ಆ್ಯಪ್ನಗರ

ಅಪಘಾತ: ಬೈಕ್‌ ಸವಾರ ಸಾವು

ಬೈಲಹೊಂಗಲ : ಸಮೀಪದ ಚಿಕ್ಕಬಾಗೇವಾಡಿ ಗ್ರಾಮದ ಪ್ರಮುಖ ...

Vijaya Karnataka 16 Mar 2020, 5:00 am
ಬೈಲಹೊಂಗಲ : ಸಮೀಪದ ಚಿಕ್ಕಬಾಗೇವಾಡಿ ಗ್ರಾಮದ ಪ್ರಮುಖ ರಸ್ತೆಯಲ್ಲಿಅಪರಿಚಿತ ವಾಹನವೊಂದು ಎದುರಿಗೆ ಬರುತ್ತಿದ್ದ ಮೋಟಾರ್‌ ಸೈಕಲ್‌ಗೆ ಡಿಕ್ಕಿಯಾಗಿ ಬೈಕ್‌ ಸವಾರ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ.
Vijaya Karnataka Web death of bike rider in accident
ಅಪಘಾತ: ಬೈಕ್‌ ಸವಾರ ಸಾವು


ಬೈಕ್‌ ಹಿಂದೆ ಕುಳಿತಿದ್ದ ಇನ್ನೊಬ್ಬ ಯುವಕ ಗಂಭೀರವಾಗಿ ಗಾಯಗೊಂಡಿದ್ದಾನೆ. ತಾಲೂಕಿನ ನಾವಲಗಟ್ಟಿ ಗ್ರಾಮದ ಈರಣಗೌಡ ಮರಿಗೌಡ ಪಾಟೀಲ (30) ಮೃತ ವ್ಯಕ್ತಿ. ಶಿವಾನಂದ (ಮಡಿವಾಳಪ್ಪ) ಪ್ರಕಾಶ ತೋರಣಗಟ್ಟಿ (26) ಗಂಭೀರ ಗಾಯಗೊಂಡಿದ್ದು, ಆತನನ್ನು ಚಿಕಿತ್ಸೆಗಾಗಿ ಬೆಳಗಾವಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೈಕ್‌ ಸವಾರ ಬೆಳಗಾವಿಯಿಂದ ನಾವಲಗಟ್ಟಿಗೆ ಬರುತ್ತಿದ್ದಾಗ, ಬೈಲಹೊಂಗಲದಿಂದ ಬೆಳಗಾವಿಗೆ ಹೋಗುತ್ತಿದ್ದ ಅಪರಿಚಿತ ವಾಹನ ಡಿಕ್ಕಿಯಾಗಿದೆ. ವಾಹನ ಜಪ್ತಿಗಾಗಿ ಪೊಲೀಸರು ಜಾಲ ಬೀಸಿದ್ದಾರೆ. ಬೈಲಹೊಂಗಲ ಪೊಲೀಸ್‌ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ