋಷಣೆ ಇದೆ. ಮೇಲು ಕೀಳು ಇದೆ. ಇದನ್ನು ತೊಡೆದು ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು. ಮಾನವ ಬಂಧುತ್ವ ವೇದಿಕೆ ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ ಕೆಲಸ.
- ಎಚ್.ಎನ್. ನಾಗಮೋಹನ ದಾಸ್, ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ