ಲೋಂಡಾ: ಗುಂಜಿ ಅರಣ್ಯದ ಹರೂರಿ ಗ್ರಾಮದ ಬಳಿ ಸೋಮವಾರ ಚಲಿಸುತ್ತಿದ್ದ ರೈಲು ಅಪ್ಪಳಿಸಿದ ಪರಿಣಾಮ ಕಾಡುಕೋಣವೊಂದು ಸ್ಥಳದಲ್ಲೇ ಮೃತಪಟ್ಟಿದೆ. ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪಶುಸಂಗೋಪನೆ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾಡುಕೋಣದ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದರು. ಬಳಿಕ ಹರೂರಿ ಅರಣ್ಯದಲ್ಲಿಇಲಾಖೆಯ ನಿಯಮಾನುಸಾರ ಅಂತ್ಯಕ್ರಿಯೆ ನಡೆಸಲಾಗಿದೆ. ಘಟನೆ ಕುರಿತು ಲೋಂಡಾ ವಲಯ ಅರಣ್ಯ ಅಧಿಕಾರಿಗಳ ಕಚೇರಿಯಲ್ಲಿಪ್ರಕರಣ ದಾಖಲಾಗಿದೆ ಎಂದು ಆರ್ಎಫ್ಒ ಪ್ರಶಾಂತ ಗೌರಾಣಿ ತಿಳಿಸಿದ್ದಾರೆ.
ರೈಲಿಗೆ ಸಿಲುಕಿ ಕಾಡುಕೋಣ ಸಾವು
ಲೋಂಡಾ: ಗುಂಜಿ ಅರಣ್ಯದ ಹರೂರಿ ಗ್ರಾಮದ ಬಳಿ ...
Vijaya Karnataka 17 Mar 2020, 5:00 am