ಆ್ಯಪ್ನಗರ

ಬೆಳಗಾವಿ ತಾಲೂಕಿನ ದೇಸೂರು ಬಳಿ ಶುಕ್ರವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ಅಕ್ಕ-ತಮ್ಮ ಸಾವು

ಬೆಳಗಾವಿ: ತಾಲೂಕಿನ ದೇಸೂರು ಗ್ರಾಮದ ಬಳಿ ...

Vijaya Karnataka 14 Nov 2020, 5:00 am
ಬೆಳಗಾವಿ: ತಾಲೂಕಿನ ದೇಸೂರು ಗ್ರಾಮದ ಬಳಿ ಶುಕ್ರವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ಸಹೋದರ ಹಾಗೂ ಸಹೋದರಿ ಮೃತಪಟ್ಟಿದ್ದಾರೆ.
Vijaya Karnataka Web 13BGM1073654
ದೇಸೂರ ಗ್ರಾಮದ ಬಳಿ ಬೈಕ್‌ ಮತ್ತು ಲಾರಿ ಮಧ್ಯೆ ಶುಕ್ರವಾರ ಅಪಘಾತ ಸಂಭವಿಸಿರುವುದು.


ದೇಸೂರ ಗ್ರಾಮದ ರೇಣುಕಾ ರಮೇಶ ತೇಗೂರ (26) ಹಾಗೂ ಕಲ್ಮೇಶ್‌ ಕರೆಪ್ಪ ಕೊರವಿ(18) ಮೃತಪಟ್ಟವರು.

ದೇಸೂರಿನ ಗ್ಯಾಸ್‌ ಡಿಪೋದಲ್ಲಿ ಕೆಲಸ ಮಾಡುತ್ತಿದ್ದ ಇವರು ಕಮಲ ನಗರದಿಂದ ಬೈಕ್‌ನಲ್ಲಿತೆರಳುತ್ತಿದ್ದಾಗ ಲಾರಿ ಓವರ್‌ಟೇಕ್‌ ಮಾಡುವ ಸಂದರ್ಭದಲ್ಲಿ ನಿಯಂತ್ರಣ ತಪ್ಪಿದ ಬೈಕ್‌ ಲಾರಿಗೆ ಡಿಕ್ಕಿ ಹೊಡದಿದೆ. ಇಬ್ಬರೂ ಲಾರಿಯ ಚಕ್ರಗಳ ಅಡಿ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅವರ ಕುಟುಂಬದ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿತ್ತು. ಬೆಳಗಾವಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ