ಆ್ಯಪ್ನಗರ

ಲಾರಿಯಿಂದ ಬಿದ್ದು ಸಾವು

ಲಾರಿಗೆ ತಾಡಪತ್ರಿ ಕಟ್ಟುತ್ತಿದ್ದ ವ್ಯಕ್ತಿ ರಭಸದ ಮಳೆ-ಗಾಳಿಗೆ ಕೆಳಗೆ ಬಿದ್ದು ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲೂಕಿನ ನಾವಗೆ ಗ್ರಾಮದಲ್ಲಿ ಶನಿವಾರ ನಡೆದಿದೆ...

Vijaya Karnataka 29 Apr 2019, 5:00 am
ಬೆಳಗಾವಿ: ಲಾರಿಗೆ ತಾಡಪತ್ರಿ ಕಟ್ಟುತ್ತಿದ್ದ ವ್ಯಕ್ತಿ ರಭಸದ ಮಳೆ-ಗಾಳಿಗೆ ಕೆಳಗೆ ಬಿದ್ದು ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲೂಕಿನ ನಾವಗೆ ಗ್ರಾಮದಲ್ಲಿ ಶನಿವಾರ ನಡೆದಿದೆ.
Vijaya Karnataka Web death falling from lorry
ಲಾರಿಯಿಂದ ಬಿದ್ದು ಸಾವು


ಕೊಲ್ಲಾಪುರ ಮೂಲದ ರಾಜೇಂದ್ರ ಶಾಮರಾವ್‌ ಪವಾರ (45) ಮೃತವ್ಯಕ್ತಿ.

ಗಾಳಿ ಬೀಸಿದಾಗ ಲಾರಿಯಲ್ಲಿದ್ದ ಸಾಮಗ್ರಿಗಳು ತೋಯ್ದು ಹೋಗುತ್ತವೆಂದು ಗಾಡಿ ನಿಲ್ಲಿಸಿ ಮೇಲಕ್ಕೆ ಹತ್ತಿ ತಾಡಪತ್ರಿ ಹೊದಿಸುತ್ತಿದ್ದರು. ಈ ವೇಳೆ ಗಾಳಿಯ ರಭಸಕ್ಕೆ ಆಯ ತಪ್ಪಿ ಬಿದ್ದು ಮೃತಪಟ್ಟಿದ್ದಾರೆ ಎಂದು ಬೆಳಗಾವಿ ಗ್ರಾಮೀಣ ಪೊಲೀಸರು ತಿಳಿಸಿದ್ದಾರೆ.

ವಿದ್ಯುತ್‌ ತಗುಲಿ ಸಾವು :
ಬೆಳಗಾವಿ: ವಿದ್ಯುತ್‌ ಶಾಕ್‌ನಿಂದ ಹೆಸ್ಕಾಂನ ಪವರ್‌ಮನ್‌ ಮೃತಪಟ್ಟಿದ್ದಾರೆ.

ಬಿ.ಕೆ. ಕಂಗ್ರಾಳಿ ಗ್ರಾಮದ ಚೇತನ ವಿಷ್ಣು ಕಡೋಲ್ಕರ್‌ (29) ಮೃತ ವ್ಯಕ್ತಿ. ವಿದ್ಯುತ್‌ ಪರಿವರ್ತಕ ಜೋಡಣೆ ಮಾಡುತ್ತಿದ್ದಾಗ ಆಕಸ್ಮಿಕವಾಗಿ ವಿದ್ಯುತ್‌ ತಗುಲಿ ಮೃತಪಟ್ಟಿದ್ದಾರೆ ಎಂದು ಗ್ರಾಮೀಣ ಪೊಲೀಸರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ