ಆ್ಯಪ್ನಗರ

ಬಾಲಕ ಸಾವು, ಡೆಂಗೆ ಶಂಕೆ

ನಿಪ್ಪಾಣಿ: ಇಲ್ಲಿನ ಚಿಮಗಾಂವಕರ ಗಲ್ಲಿಯ 11 ವರ್ಷದ ಬಾಲಕ ...

Vijaya Karnataka 17 Mar 2020, 5:00 am
ನಿಪ್ಪಾಣಿ: ಇಲ್ಲಿನ ಚಿಮಗಾಂವಕರ ಗಲ್ಲಿಯ 11 ವರ್ಷದ ಬಾಲಕ ಆಸೀಮ ಮೊಹಸೀನ ಬಾಗವಾನ ಸೋಮವಾರ ಶಂಕಿತ ಡೆಂಗೆ ಜ್ವರದಿಂದ ಬಳಲಿ ಸಾವಿಗೀಡಾಗಿದ್ದಾನೆ. ಈ ಘಟನೆಯಿಂದ ಸ್ಥಳೀಯರಲ್ಲಿಭೀತಿಯ ವಾತಾವರಣ ಸೃಷ್ಟಿಯಾಗಿದೆ.
Vijaya Karnataka Web death of a boy suspected dengue
ಬಾಲಕ ಸಾವು, ಡೆಂಗೆ ಶಂಕೆ


ಕಳೆದ ಗುರುವಾರವೇ ಬಾಲಕನಿಗೆ ಜ್ವರ ಕಂಡುಬಂದಿದ್ದು, ಖಾಸಗಿ ಆಸ್ಪತ್ರೆಯಲ್ಲಿಚಿಕಿತ್ಸೆ ನಡೆದಿತ್ತು. ಆದರೆ ವೈದ್ಯರು ಬಾಲಕನನ್ನು ಕೊಲ್ಲಾಪುರಕ್ಕೆ ಸ್ಥಳಾಂತರಿಸಲು ಸೂಚಿಸಿದ್ದರಿಂದ ಆತನನ್ನು ಕೊಲ್ಲಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಬಾಲಕ ಸೋಮವಾರ ಬೆಳಗ್ಗೆ ಮೃತಪಟ್ಟಿದ್ದಾನೆ.

ಈ ಕುರಿತು ತಾಲೂಕು ವೈದ್ಯಾಧಿಕಾರಿ ಡಾ. ವಿ.ವಿ. ಶಿಂಧೆ ಅವರನ್ನು ಸಂಪರ್ಕಿಸಿದಾಗ ''ಬಾಲಕನ ಸಾವಿನ ಕುರಿತು ಯಾವುದೇ ನಿಖರ ವರದಿ ಸಿಕ್ಕಿಲ್ಲ. ಕೊಲ್ಲಾಪುರದ ಖಾಸಗಿ ಆಸ್ಪತ್ರೆಯ ವರದಿ ಪರಿಶೀಲನೆ ನಂತರವೇ ಸಾವಿನ ಕುರಿತು ಪತ್ತೆಯಾಗಲಿದೆ. ಮಂಗಳವಾರ ಆರೋಗ್ಯ ಇಲಾಖೆಯ ಅಧಿಕಾರಿಗಳು ಕೊಲ್ಲಾಪುರಕ್ಕೆ ತೆರಳಿ ಪರಿಶೀಲನೆ ನಡೆಸಲಿದ್ದಾರೆ'', ಎಂದು ತಿಳಿಸಿದರು.

ಇಡಿ ನಗರದ ಕೊಳಕು, ತ್ಯಾಜ್ಯ ವಸ್ತುಗಳು, ಚರಂಡಿ ನೀರು ಬಾಗವಾನ ಹಳ್ಳದಲ್ಲಿಹರಿಯುತ್ತದೆ. ಎರಡೂವರೆ ವರ್ಷದಿಂದ ಬಾಗವಾನ ಹಳ್ಳ ಮತ್ತು ಪರಿಸರವನ್ನು ಸ್ವಚ್ಛಗೊಳಿಸದ ಪರಿಣಾಮ ಬಾಲಕ ಶಂಕಿತ ಡೆಂಗೆಗೆ ಬಲಿಯಾಗಿದ್ದಾನೆ.
- ಜುಬೇರ ಬಾಗವಾನ. ನಗರಸಭೆ ಮಾಜಿ ಸದಸ್ಯ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ