ಆ್ಯಪ್ನಗರ

ಹಳ್ಳದ ನೀರಿನಲ್ಲಿಕೊಚ್ಚಿಹೋಗಿ ವ್ಯಕ್ತಿ ಸಾವು

ರಾಮದುರ್ಗ: ಪಟ್ಟಣದ ಸಮೀಪದ ರಂಕಲಕೊಪ್ಪ ಗ್ರಾಮದ ...

Vijaya Karnataka 22 Oct 2019, 5:00 am
ರಾಮದುರ್ಗ: ಪಟ್ಟಣದ ಸಮೀಪದ ರಂಕಲಕೊಪ್ಪ ಗ್ರಾಮದ ಬಳಿ ಸೋಮವಾರ ಹಳ್ಳ ದಾಟುತ್ತಿದ್ದ ವ್ಯಕ್ತಿಯೊಬ್ಬರು ನೀರಿನಲ್ಲಿಕೊಚ್ಚಿಹೋಗಿ ಮೃತಪಟ್ಟಿದ್ದಾರೆ.
Vijaya Karnataka Web death of a man washed away in the water of the river
ಹಳ್ಳದ ನೀರಿನಲ್ಲಿಕೊಚ್ಚಿಹೋಗಿ ವ್ಯಕ್ತಿ ಸಾವು


ಹಳೇ ತೋರಗಲ್ಲಗ್ರಾಮದ ಅಲ್ಲಾಭಕ್ಷ ಹುದ್ದಾರ (55) ಮೃತ ವ್ಯಕ್ತಿ.

ಅಲ್ಲಾಭಕ್ಷ ಅವರು ರಾಮದುರ್ಗ ಪಟ್ಟಣದಿಂದ ಹಳ್ಳ ದಾಟಿ ತೋರಗಲ್ಲಗ್ರಾಮಕ್ಕೆ ಹೋಗುವಾಗ ಈ ದುರ್ಘಟನೆ ಸಂಭವಿಸಿದೆ. ಮಲಪ್ರಭಾ ನದಿಗೆ ಜಲಾಶಯದಿಂದ ಭಾರಿ ಪ್ರಮಾಣದ ನೀರು ಬಿಟ್ಟಿದ್ದರಿಂದ ರಂಕಲಕೊಪ್ಪ ಬಳಿಯ ಹಳ್ಳದಲ್ಲೂನೀರಿನ ಹರಿವು ಹೆಚ್ಚಿತ್ತು.

ಅಲ್ಲಾಭಕ್ಷ ಹಳ್ಳದ ನೀರಿನಲ್ಲಿಕೊಚ್ಚಿಹೋದ ಮಾಹಿತಿ ತಿಳಿಯುತ್ತಿದ್ದಂತೆ ಪತ್ತೆ ಕಾರ್ಯಾಚರಣೆ ನಡೆಸಲಾಗಿತ್ತು. ಸಂಜೆ ಅವರ ಮೃತ ದೇಹ ಪತ್ತೆಯಾಗಿದೆ. ಕಟಕೋಳ ಪೊಲೀಸ್‌ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ