ಆ್ಯಪ್ನಗರ

ಟ್ರಕ್‌ ಹಾಯ್ದು ಯುವಕ ಸಾವು

ಬೈಲಹೊಂಗಲ : ತಾಲೂಕಿನ ಹೊಳಿಹೊಸೂರ ಗ್ರಾಮದ ಹೊರವಲಯದಲ್ಲಿ ಬೋರ್‌ವೆಲ್‌ ಟ್ರಕ್‌ ಹಾಯ್ದು ಯುವಕನೊಬ್ಬ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ...

Vijaya Karnataka 7 May 2019, 5:00 am
ಬೈಲಹೊಂಗಲ : ತಾಲೂಕಿನ ಹೊಳಿಹೊಸೂರ ಗ್ರಾಮದ ಹೊರವಲಯದಲ್ಲಿ ಬೋರ್‌ವೆಲ್‌ ಟ್ರಕ್‌ ಹಾಯ್ದು ಯುವಕನೊಬ್ಬ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
Vijaya Karnataka Web death of a young man in accident
ಟ್ರಕ್‌ ಹಾಯ್ದು ಯುವಕ ಸಾವು


ಛತ್ತೀಸಗಡ ರಾಜ್ಯದ ಕೊಂಡಗಾಂವ ಜಿಲ್ಲೆಯ ಖರನಪೂರ ಗ್ರಾಮದ ಕುಡಿರಾಮ ಚೇತನ ಬಿಗೇಲ್‌ (20) ಮೃತ ಯುವಕ. ಬೋರ್‌ವೆಲ್‌ ಕೊರೆಯುವ ಕೆಲಸ ಭಾನುವಾರ ರಾತ್ರಿ 2ಕ್ಕೆ ಮುಗಿದಿತ್ತು. ನಂತರ 4ಕ್ಕೆ ಚಾಲಕ ಟ್ರಕ್‌ ಅನ್ನು ರಿವರ್ಸ್‌ (ಹಿಂದೆ) ತೆಗೆದುಕೊಂಡು ಮುಂದೆ ಹೋದ ಸಂದರ್ಭದಲ್ಲಿ ಟ್ರಕ್‌ ಹಿಂದೆ ಮಲಗಿದ್ದ ಕುಡಿರಾಮನ ಮೇಲೆ ಹಾಯ್ದಿದೆ. ಟ್ರಕ್‌ನ ಕಿನ್ನರ್‌ ಆಗಿ ಕೆಲಸ ಮಾಡುತ್ತಿದ್ದ ಕುಡಿರಾಮ ರಾತ್ರಿ ಕೆಲಸ ಮುಗಿಸಿ ಟ್ರಕ್‌ ಹಿಂದೆ ಮಲಗಿದ್ದ. ಚಾಲಕನಿಗೆ ಆತ ಮಲಗಿದ್ದು ಗೊತ್ತಿರಲಿಲ್ಲವೆಂದು ಪೊಲೀಸರು ತಿಳಿಸಿದ್ದಾರೆ. ಬೈಲಹೊಂಗಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

2 ಲಕ್ಷ ರೂ. ನಗದು, ಲ್ಯಾಪ್‌ಟಾಪ್‌ ಕಳ್ಳತನ
ಬೈಲಹೊಂಗಲ : ಪಟ್ಟಣದ ಕಾಮತ್‌ ಕಾಂಪ್ಲೆಕ್ಸ್‌ ಎದುರು ನಿಲ್ಲಿಸಿದ್ದ ಕಾರ್‌ನಲ್ಲಿ ಇಡಲಾಗಿದ್ದ 2 ಲಕ್ಷ ರೂ. ನಗದು ಹಾಗೂ ಲ್ಯಾಪ್‌ಟಾಪ್‌ ಕಳ್ಳತನ ಮಾಡಿ, ಕಳ್ಳರು ಪರಾರಿಯಾದ ಘಟನೆ ಸೋಮವಾರ ಹಾಡಹಗಲೇ ನಡೆದಿದೆ.

ಇಲ್ಲಿಯ ವಿದ್ಯಾನಗರದ ನಿವಾಸಿ, ಎಂಜನಿಯರ್‌ ಸೊಲಬಯ್ಯ ಸೋಮಯ್ಯ ಹಿರೇಮಠ ಅವರಿಗೆ ಸೇರಿದ ಹಣ, ಲ್ಯಾಪ್‌ಟಾಪ್‌ ಕಳುವಾಗಿದೆ. ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದಲ್ಲಿ 2 ಲಕ್ಷ ರೂ. ಡ್ರಾ ಮಾಡಿಕೊಂಡು ಕಾರ್‌ನಲ್ಲಿ ಇಡಲಾಗಿತ್ತು. ಕಾರ್‌ ಹಿಂದಿನ ಗಾಲಿ ಪಂಚರ್‌ ಆಗಿದ್ದರಿಂದ ಗಾಲಿ ಬದಲಾಯಿಸುವ ಸಂದರ್ಭದಲ್ಲಿ ಕಳ್ಳರು ಏಕಾಏಕಿ ಪಲ್ಸರ್‌ ಬೈಕ್‌ನಲ್ಲಿ ಬಂದು ಕಾರ್‌ನಲ್ಲಿದ್ದ ನಗದು, ಲ್ಯಾಪ್‌ಟಾಪ್‌ ಕಳ್ಳತನ ಮಾಡಿದ್ದಾರೆ. ಬೈಲಹೊಂಗಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ