ಆ್ಯಪ್ನಗರ

ಸುಟ್ಟಟ್ಟಿ: ವಿದ್ಯುತ್‌ ಅರ್ಥಿಂಗ್‌ ತಂತಿ ತಗುಲಿ ಎಮ್ಮೆ ಸಾವು

ಕುಡಚಿ: ರಾಯಬಾಗ ತಾಲೂಕಿನ ಸುಟ್ಟಟ್ಟಿ ಗ್ರಾಮದಲ್ಲಿ ವಿದ್ಯುತ್‌ ಅರ್ಥಿಂಗ್‌ ತಂತಿ ...

Vijaya Karnataka 31 Jul 2019, 5:00 am
ಕುಡಚಿ : ರಾಯಬಾಗ ತಾಲೂಕಿನ ಸುಟ್ಟಟ್ಟಿ ಗ್ರಾಮದಲ್ಲಿ ವಿದ್ಯುತ್‌ ಅರ್ಥಿಂಗ್‌ ತಂತಿ ತಗುಲಿ ಎಮ್ಮೆಯೊಂದು ಮಂಗಳವಾರ ಅಸು ನೀಗಿದೆ.
Vijaya Karnataka Web BLG-3007-2-52-30KUDACHI 2


ಬಾಯವ್ವ ವಡ್ಡರ ಅವರಿಗೆ ಸೇರಿದ ಎಮ್ಮೆ ಮೇಯುತ್ತ ಸಾಗಿದಾಗ ರಸ್ತೆ ಪಕ್ಕದಲ್ಲಿರುವ ಟಿಸಿಯ ಅರ್ಥಿಂಗ್‌ ತಂತಿ ತಗುಲಿ ಈ ಅವಘಡ ಸಂಭವಿಸಿತು.

ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಹೆಸ್ಕಾಂ ಸೆಕ್ಷನ್‌ ಅಧಿಕಾರಿ ಹಿರೇಗೌಡ, ಪಶು ವೈದ್ಯಾಧಿಕಾರಿ ಡಾ. ಪ್ರದೀಪ ಮಳವಾಡ, ಪೊಲೀಸ್‌ ಸಿಬ್ಬಂದಿ ಎಲ್‌.ವಿ. ಹಣಜಿ, ಗ್ರಾಪಂ ಅಧ್ಯಕ್ಷ ಜೈವೀರ ಬಾಲೋಜಿ ಸೇರಿ ವಿವಿಧ ಮುಖಂಡರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.

ಗ್ರಾಮದ ನಾಗರಿಕರು, ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಸೂಕ್ತ ಕ್ರಮ ಕೈಗೊಳ್ಳುವಂತೆ ಪರಷುರಾಮ ಕೋಳೆಕರ, ರಾಮ ಖಿದ್ರಾಪುರೆ, ಕುಮಾರ ಸಾಲೋಟಗಿ ಮುಂತಾದವರು ಒತ್ತಾಯಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ